ಹೆಬ್ರಿ ಸುದ್ದಿ

hebri news, newskarkala, karkala news

ಮುನಿಯಾಲು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂಪನ್ನ

ಹೆಬ್ರಿ : ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ನ. 30 ರಂದು ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿಯು ಬೆಳ್ಳಿಯ ಪಲ್ಲಕ್ಕಿಯಲ್ಲಿ ಧಾತ್ರಿ ಕಟ್ಟೆಗೆ ಮೆರವಣಿಗೆಯಲ್ಲಿ ಸಾಗಿ ಬಂದು ಪೂಜೆಯ ಬಳಿಕ ಭೂರಿ ಸಮಾರಾಧನೆ ನೆರವೇರಿತು. ರಾತ್ರಿ ವಿಶೇಷ ರಂಗ ಪೂಜೆಯ ಬಳಿಕ ವಿವಿಧ ವಾದ್ಯ ಘೋಷ್ಠಿಗಳೊಂದಿಗೆ ಬೆಳ್ಳಿಯ ಮಂಟಪದಲ್ಲಿ ಶ್ರೀ ದೇವರ ಅಹೋ ರಾತ್ರಿ ಪುರ ಮೆರವಣಿಗೆ ಮತ್ತು ಕಟ್ಟೆ ಪೂಜೆ ನೆರವೇರಿತು. ಬಳಿಕ ಅವಭ್ರತ …

ಮುನಿಯಾಲು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂಪನ್ನ Read More »

ಹೆಬ್ರಿ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಸ್ಕರ ಜೋಯಿಸ್‌ ಅವರಿಗೆ ಸನ್ಮಾನ

ಹೆಬ್ರಿ : ಶಿವಪುರ ಪಾಂಡುಕಲ್ಲು ಕೋಟಿನಾಥೇಶ್ವರ ದೇವಸ್ಥಾನ ಮತ್ತು ಬಡ್ಕಿಲ್ಲಾಯ ಅರ್ಚಕ ಬಳಗದ ವತಿಯಿಂದ ನ. 28 ರಂದು ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಬ್ರಿ ಭಾಸ್ಕರ ಜೋಯಿಸ್‌ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸುರೇಶ್‌ ಬಡ್ಕಿಲ್ಲಾಯ, ಪಿ. ಬಿ. ಗೋವಿಂದ ಬಡ್ಕಿಲ್ಲಾಯ, ವಿಜಯ ನಾರಾಯಣನ್‌, ಗೋಪಾಲಕೃಷ್ಣ ಉಪಾಧ್ಯಾಯ, ಸಂತೋಷ್‌ ಉಡುಪ, ಸಮಾಜಸೇವಕ ಬೈಕಾಡಿ ಮಂಜುನಾಥ ರಾವ್‌ ಶಿವಪುರ ಉಪಸ್ಥಿತರಿದ್ದರು.

ಹೆಬ್ರಿ ಕಸಾಪ – ಹಿರಿಯರೆಡೆಗೆ ಸಾಹಿತ್ಯದ ನಡಿಗೆ

ಗುಬ್ಬಿಮಾರು ರಾಮಕೃಷ್ಣ ಹೆಬ್ಬಾರ್ ಅವರಿಗೆ ಸನ್ಮಾನ ಹೆಬ್ರಿ : ಹೆಬ್ರಿ ತಾಲೂಕು ಕಸಾಪ ಘಟಕದ ವತಿಯಿಂದ ನ. 26 ರಂದು ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಗುಬ್ಬಿಮಾರು ರಾಮಕೃಷ್ಣ ಹೆಬ್ಬಾರ್ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಮಾರು 140 ಹಿರಿಯರನ್ನು ಇಲ್ಲಿಯವರೆಗೆ ಗುರುತಿಸಿ ಗೌರವಿಸಿದೆ. ತನ್ಮೂಲಕ ಇಂದಿನ ಪೀಳಿಗೆಯವರಿಗೆ ಹಿರಿಯರ ಜೀವನದ ಆದರ್ಶಗಳನ್ನು ಆಚಾರ ವಿಚಾರಗಳನ್ನು …

ಹೆಬ್ರಿ ಕಸಾಪ – ಹಿರಿಯರೆಡೆಗೆ ಸಾಹಿತ್ಯದ ನಡಿಗೆ Read More »

