Author name: Newskarkala Desk

ನ್ಯಾಯ ದೊರೆಯುವ ನಂಬಿಕೆ ಇಲ್ಲ- ಸತ್ಯಾಗ್ರಹಕ್ಕೆ ಕೂರುತ್ತೇನೆ : ಕೇಜ್ರಿವಾಲ್‌ ಸವಾಲ್ ಪತ್ರ

ನವದೆಹಲಿ : ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ವಿಚಾರಣೆ ಎದುರಿಸುತ್ತಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಸಂಬಂಧಿಸಿದಂತೆ ಹೊಸದೊಂದು ತಗಾದೆ ತೆಗೆದಿದ್ದಾರೆ. ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠ ಈ ವಿಚಾರಣೆ ನಡೆಸುವುದನ್ನು ಆಕ್ಷೇಪಿಸಿದ್ದ ಕೇಜ್ರಿವಾಲ್ ಅವರು ಆಗ ಹಿನ್ನಡೆ ಅನುಭವಿಸಿದ್ದರು. ತೀರ್ಪು ನೀಡಿದ್ದ ಕೋರ್ಟ್ ಸ್ವರ್ಣ ಕಾಂತ ಶರ್ಮಾ ಅವರ ನೇತೃತ್ವದಲ್ಲಿಯೇ ವಿಚಾರಣೆ ನಡೆಸುವುದಾಗಿ ಘೋಷಣೆ ಮಾಡಿತ್ತು.‌ಇದೀಗ ಅರವಿಂದ್ […]

ನ್ಯಾಯ ದೊರೆಯುವ ನಂಬಿಕೆ ಇಲ್ಲ- ಸತ್ಯಾಗ್ರಹಕ್ಕೆ ಕೂರುತ್ತೇನೆ : ಕೇಜ್ರಿವಾಲ್‌ ಸವಾಲ್ ಪತ್ರ Read More »

ಬೀಗ ಹಾಕಿದ ಮನೆಯಲ್ಲಿ ಕಳ್ಳತನ; 2.64 ಲಕ್ಷ ಮೌಲ್ಯದ ಚಿನ್ನಾಭರಣ ಅಪಹರಣ

ಕಾರ್ಕಳ: ತಾಲ್ಲೂಕಿನ ಕಸಬಾ ಗ್ರಾಮದ ಅಯ್ಯಪ್ಪನಗರ ನಿವಾಸಿಯೊಬ್ಬರ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.​ಇಲ್ಲಿನ ನಿವಾಸಿ ಶಂಕರ ಕುಲಾಲ್ (49) ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 2.64 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ.​ಘಟನೆಯ ವಿವರ:​ಶಂಕರ ಕುಲಾಲ್ ಅವರು ಏಪ್ರಿಲ್ 23ರಂದು ಬೆಳಿಗ್ಗೆ 9:10ಕ್ಕೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಏಪ್ರಿಲ್ 24ರಂದು ಸಂಜೆ 6:00 ಗಂಟೆಗೆ ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಬೀಗ ಹಾಕಿದ ಮನೆಯಲ್ಲಿ ಕಳ್ಳತನ; 2.64 ಲಕ್ಷ ಮೌಲ್ಯದ ಚಿನ್ನಾಭರಣ ಅಪಹರಣ Read More »

ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್‌ಚಂದ್ರ

ನಿಟ್ಟೆ ಅಪಘಾತದಲ್ಲಿ ಸಾವಿಗೀಡಾದ ಅಮಾಯಕ – ಪುತ್ರಿಯೂ ಗಂಭೀರ ಉಡುಪಿ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಬಳಿ ಎ. 24ರಂದು ಸಂಭವಿಸಿದ ಅಪಘಾತದಲ್ಲಿ ನಿಧನರಾದ ಬಜಕಳ ನವೀನ್‌ಚಂದ್ರ ಮೂಲ್ಯರ ಗೃಹಪ್ರವೇಶ ಮೇ 6ರಂದು ನಿಗದಿಯಾಗಿತ್ತು. ವೆಲ್ಡರ್‌ ಆಗಿದ್ದ ನವೀನ್‌ಚಂದ್ರ ಕುಟುಂಬ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು ಇತ್ತೀಚೆಗೆ ನೂತನ ಮನೆ ನಿರ್ಮಾಣ ಮಾಡಿದ್ದರು. ಕಷ್ಟಪಟ್ಟು ಕಟ್ಟಿದ ಮನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮೇ 6ರಂದು ಗೃಹಪ್ರವೇಶದ ಸಂಭ್ರಮಕ್ಕೆ ಅಣಿಯಾಗಿತ್ತು. ಆದರೆ, ವಿಧಿಲಿಖಿತ ಬೇರೆಯೇ ಆಗಿತ್ತು. ನವೀನ್‌ಚಂದ್ರ

ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್‌ಚಂದ್ರ Read More »

