• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಅಂಕಣ

ಹಣಕಾಸಿನ ವ್ಯವಹಾರ

ವಾಣಿಜ್ಯ ಕ್ಷೇತ್ರವು ಮುಂದುವರಿದಂತೆ ಸಾಲ ನೀಡುವಿಕೆಯ ಮತ್ತು ಸಾಲ ಪಡೆದುಕೊಳ್ಳುವಿಕೆಯ ವ್ಯವಹಾರವು ಸಮಾಜದಲ್ಲಿ ತ್ವರಿತಗತಿಯಿಂದ ಸಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನಸಾಮಾನ್ಯರು ಅದರಲ್ಲೂ ಆರ್ಥಿಕವಾಗಿ ಬಳಲಿರುವ ಕೆಲವು ವ್ಯಕ್ತಿಗಳು ತಮ್ಮ ದೈನಂದಿನ ಖರ್ಚುವೆಚ್ಚಗಳಿಗಾಗಿ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಮದುವೆ ಮುಂತಾದ ಕೆಲವು ಅಗತ್ಯದ ಖರ್ಚುಗಳಿಗಾಗಿ ಅನಿವಾರ್ಯವಾಗಿ ಸಾಲವನ್ನು ಪಡೆಯಬೇಕಾದ ಸಂದರ್ಭದಲ್ಲಿ ಕೆಲವು ಅಸಹಾಯಕ ವ್ಯಕ್ತಿಗಳು ಸರಿಯಾಗಿ ಮುಂದಾಲೋಚನೆ ಮಾಡದೇ, ಸಾಲ ನೀಡುವ ಅಥವಾ ಲೇವಾದೇವಿ ವ್ಯವಹಾರ ನಡೆಸುವ ಖಾಸಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗೆ ಸಹಿ ಮಾಡಿದ […]

ಹಣಕಾಸಿನ ವ್ಯವಹಾರ Read More »

ಲೇವಾದೇವಿ ವ್ಯವಹಾರ

ಲೇವಾದೇವಿ ವ್ಯವಹಾರ ಎಂದರೆ ಸಾಲವನ್ನು ನೀಡುವ ಅಥವಾ ಸಾಲವನ್ನು ಪಡಕೊಳ್ಳುವ ವ್ಯವಹಾರವನ್ನು ಲೇವಾದೇವಿ ವ್ಯವಹಾರ ಎನ್ನಲಾಗುತ್ತದೆ. ಕಾನೂನಿನ ನಿಯಮಾನೂಸಾರದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಲೇವಾದೇವಿ ವ್ಯವಹಾರವನ್ನು ನಡೆಸಲು ಸರ್ಕಾರದಿಂದ ಸೂಕ್ತ ಲೈಸನ್ಸ್ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಲೇವಾದೇವಿ ವ್ಯವಹಾರಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಗೊಳಿಸುವ ಮತ್ತು ಮುಗ್ದ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ಉದ್ದೇಶದಿಂದ ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961 ಎಂಬ ಕಾನೂನು ಜ್ಯಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಯಾವುದೇ ಒಬ್ಬ ವ್ಯಕ್ತಿ ಅಥವಾ

ಲೇವಾದೇವಿ ವ್ಯವಹಾರ Read More »

ಸುಭದ್ರ ರಾಷ್ಟ್ರಕ್ಕೆ ಸ್ವದೇಶಿ ಬಲ

ಪ್ರಸಕ್ತ ಸನ್ನಿವೇಶದಲ್ಲಿ ರಾಷ್ಟ್ರಗಳ ನಡುವೆ ಮಿತ್ರತ್ವ -ಶತ್ರುತ್ವವನ್ನು ಉಂಟು ಮಾಡುವುದು ಕೇವಲ ಗಡಿ ಅಥವಾ ಜನಾಂಗ ಸಮಸ್ಯೆಗಳು ಅಲ್ಲ. ವಿಶ್ವ ವ್ಯಾಪಾರೀಕರಣವು ಇಂದು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ದೇಶಗಳ ನಡುವಿನ ಶತ್ರುತ್ವ ಮಿತ್ರತ್ವವನ್ನು ಅದುವೇ ನಿರ್ಧರಿಸುತ್ತದೆ. ಒಂದು ದೇಶದ ಆರ್ಥಿಕ ಸುಸ್ಥಿರತೆಯು ಆ ದೇಶಕ್ಕೆ ಹಲವು ಮಿತ್ರರನ್ನು ಹಾಗೂ ಬೆಂಬಲಿಗರನ್ನು ತಂದುಕೊಡುತ್ತದೆ. ಕ್ಷೀಣ ಆರ್ಥಿಕತೆಯು ನಮ್ಮ ದೇಶದ ಆಂತರಿಕವಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ವಿಚಾರಗಳಲ್ಲಿ ಇನ್ನೊಂದು ದೇಶವು ಮೂಗು ತೋರಿಸುವುದಕ್ಕೆ ದಾರಿ ಮಾಡಿಕೊಡುತ್ತದೆ. ಎಲ್ಲಿಯ ತನಕ