ಕಬ್ಬಡಿ ಪಂದ್ಯಾಟ : ಮುನಿಯಾಲು ಪಬ್ಲಿಕ್ ಸ್ಕೂಲ್‌ನ ಸೃಜನ್ ರಾಷ್ಟ್ರ ಮಟ್ಟಕ್ಕೆ

ಕಾರ್ಕಳ : ಮಂಡ್ಯದ ಆದಿಚುಂಚನಗಿರಿ ಸಂಸ್ಥಾನದ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ್ದ ದಕ್ಷಿಣ ಕನ್ನಡ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಐದು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ ಸೃಜನ್ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಸಾಧಕ ವಿದ್ಯಾರ್ಥಿಗೆ ಶಾಲಾ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಅಭಿನಂದಿಸಿದ್ದಾರೆ.

ಹೆಬ್ರಿ : ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟಿಪ್ಪರ್‌

ಓರ್ವ ಸಾವು – ಇನ್ನೋರ್ವ ಗಂಭೀರ ಹೆಬ್ರಿ : ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದವರ ಮೇಲೆ ಟಿಪ್ಪರ್‌ ಹರಿದು ಓರ್ವ ಮೃತಪಟ್ಟ ದಾರುಣ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರದಲ್ಲಿ ನ. 24 ರ ಮುಂಜಾನೆ ಸಂಭವಿಸಿದೆ. ಸಾಗರ ತಾಲೂಕಿನ ಶಿವರಾಜ್ (38) ಮೃತ ವ್ಯಕ್ತಿ. ಅವರೊಂದಿಗಿದ್ದ ಮಹೇಂದ್ರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವರಾಜ್, ಮಹೇಂದ್ರ ಮತ್ತು ಯೊಗೇಶ ಎಂಬವರು ಗೂಡ್ಸ್‌ ವಾಹನದಲ್ಲಿ ಸಾಗರ ಕಡೆಯಿಂದ ಬಾಳೆಕಾಯಿ ಹೇರಿಕೊಂಡು ಬಂದಿದ್ದು, ರಾತ್ರಿ ವೇಳೆ ಸೋಮೇಶ್ವರದ ಪೆಟ್ರೋಲ್ ಬಂಕ್‌ನಲ್ಲಿ …

ಹೆಬ್ರಿ : ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟಿಪ್ಪರ್‌ Read More »

ಅಮೃತಭಾರತಿಯಲ್ಲಿ ವಾರ್ಷಿಕ ಕ್ರೀಡಾಕೂಟ

ಕ್ರೀಡೆಯಿಂದ ಶಿಸ್ತು – ಮಹೇಶ್ ಟಿ. ಎಂ. ಹೆಬ್ರಿ : ಕ್ರೀಡೆಯಿಂದ ದೈಹಿಕ- ಮಾನಸಿಕ ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಲು ಸಹಕಾರಿ. ಈ ನಿಟ್ಟಿನಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಪಠ್ಯ ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯರಾಗುವ ಮೂಲಕ ಜೀವನ ಚೈತನ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೆಬ್ರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿ.ಎಂ. ಅಭಿಪ್ರಾಯಪಟ್ಟರು. ಅವರು ನ. 23 ರಂದು ಹೆಬ್ರಿ ಪಿ. ಆರ್. ಎನ್. ಅಮೃತಭಾರತಿ ಸಮೂಹ …

ಅಮೃತಭಾರತಿಯಲ್ಲಿ ವಾರ್ಷಿಕ ಕ್ರೀಡಾಕೂಟ Read More »

ಹೆಬ್ರಿ : ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಹೆಬ್ರಿ : ಹೆಬ್ರಿ ಎಸ್.ಆರ್. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೂಜಿತ (17) ನ. 20ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಾನಸಿಕ ಖಿನ್ನತೆಗೆ ಒಳಗಾಗಿ ಸೋಮವಾರ ಹೆಬ್ರಿ ಕಿನ್ನಿಗುಡ್ಡೆ ಎಸ್.ಆರ್. ಕಾಲೇಜ್ ಬಳಿ ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಕೋಣೆಯೊಂದರಲ್ಲಿ ಕಬ್ಬಿಣದ ಜಂತಿಗೆ ಶಾಲು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ – ಅಪಘಾತ