ಗೂಂಡಾ ಕಾಯ್ದೆಯಡಿ ಗರುಡ ಗ್ಯಾಂಗ್‌ನ ಸದಸ್ಯ ಅಲ್ಫಾಝ್ ಬಂಧನ

ಉಡುಪಿ : ರೌಡಿ ಶೀಟರ್, ಗರುಡ ಗ್ಯಾಂಗ್‌ನ ಸದಸ್ಯ ಕಿರಿಮಂಜೇಶ್ವರ ಅರೆಹೊಳೆ ಕ್ರಾಸ್‌ನ ಅಲ್ಫಾಝ್‌ (25) ನನ್ನು ಬೈಂದೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಉಡುಪಿ ಎಸ್‌ಪಿ ಡಾ. ಹರಿರಾಂ ಶಂಕರ್ ಅವರ ವರದಿಯ ಮೇರೆಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎ.24ರಂದು ಈ ಆದೇಶ ಹೊರಡಿಸಿದ್ದಾರೆ.ಅಲ್ಫಾಝ್‌ ಹೆಸರಲ್ಲಿ ಉಡುಪಿ ಜಿಲ್ಲೆಯ ಶಿರ್ವ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ

ಗೂಂಡಾ ಕಾಯ್ದೆಯಡಿ ಗರುಡ ಗ್ಯಾಂಗ್‌ನ ಸದಸ್ಯ ಅಲ್ಫಾಝ್ ಬಂಧನ Read More »

ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ

ಕಾರ್ಕಳ: ಮಿಯ್ಯಾರಿನ ಕಾರೋಲ್ ಗುಡ್ಡೆ ಪ್ರಸಿದ್ಧ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 26ರ ಭಾನುವಾರ ಸಂಜೆ 4 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ.​ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಈ ಮೆರವಣಿಗೆಯು ಸಾಂಪ್ರದಾಯಿಕ ಕಲೆಗಳು ಹಾಗೂ ವಾದ್ಯಗೋಷ್ಠಿಗಳೊಂದಿಗೆ ಸಾಗಲಿದ್ದು, ಭಕ್ತರು ಸಮರ್ಪಿಸುವ ದವಸ-ಧಾನ್ಯಗಳ ಹೊರೆಕಾಣಿಕೆಯು ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳಿಗೆ ಬಳಕೆಯಾಗಲಿದೆ.​ಗಣ್ಯರ ಉಪಸ್ಥಿತಿ:ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಗಣಪತಿ ಹೆಗ್ಡೆ

ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ Read More »

ಎ. 25 : ಹೊಸ್ಮಾರು-ನೆಲ್ಲಿಕಾರು ಭಾಗದಲ್ಲಿ ವಿದ್ಯುತ್‌ ವ್ಯತ್ಯಯ

ಕಾರ್ಕಳ : 33/11 ಕೆವಿ ಬಜಗೋಳಿ ವಿದ್ಯುತ್‌ ಕೇಂದ್ರದಿಂದ ಹೊರಡುವ 11ಕೆವಿ ಹೊಸ್ಮಾರು, ನೆಲ್ಲಿಕಾರು ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಎ. 25ರಂದು ಬೆಳಿಗ್ಗೆ 9ರಿಂದ ಅಪರಾಹ್ನ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಹೀಗಾಗಿ ನೆಲ್ಲಿಕಾರು, ಚಂಡೆ ಬಸದಿ, ಪುಚ್ಚಬೆಟ್ಟು, ಜ್ಯೋತಿ ನಗರ, ನಲ್ಲೂರು ಪೇರಲ್ಕೆ, ಪೆರ್ನೊಡಿ, ಹೊಸ್ಮಾರು ಟೌನ್, ಈದು, ನೂರಾಳ್ ಬೆಟ್ಟು ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಎ. 25 : ಹೊಸ್ಮಾರು-ನೆಲ್ಲಿಕಾರು ಭಾಗದಲ್ಲಿ ವಿದ್ಯುತ್‌ ವ್ಯತ್ಯಯ Read More »

ಮೇ 1 ರಿಂದ ‘ದ ಪೆಟ್ ಶಾಪ್’ ಮತ್ತು ‘ಐಕ್ಯ ಫುಟ್‌ವೇರ್’ ಶುಭಾರಂಭ

ಕಾರ್ಕಳ: ಸ್ಥಳೀಯ ಬೈಪಾಸ್ ಸರ್ಕಲ್ ಬಳಿ ಮೇ 1 ರಿಂದ ಸಾಕುಪ್ರಾಣಿಗಳ ವೈವಿಧ್ಯಮಯ ಲೋಕ ‘ದ ಪೆಟ್ ಶಾಪ್’ ಹಾಗೂ ಪಾದರಕ್ಷೆಗಳ ನೂತನ ಮಳಿಗೆ ‘ಐಕ್ಯ ಫುಟ್‌ವೇರ್ ಆಂಡ್ ಶಾಪಿಂಗ್’ ಏಕಕಾಲಕ್ಕೆ ಗ್ರಾಹಕರಿಗೆ ಮುಕ್ತವಾಗಲಿವೆ.​ವೈವಿಧ್ಯಮಯ ಸಾಕುಪ್ರಾಣಿಗಳ ಲೋಕ:‘ದ ಪೆಟ್ ಶಾಪ್’ನಲ್ಲಿ ಎಲ್ಲಾ ತಳಿಯ ನಾಯಿಗಳು, ಪರ್ಷಿಯನ್ ಬೆಕ್ಕುಗಳು ಹಾಗೂ ಆಕರ್ಷಕ ವಿದೇಶಿ ಹಕ್ಕಿಗಳು ಲಭ್ಯವಿವೆ. ಅಕ್ವೇರಿಯಂ ಪ್ರಿಯರಿಗಾಗಿ ಅಲಂಕಾರಿಕ ಮೀನುಗಳು, ವಿವಿಧ ವಿನ್ಯಾಸದ ಅಕ್ವೇರಿಯಂಗಳು, ಪಂಜರಗಳು ಹಾಗೂ ಆಟಿಕೆಗಳ ಸಂಗ್ರಹ ಇಲ್ಲಿದೆ. ಪ್ರಾಣಿ ಹಾಗೂ ಪಕ್ಷಿಗಳ ಆಹಾರ