ಸುಭದ್ರ ರಾಷ್ಟ್ರಕ್ಕೆ ಸ್ವದೇಶಿ ಬಲ Read More »

ನಮ್ಮೂರ ಸಾಧಕ – ಕೆ. ಗುಣಪಾಲ ಕಡಂಬ

ವಯಸ್ಸನ್ನು ಮೀರಿದ ಉತ್ಸುಕತೆ, ಸೃಜನಶೀಲತೆ, ಗುರುತ್ವ ಶಕ್ತಿಯಿಂದ ಶಿಕ್ಷಣ ತಜ್ಞರಾಗಿ, ಕಂಬಳ ಸಾಧಕರಾಗಿ, ಆದರ್ಶ ಕೃಷಿಕರಾಗಿ, ಸಾಹಿತಿಯಾಗಿ, ಧಾರ್ಮಿಕ ಮುಂದಾಳುವಾಗಿ ಗುರುತಿಸಿಕೊಂಡಿರುವ ಮಾದರಿ ವ್ಯಕ್ತಿತ್ವ ಇಂದಿನ ಲೇಖನದಲ್ಲಿ ಪರಿಚಯಿಸುತ್ತಿರುವ ನಮ್ಮೂರ ಸಾಧಕ ನಿವೃತ್ತ ಪ್ರಾಚಾರ್ಯ, ಕಂಬಳ ವಿದ್ವಾಂಸ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗುಣಪಾಲ ಕಡಂಬ. ಕೃಷಿ ಪ್ರಧಾನ ಕೊಳಕ್ಕೆ ಇರ್ವತ್ತೂರು ಮನೆತನದ ಪಟೇಲ್ ನಾಗರಾಜ ಕಡಂಬ – ಜಯಾವತಿ ದಂಪತಿಯ ಪುತ್ರರಾಗಿ 1947ರ ಜೂ. 3ರಂದು ಜನಿಸಿದರು. ಕೊಳಕ್ಕೆ ಇರ್ವತ್ತೂರು ಶಾಲೆ, ಕಾರ್ಕಳದ ಭುಜಬಲಿ

ನಮ್ಮೂರ ಸಾಧಕ – ಕೆ. ಗುಣಪಾಲ ಕಡಂಬ Read More »

ಮನಮೋಹನ ‘ಅನೂಹ್ಯ’ ಆಳ್ವ

ಆಳ್ವರು ಅಂದಾಕ್ಷಣ ಎಲ್ಲರಿಗೂ ಹೊಳೆಯುವುದು ಮೂಡುಬಿದಿರೆಯಲ್ಲಿ ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳು. ಆದರೆ, ಅದನ್ನು ಹೊರತುಪಡಿಸಿ ನೋಡಿದರೂ ಆಳ್ವರು ಈ ಕಾಲದ ಒಂದು ಅದ್ಭುತ. ಹತ್ತಿರದಿಂದ ಬಲ್ಲವರಿಗೆ ಅವರೊಂದು ಅಚ್ಚರಿ. ಆಳ್ವರೆಂದರೆ ಅಗಾಧ ಜ್ಞಾನ, ಅತ್ಯಂತ ಅಚ್ಚುಕಟ್ಟುತನ, ಅದ್ದೂರಿ, ಅಭೂತಪೂರ್ವ ಕಾರ್ಯಕ್ರಮ ಸಂಘಟಕ, ಅಪ್ಪಟ ಕಲಾಕಾರ, ಅಭಿವೃದ್ಧಿಯ ಕನಸುಗಾರ, ಅಮೋಘ ಸಾಧಕ. ಸಾವಿರಾರು ಕುಟುಂಬಗಳಿಗೆ ಆಶ್ರಯದಾತರಾಗಿರುವ ಆಳ್ವರು ಗೆಳೆಯರ ಪಾಲಿನ ಅಪರಂಜಿ, ಅಪರಿಮಿತ ಯೋಜನೆ ಹಾಗೂ ಯೋಚನೆಯ ಅದಮ್ಯ ಉತ್ಸಾಹಿ. ಹೀಗೆ ಆಳ್ವರೆಂದರೆ ಬೆರಗು, ಅನೂಹ್ಯ. ಆಧುನಿಕ