ಕಾರ್ಕಳ ಪೇಟೆಯಲ್ಲಿ ಹಾಡಹಗಲೇ ವೃದ್ಧೆಯ ಸರ, ನಗದು ಲಪಟಾಯಿಸಿದ ವಂಚಕ ಕಾರ್ಕಳ : ಕಾರ್ಕಳ ಪೇಟೆಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ವೃದ್ಧ ಮಹಿಳೆಗೆ ಮಂಕುಬೂದಿ ಎರಚಿ ಚಿನ್ನದ ಸರ ಮತ್ತು 700 ರೂ. ನಗದು ಲಪಟಾಯಿಸಿದ ಘಟನೆ ಶನಿವಾರ ಸಂಭವಿಸಿದೆ. ಸುಶೀಲ(77) ಎಂಬ ಮಹಿಳೆ ಕಾರ್ಕಳ ಬಸ್‌ಸ್ಟ್ಯಾಂಡ್‌ ಬಳಿಯಿರುವ ಕ್ಲಿನಿಕ್‌ಗೆ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 45 ವರ್ಷದ ವ್ಯಕ್ತಿಯೊಬ್ಬ ಬಂದು ನಿಮ್ಮ ಮೊಬೈಲ್ ಫೋನ್ ಕೊಡಿ ನಿಮ್ಮ ಮಗನ ಹತ್ತಿರ ಮಾತನಾಡಲಿಕ್ಕಿದೆ ಎಂದು ಹೇಳಿ ಫೊನ್ ತೆಗೆದುಕೊಂಡು ಮಾತನಾಡಿದಂತೆ …

ಅಪರಾಧ – ಅಪಘಾತ Read More »

ದತ್ತಿ ಉಪನ್ಯಾಸದಿಂದ ಓದಿನ ಅಭಿರುಚಿ : ಶ್ರೀನಿವಾಸ ಭಂಡಾರಿ ಮುದ್ದೂರು

ಹೆಬ್ರಿಯಲ್ಲಿ ದತ್ತಿ ಉಪನ್ಯಾಸ-ಓದುವ ಬೆಳಕು ಕಾರ್ಯಕ್ರಮ ಹೆಬ್ರಿ : ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಲು ದತ್ತಿ ಉಪನ್ಯಾಸದಂಥ ಕಾರ್ಯಕ್ರಮ ಸಹಕಾರಿ. ಕನ್ನಡ ಸಾಹಿತ್ಯ ಗ್ರಂಥಾಲಯದ ಸಹಯೋಗದೊಂದಿಗೆ ನಡೆಸಲಾದ ಈ ಕಾರ್ಯಕ್ರಮದಿಂದ ಪರಿಷತ್ತಿನ ಉದ್ದೇಶ ಈಡೇರಿದೆ ಎಂದು ಪರಿಷತ್ತಿನ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರ ಹೆಬ್ರಿಸಹಯೋಗದೊಂದಿಗೆ ಜರುಗಿದ ದತ್ತಿ ಉಪನ್ಯಾಸ ಹಾಗೂ ಓದುವ ಬೆಳಕು …

ದತ್ತಿ ಉಪನ್ಯಾಸದಿಂದ ಓದಿನ ಅಭಿರುಚಿ : ಶ್ರೀನಿವಾಸ ಭಂಡಾರಿ ಮುದ್ದೂರು Read More »

ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ ಕುಂಠಿನಿ ಆಯ್ಕೆ

ಅಜೆಕಾರು : ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ನ. 17ರಂದು ಚುನಾವಣೆ ನಡೆದು ಪ್ರಶಾಂತ್ ಶೆಟ್ಟಿ ಕುಂಠಿನಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸುನೀಲ್ ಕುಮಾರ್ ಸಿ.ಎಂ. ಕಾರ್ಯನಿರ್ವಹಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಶಾಂತಿರಾಜ್ ಜೈನ್ ಹಾಗೂ ನಿರ್ದೇಶಕ ವಲಯ ಮೇಲ್ವಿಚಾರಕ ಜಯಂತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮತಾ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!
Scroll to Top