ಮೇ 1 ರಿಂದ ‘ದ ಪೆಟ್ ಶಾಪ್’ ಮತ್ತು ‘ಐಕ್ಯ ಫುಟ್‌ವೇರ್’ ಶುಭಾರಂಭ Read More »

ಮದುವೆಯಾಗುವುದಾಗಿ ನಂಬಿಸಿ ಅಕ್ರಮ ಗರ್ಭ: ಸಂತ್ರಸ್ತೆಗೆ ಮಾಸಿಕ 75 ಸಾವಿರ ಪಾವತಿಸಲು ಹೈಕೋರ್ಟ್ ಆದೇಶ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯಾಗಿಸಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಕೃಷ್ಣ ಜೆ. ರಾವ್ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ, ಸಂತ್ರಸ್ತೆ ಮತ್ತು ಮಗುವಿನ ಜೀವನೋಪಾಯಕ್ಕಾಗಿ ಪ್ರತಿ ತಿಂಗಳು 75,000 ಪಾವತಿಸಬೇಕೆಂಬ ಕಠಿಣ ಷರತ್ತನ್ನು ನ್ಯಾಯಾಲಯ ವಿಧಿಸಿದೆ.​ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ

ಮದುವೆಯಾಗುವುದಾಗಿ ನಂಬಿಸಿ ಅಕ್ರಮ ಗರ್ಭ: ಸಂತ್ರಸ್ತೆಗೆ ಮಾಸಿಕ 75 ಸಾವಿರ ಪಾವತಿಸಲು ಹೈಕೋರ್ಟ್ ಆದೇಶ Read More »

ಬೈಕ್‌ಗಳ ಮುಖಾಮುಖಿ ಢಿಕ್ಕಿ; ಮೂವರಿಗೆ ಗಾಯ

ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಬಳಿ ಬೆಳ್ಮಣ್–ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿ ಗುರುವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.​ಕಿನ್ನಿಗೋಳಿ ಕಡೆಯಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದ ಸವಾರ ಅಮರನಾಥ್ ಎಂಬಾತ ತನ್ನ ವಾಹನವನ್ನು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‌ಗೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಬೆಳ್ಮಣ್ ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಸವಾರ ರಮೇಶ್ ಅವರಿಗೆ ತಲೆಯ ಭಾಗಕ್ಕೆ ತೀವ್ರ ರಕ್ತಗಾಯವಾಗಿದೆ.​ಅಪಘಾತದ ರಭಸಕ್ಕೆ ಎರಡೂ ವಾಹನಗಳು ರಸ್ತೆಗೆ ಬಿದ್ದಿದ್ದು,

ಬೈಕ್‌ಗಳ ಮುಖಾಮುಖಿ ಢಿಕ್ಕಿ; ಮೂವರಿಗೆ ಗಾಯ Read More »

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ₹25.66 ಲಕ್ಷ ವಂಚನೆ: ಕಾರ್ಕಳದಲ್ಲಿ ಪ್ರಕರಣ ದಾಖಲು

ಕಾರ್ಕಳ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ, ವಿವಿಧ ಕುಂಟು ನೆಪಗಳನ್ನು ಹೇಳಿ ಯುವಕನೊಬ್ಬನಿಂದ ಬರೋಬ್ಬರಿ 25.66 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಂಚನೆಗೆ ಒಳಗಾದ ನಲ್ಲೂರು ಗ್ರಾಮದ ಗಣೇಶ ಆಚಾರ್ಯ (34) ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.​ಘಟನೆಯ ವಿವರ: 2024ರ ಜುಲೈ 23ರಂದು ಇನ್‌ಸ್ಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬಾತ ಪಿರ್ಯಾದಿದಾರ ಗಣೇಶ ಅವರಿಗೆ ಪರಿಚಯವಾಗಿದ್ದ. ಆರಂಭದಲ್ಲಿ ಕಾಲೇಜಿಗೆ ಹೋಗಲು

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ₹25.66 ಲಕ್ಷ ವಂಚನೆ: ಕಾರ್ಕಳದಲ್ಲಿ ಪ್ರಕರಣ ದಾಖಲು Read More »

error: Content is protected !!
Scroll to Top