• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕ್ರೈಂ

ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ – ವಾಟ್ಸಾಪ್‌ನಲ್ಲಿ ಮಾತುಕತೆ

ಬಾರ್‌ನಲ್ಲಿ ಜಗಳ, ಹಲ್ಲೆ, ಬೆದರಿಕೆ : ಯುವತಿಯಿಂದ ಯುವಕನ ವಿರುದ್ಧ ದೂರು ದಾಖಲು ಕಾರ್ಕಳ : ಯುವತಿಯ ಮೇಲೆ ಯುವಕನೋರ್ವ ಹಲ್ಲೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಸಬಾ ಗ್ರಾಮದ ಕಾವೇರಡ್ಕದ 19 ವರ್ಷದ ಯುವತಿಯೋರ್ವಳಿಗೆ ಇನ್ಸ್ಟಾಗ್ರಾಮ್‌ ಮೂಲಕ ಬಜಗೋಳಿಯ ಯುವಕ ಪರಿಚಯವಾಗಿದ್ದು, ಇವರಿಬ್ಬರೂ ವಾಟ್ಸಾಪ್‌ನಲ್ಲಿ ಮಾತನಾಡುತ್ತಿದ್ದರು. ಜು. 15ರಂದು ಯುವ ಯುವತಿಗೆ ಕರೆ ಮಾಡಿ ಕಸಬಾ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಮೆಡಿಕಲ್‌ಗೆ ಬರುವಂತೆ ತಿಳಿಸಿದ್ದಾನೆ. ಬಸ್ […]

ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ – ವಾಟ್ಸಾಪ್‌ನಲ್ಲಿ ಮಾತುಕತೆ Read More »

ಮಾದಕವಸ್ತು ಸಾಗಟ – ಕಾರ್ಕಳದ ಇಬ್ಬರು ಸಹಿತ ಮೂವರ ಬಂಧನ

ಉಡುಪಿ : ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಬುಡ್ನಾರ್‌ನಲ್ಲಿ ಎಂ.ಡಿ.ಎಂ.ಎ ಪೌಡರ್, ಎಂ.ಡಿ.ಎಂ.ಎ ಟ್ಯಾಬ್ಲೆಟ್ ಹಾಗೂ ಹೈಡ್ರೋ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಉದ್ಯಾವರ ಪಿತ್ರೋಡಿಯ ವಿಜಯ ಪೂಜಾರಿ (36), ಕಾರ್ಕಳದ ಕುಕ್ಕಂದೂರು ಹಾರ್ಜಿಡ್ಡು ನಿವಾಸಿ ಪಿ.ಎ.ಮುಹಮ್ಮದ್ ಶಮ್ಮಾಸ್(24) ಹಾಗೂ ಕಾರ್ಕಳ ತಾಲೂಕು ಕುಂಟಿಬೈಲು ಮಿಯಾರು ಗ್ರಾಮದ ಆಕಾಶ್ ಶೆಟ್ಟಿ (20) ಬಂಧಿತ ಆರೋಪಿಗಳು. ಆರೋಪಿಗಳಿಂದ 4 ಗ್ರಾಂ ಎಂ.ಡಿ.ಎಂ.ಎ ಪೌಡರ್, 2.5 ಗ್ರಾಂ ಹೈಡ್ರೋ ಗಾಂಜಾ, 3.65 ಗ್ರಾಂ, ಎಂ.ಡಿ.ಎಂ.ಎ ಟ್ಯಾಬ್ಲೆಟ್‌ ಹಾಗೂ ಗಾಂಜಾ ವಶಕ್ಕೆ

ಮಾದಕವಸ್ತು ಸಾಗಟ – ಕಾರ್ಕಳದ ಇಬ್ಬರು ಸಹಿತ ಮೂವರ ಬಂಧನ Read More »

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಿಬ್ಬಂದಿಯಿಂದ ಅಧ್ಯಕ್ಷರ ನಕಲಿ ಸಹಿ ಬಳಸಿ ಚೆಕ್ ನಗದೀಕರಣಕ್ಕೆ ಯತ್ನ ಪ್ರಕರಣ – ಆರೋಪಿಯ ಬಂಧನ

ಕಾರ್ಕಳ : ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರ ನಕಲಿ ಸಹಿ ಬಳಸಿ ಚೆಕ್‌ ನಗದೀಕರಣಕ್ಕೆ ಯತ್ನಿಸಿರುವ ಆರೋಪಿ‌ ಅಕ್ಷಯ್ ದೇವಾಡಿಗನನ್ನು (29) ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಎಣ್ಣೆಹೊಳೆ ಹಂಚಿಕಟ್ಟೆ ನಿವಾಸಿ ಅಕ್ಷಯ ದೇವಾಡಿಗ 2022ರ ಡಿಸೆಂಬರ್‌ನಿಂದ 2026 ಮೇ 7ರವರೆಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಆಗಿ ಕಾರ್ಯ ನಿರ್ವಹಿಸಿಕೊಂಡಿದ್ದ. ಇಲಾಖಾ ಲೆಕ್ಕ ಪರಿಶೋಧನೆಯ ಸಂದರ್ಭ ಅಕ್ಷಯ ದೇವಾಡಿಗ ಕರ್ತವ್ಯದಲ್ಲಿ ಲೋಪ ಮತ್ತು

ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಿಬ್ಬಂದಿಯಿಂದ ಅಧ್ಯಕ್ಷರ ನಕಲಿ ಸಹಿ ಬಳಸಿ ಚೆಕ್ ನಗದೀಕರಣಕ್ಕೆ ಯತ್ನ ಪ್ರಕರಣ – ಆರೋಪಿಯ ಬಂಧನ Read More »

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ

ಕಾರ್ಕಳ : ಸಾಣೂರು ಗ್ರಾಮದ ಪೊರ್ಲೊಟ್ಟುಗುತ್ತು ಕುಬೇರ ಕೋಳಿ ಫಾರ್ಮ್‌ ಬಳಿಯಿರುವ ಸರಕಾರಿ ಹಾಡಿಯಲ್ಲಿ ರಕ್ಷಿತ್‌ ಶೆಟ್ಟಿ, ಪ್ರವೀಣ ದೇವಾಡಿಗ ಹಾಗೂ ಇತರರು ಕೋಳಿಗಳ ಕಾಲಿಗೆ ಹಿಂಸಾತ್ಮಕ ರೀತಿಯಲ್ಲಿ ಹರಿತವಾದ ಚೂರಿಯನ್ನು ಕಟ್ಟಿ, ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ(ತನಿಕೆ) ಶಿವಕುಮಾರ್‌ ಅವರು ದಾಳಿ ಮಾಡಿದ್ದಾರೆ. ಜೂಜಾಟಕ್ಕೆ ಉಪಯೋಗಿಸಿದ 12,000 ರೂ. ಬೆಲೆಯ ಜೀವಂತ ಕೋಳಿಗಳು -5, ಕೋಳಿಗಳನ್ನು ಕಟ್ಟಲು ಉಪಯೋಗಿಸಿದ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ Read More »

ಜಾಗದ ವಿಚಾರವಾಗಿ ಗಲಾಟೆ, ಕತ್ತಿಯಿಂದ ಹಲ್ಲೆ

ಕಾರ್ಕಳ : ಜಾಗದ ವಿಚಾರವಾಗಿ ಗಲಾಟೆ ಮಾಡಿ ಹಲ್ಲೆ ನಡೆಸಿರುವ ಘಟನೆ ಮಾಳ ಗ್ರಾಮದ ಹುಕ್ರಟ್ಟೆಯಲ್ಲಿ ನಡೆದಿದೆ.ಮಿಯ್ಯಾರು ಗ್ರಾಮದ ಅನಿಲ್‌ ಮಸ್ಕರೇನ್ಹಸ್‌ ಅವರು ಹುಕ್ರಟ್ಟೆಯಲ್ಲಿ ಜಾಗ ಮತ್ತು ಮನೆ ಹೊಂದಿದ್ದು, ಅಲ್ಲಿಗೆ ಹೋಗಿ ಬರುತ್ತಾ ಇರುತ್ತಾರೆ. ಅವರು ಅಲ್ಲಿಗೆ ಹೋದಾಗ ನೆರೆಮನೆಯ ನಿವಾಸಿ ಗಣೇಶ ಎಂಬಾತನು ಇದು ತನ್ನ ಜಾಗ ಎಂದು ಜಗಳ ಮಾಡುತ್ತಿದ್ದನು. ಜು.15ರಂದು ಅನಿಲ್‌ ಅವರು ಅಲ್ಲಿ ಹುಲ್ಲು ಮತ್ತು ಕಳೆಗಿಡಗಳನ್ನು ತೆಗೆಯುತ್ತಿದ್ದಾಗ ಗಣೇಶನು ಬಂದು ಈ ಜಾಗ ನನಗೆ ಸೇರಿದ್ದು, ಇಲ್ಲಿ ಯಾಕೆ

ಜಾಗದ ವಿಚಾರವಾಗಿ ಗಲಾಟೆ, ಕತ್ತಿಯಿಂದ ಹಲ್ಲೆ Read More »

ಹಣ ಕೊಡುವಂತೆ ಬೆದರಿಕೆ – ಹಲ್ಲೆ

ಕಾರ್ಕಳ : ಹಣ ಕೊಡುವಂತೆ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಕುರಿತಾಗಿ ವ್ಯಕ್ತಿಯೋರ್ವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೂ. 29ರಂದು ಈದು ಗ್ರಾಮದ ಸಾಧು ಪೂಜಾರಿ ಅವರ ಮನೆಗೆ ಅವರ ಪರಿಚಯದ ದಿಲೀಪ್ ಪೂಜಾರಿ ಬಂದು ಸಿಟ್‌ಔಟ್‌ನಲ್ಲಿ ನಿಂತು ಸಾಧು ಪೂಜಾರಿಯವರನ್ನು ಹೊರಗೆ ಕರೆದು ‌5000 ರೂ. ಹಣವನ್ನು ಕೊಡಬೇಕು ಎಂದು ಬೆದರಿಸಿದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಹಣ ಕೊಡದಿದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಆತನ ಜೊತೆಯಲ್ಲಿ

ಹಣ ಕೊಡುವಂತೆ ಬೆದರಿಕೆ – ಹಲ್ಲೆ Read More »

ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ !

ಆಲಂಕಾರಿನಲ್ಲಿ ಹೊಟೇಲ್‌ ನಡೆಸುತ್ತಿದ್ದ ಬಜಗೋಳಿಯ ದಿನೇಶ್‌ ಕಾರ್ಕಳ : ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಬಜಗೋಳಿಯ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ದಂಪತಿ ಆಲಂಕಾರು ಕಜೆಯಲ್ಲಿ ಬಾಡಿಗೆ ಮನೆಯಲ್ಲಿ ಜೂ.20ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದಂಪತಿ ಎರಡು ವರ್ಷದ ಹೆಣ್ಣು ಮಗು ದೃವಿಯೊಂದಿಗೆ ವಾಸವಾಗಿದ್ದರು. ಆಲಂಕಾರು ಪೇಟೆಯಲ್ಲಿ ಹೊಟೇಲ್‌ ನಡೆಸುತ್ತಿದ್ದ ದಂಪತಿ ಒಂದು ತಿಂಗಳ ಹಿಂದೆ ಹೋಟೆಲ್ ಬಿಟ್ಟು ತೆರಳಿದ್ದರು. ಜೂ.19ರ ಸಂಜೆ ಆಲಂಕಾರು

ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ ! Read More »

ಗಾಂಜಾ ಮಾರಾಟ – ಮಹಿಳೆ ಸೇರಿ 7 ಮಂದಿಯ ಬಂಧನ

ಉಡುಪಿ : ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಜೂ. 18ರಂದು ತೆಂಕನಿಡಿಯೂರು ಗ್ರಾಮದ ಹೋಂ ಸ್ಟೇಯಲ್ಲಿ ನಡೆದಿದೆ. ಹೂಡೆಯ ನಾಜೀಲ್ (31), ಕಾಪು ಮಂಚಕಲ್ ಗ್ರಾಮದ ಮೊಹಮ್ಮದ್ ಅಜರುದ್ದೀನ್ (42), ಮಂಚಕಲ್‌ನ ಮೊಹಮ್ಮದ್ ಅಫನಾನ್( 19), ತೆಂಕನಿಡಿಯೂರಿನ ವಿಘ್ನೇಶ (35), ತೆಂಕನಿಡಿಯೂರಿನ ಬಸವರಾಜು (36), ನೇಪಾಳ ಮೂಲದ ರಾಮ್ ಸಿಂಗ್, ಪೆರಂಪಳ್ಳಿಯ ಧನ್ವತ್ ರಿಕೀತ್(36) ಮತ್ತು ಒಡಿಶಾ ಮೂಲದ ಗೀತಾಜಂಲಿ ಜಿನಾ (44) ಬಂಧಿತ ಆರೋಪಿಗಳು. ಮಾದಕವಸ್ತುಗಳನ್ನು

ಗಾಂಜಾ ಮಾರಾಟ – ಮಹಿಳೆ ಸೇರಿ 7 ಮಂದಿಯ ಬಂಧನ Read More »

ಅಕ್ರಮವಾಗಿ ಮದ್ಯ ಮಾರಾಟ – ದೂರು ದಾಖಲು

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಜೂ. 16ರಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ವರಂಗ ಗ್ರಾಮದ ಉಮೇಶ್‌ ಎಂಬವರು ಕಸಬಾ ಗ್ರಾಮದ ಬಸ್‌ನಿಲ್ದಾಣದ ಸಮೀಪ ವಿಜಯ ವೈನ್‌ಶಾಪ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದುಕೊಳ್ಳದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು.

ಅಕ್ರಮವಾಗಿ ಮದ್ಯ ಮಾರಾಟ – ದೂರು ದಾಖಲು Read More »

ಗೃಹಮಂತ್ರಿಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಕೆರ್ವಾಶೆ ಮೂಲದ ವ್ಯಕ್ತಿಗೆ 14 ದಿನಗಳ ನ್ಯಾಯಾಂಗ ಬಂಧನ

ಕಾರ್ಕಳ : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ, ಜಾತಿನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಕಾರ್ಕಳ ಕೆರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ ಬಂಗೇರ (48) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಫೇಸ್‌ಬುಕ್‌ ಖಾತೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ ‘ಆರೆಸ್ಸೆಸ್‌ ಇನ್ನು ಎರಡು ವರ್ಷಗಳ ಅವಧಿ ಕೋಮುವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ ಸಚಿವರಿಲ್ಲ’ ಎಂಬ ಪ್ರಿಯಾಂಕ್‌ ಖರ್ಗೆ ಅವರ

ಗೃಹಮಂತ್ರಿಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ ಕೆರ್ವಾಶೆ ಮೂಲದ ವ್ಯಕ್ತಿಗೆ 14 ದಿನಗಳ ನ್ಯಾಯಾಂಗ ಬಂಧನ Read More »

error: Content is protected !!
Scroll to Top