18 ರಿಂದ 35 ವರ್ಷಗಳ ವಯೋಮಿತಿಯವರಿಗೆ ಮಾತ್ರ ಅವಕಾಶ.
ಯುವಜನರನ್ನು ಕನ್ನಡ ಅಕ್ಷರ ಲೋಕದೆಡೆಗೆ ಆಕರ್ಷಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಸೀತಾ ಬುಕ್ ಸೆಂಟರ್ ಉಡುಪಿ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
“ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರ” ಎಂಬ ವಿಷಯದ ಮೇಲೆ ಬರಹಗಳನ್ನು ಕಳುಹಿಸಬೇಕು.
ನಿಯಮಗಳು
-750 ಪದಗಳನ್ನು ಮೀರದಂತೆ ಬರಹ ಇರಬೇಕು. ಬರಹದಲ್ಲಿ ಸ್ಪಷ್ಟತೆ ಇರಬೇಕು.

-ನುಡಿ ಅಥವಾ ಬರಹದಲ್ಲಿ ಟೈಪ್ ಮಾಡಿ ಅದನ್ನು ಇ-ಮೇಲ್ ಮೂಲಕ ಕಳುಹಿಸಬೇಕು. ಫಾಂಟ್ ಸೈಜ್ 14 ಇರಬೇಕು. 1.5 ಪೇಜ್ ಸೆಟ್ ಅಪ್ ಇರಬೇಕು. ಪರಾಮರ್ಶನ ಗ್ರಂಥಗಳನ್ನು ಕೂಡ ಉಲ್ಲೇಖಿಸಬಹುದು. ಅಡಿ ಟಿಪ್ಪಣಿ ಮತ್ತು ಕೊನೆ ಟಿಪ್ಪಣಿ ಇದ್ದರೆ ಉತ್ತಮ.
-ಭಾಷಾ ತಜ್ಞರು ಉತ್ತಮವಾಗಿ ಬರೆದ 5 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ.
-ನಿರ್ಣಾಯಕರ ತೀರ್ಮಾನವೇ ಅಂತಿಮ.
-ಇಮೇಲ್ ಕಳುಹಿಸಲು ಕೊನೆಯ ದಿನಾಂಕ ನ.15
-ಲೇಖಕರು ತಮ್ಮ sslc ಅಂಕ ಪಟ್ಟಿಯ ಚಿತ್ರ, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ, ಕಳುಹಿಸಬೇಕು. ಲೇಖಕರ ಪೂರ್ತಿ ಹೆಸರು ಮತ್ತು ತಾಲೂಕಿನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಲೇಖನದಲ್ಲಿ ಒಳಗೊಂಡಿರಬೇಕು.
-ಬರಹ ಕಳುಹಿಸಲು ಇ-ಮೇಲ್: ganeshprasadsys@gmail.com
-ಸಂಪರ್ಕ : 9535276757 / 9880811036















































