ಮನಮೋಹನ ‘ಅನೂಹ್ಯ’ ಆಳ್ವ Read More »

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ – 2007

ಕರ್ನಾಟಕ ರಾಜ್ಯದೊಳಗಿನ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮೇಲೆ ಪರಿಣಾಮಕಾರಿಯಾದ ನಿಯಂತ್ರಣವನ್ನು ಹೊಂದುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು 2007ನೇ ಇಸವಿಗಿಂತ ಮುಂಚೆ ಚಾಲ್ತಿಯಲ್ಲಿದ್ದ ಕರ್ನಾಟಕ ಖಾಸಗಿ ನರ್ಸಿಂಗ್ ಹೋಂ ಅಧಿನಿಯಮ, 1976 ಎಂಬ ಹಳೆ ಕಾನೂನನ್ನು ರದ್ದುಗೊಳಿಸಿ ಅದರ ಬದಲಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಎಂಬ ಕಾನೂನನ್ನು ಜಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಲ್ಪಡಬೇಕಾಗಿದ್ದು ಮಾತ್ರವಲ್ಲದೇ ಸರ್ಕಾರವು ಸೂಚಿಸುವ ಎಲ್ಲಾ ಅಗತ್ಯವಾಗಿರುವ ಅಂಶಗಳನ್ನು ಅಂದರೆ

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ – 2007 Read More »

ಮುಂಬೈಯಲ್ಲಿ ಶೆಟ್ಟಿ ಕ್ಯಾಟರರ್ಸ್ ಸ್ಥಾಪಿಸಿದ ಕುಕ್ಕುಂದೂರು ಶ್ಯಾಮ್ ಶೆಟ್ಟಿ

ಸಂಘಟಕ- ಸಮಾಜ ಸೇವಕ- ಚಲನಚಿತ್ರ ನಿರ್ಮಾಪಕ 1977ರಲ್ಲಿ ತುಳು ಕನ್ನಡಿಗರು ಸ್ಥಾಪಿಸಿದ ಪ್ರಥಮ ಕ್ಯಾಟರಿಂಗ್‌ ಸಂಸ್ಥೆ ಶೆಟ್ಟಿ ಕ್ಯಾಟರರ್ಸ್.‌ ಮದುವೆ ಸಮಾರಂಭಗಳಲ್ಲಿ ಕ್ಯಾಟರಿಂಗ್‌ ವ್ಯವಸ್ಥೆ ಪರಿಚಯಿಸಿ ಖ್ಯಾತಿ ಪಡೆದ ಶೆಟ್ಟಿ ಕ್ಯಾಟರರ್ಸ್‌ ಸಂಸ್ಥಾಪಕರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಶ್ಯಾಮ್‌ ಎನ್.‌ ಶೆಟ್ಟಿ. ಶುಚಿ, ರುಚಿಯಾದ ಊಟ, ಉಪಾಹಾರ, ಅಚ್ಚುಕಟ್ಟಾದ ಸೇವೆಯಿಂದಲೇ ಮುಂಬೈಯಲ್ಲಿ ಪ್ರಸಿದ್ಧಿ ಪಡೆದ ಶೆಟ್ಟಿ ಕ್ಯಾಟರರ್ಸ್‌ ಸಂಸ್ಥಾಪಕರು ಇಂದಿನ ನಮ್ಮೂರ ಸಾಧಕರು. 1950 ಮೇ 15ರಂದು (ಇಂದು ಅವರ ಹುಟ್ಟು ಹಬ್ಬ) ಸಾಂತೂರು

ಮುಂಬೈಯಲ್ಲಿ ಶೆಟ್ಟಿ ಕ್ಯಾಟರರ್ಸ್ ಸ್ಥಾಪಿಸಿದ ಕುಕ್ಕುಂದೂರು ಶ್ಯಾಮ್ ಶೆಟ್ಟಿ Read More »

ಸೂಕ್ಷ್ಮ ಮನಸಿನವರನ್ನು ಅಲ್ಲಾಡಿಸಿಬಿಟ್ಟಿತು ಈ ದೃಶ್ಯ!

ತಾಯಿ ಮಗನನ್ನು ಬೇರ್ಪಡಿಸಲು ಸಾವಿಗೂ ಸಾಧ್ಯವಾಗಲಿಲ್ಲ! ನಮಗೆಲ್ಲಾ ಬಾಲ್ಯದಲ್ಲಿ ಅಕ್ಬರ ಮತ್ತು ಬೀರಬಲ್ಲರ ಒಂದು ಕಥೆ ಹೇಳಲಾಗಿತ್ತು.ಒಂದು ತಾಯಿ ಮಂಗವು ತನ್ನ ಪ್ರಾಣ ಉಳಿಸಿಕೊಳ್ಳಲು ನೀರಿನ ತೊಟ್ಟಿಯಲ್ಲಿ ತನ್ನದೇ ಮರಿಯನ್ನು ಕಾಲ ಬುಡಕ್ಕೆ ಹಾಕಿ ಮೆಟ್ಟಿ ನಿಂತ ಕಥೆ! ನಾವು ಅದೇ ಕಥೆಯನ್ನು ಸತ್ಯ ಎಂದು ನಂಬಿಕೊಂಡು ಬಂದವರು. ಆದರೆ ಅದು ಸುಳ್ಳು ಎಂದು ಸಾಬೀತು ಮಾಡುವ ಸಾವಿರಾರು ಘಟನೆಗಳು ನಮ್ಮ ಸುತ್ತ ಮುತ್ತ ನಡೆದಿವೆ. ಈಗಲೂ ನಡೆಯುತ್ತಿವೆ! ಮಗು ಹುಟ್ಟಿದಾಗ ವೈದ್ಯರು ತಾಯಿ ಮಗುವಿನ ಸಾವಯವ

ಸೂಕ್ಷ್ಮ ಮನಸಿನವರನ್ನು ಅಲ್ಲಾಡಿಸಿಬಿಟ್ಟಿತು ಈ ದೃಶ್ಯ! Read More »

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ

25 ವರ್ಷಗಳಿಂದ ಯಕ್ಷಗಾನ – ತಾಳಮದ್ದಳೆ ಆಯೋಜನೆ ಕಳೆದ 25 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಆಯೋಜಿಸಿಕೊಂಡು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದ ತಂಡ ತಂಡ ಅಜೆಕಾರು ಕಲಾಭಿಮಾನಿ ಬಳಗ. ಈ ಬಳಗದ ಸಾರಥ್ಯ ವಹಿಸಿದವರು ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಶೆಟ್ಟಿ. ಯಕ್ಷಗಾನದ ಅಭಿಮಾನಿಯಾಗಿ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಹೊಸ ಮೆರುಗು ನೀಡಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಮ್ಮೂರ ಸಾಧಕರು ಇಂದಿನ ಅತಿಥಿ. 1965ರಲ್ಲಿ ಅಜೆಕಾರು ಕಲ್ಕುಡಮಾರ್ ಮನೆಯ ಸುಬ್ಬಯ್ಯ ಶೆಟ್ಟಿ ಮತ್ತು ಸಂಪ

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ Read More »

ಮಾರ್ಚ್ 23 – ನಿಜವಾದ ಶಹೀದ್ ದಿನ

ಆ ಮೂವರು ಕ್ರಾಂತಿಕಾರಿಗಳು ನಗುನಗುತ್ತಾ ಗಲ್ಲಿಗೇರಿದ ದಿನ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮರೆಯಲಾಗದ ಮೂರು ಹೆಸರುಗಳು ಭಗತ್ ಸಿಂಗ್, ರಾಜಗುರು ಮತ್ತು ಬಟುಕೇಶ್ವರ ದತ್ತ! ಆ ಮೂವರೂ ನಗುನಗುತ್ತಾ ಲಾಹೋರ್ ಸೆರೆಮನೆಯಲ್ಲಿ ಗಲ್ಲಿಗೇರಿದ ಅತ್ಯಂತ ಪವಿತ್ರವಾದ ದಿನ 1931 ಮಾರ್ಚ್ 23! ಆ ದಿನವನ್ನು ಯಾವ ಭಾರತೀಯರೂ ಮರೆಯಬಾರದು. ಸ್ವಾತಂತ್ರ್ಯ ಹೋರಾಟದ ಹೊಳೆಯುವ ನಕ್ಷತ್ರಗಳು!ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಕಾರಿಗಳ ಪಾತ್ರವನ್ನು ಉಲ್ಲೇಖ ಮಾಡದೇ ಅದು ಮುಗಿಯುವುದೇ ಇಲ್ಲ. ಆ ರಕ್ತರಂಜಿತ ಇತಿಹಾಸದಲ್ಲಿ ಭಗತ್ ಸಿಂಗ್, ಚಂದ್ರಶೇಖರ್

ಮಾರ್ಚ್ 23 – ನಿಜವಾದ ಶಹೀದ್ ದಿನ Read More »

error: Content is protected !!
Scroll to Top