ಸಂವಾದ

ಪ್ರೀತಿಯ ತೋಟದಲ್ಲಿ ಅರಳುವ ಸುಂದರ ಹೂವುಗಳು ಮಕ್ಕಳು

ಇಂದು ನೆಹರೂ ಜನ್ಮದಿನ-ಮಕ್ಕಳ ದಿನಾಚರಣೆ ಇಂದು ನವಂಬರ್ 14. ನಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಸಮಯ. ಬಾಲ್ಯವೆಂದರೆ ಅದು ಏನೂ ತಿಳಿಯದ ಮುಗ್ಧ ಸ್ಥಿತಿ. ಗಂಡು ಹೆಣ್ಣು ಭೇದವಿಲ್ಲದೆ, ಮಣ್ಣಿನಲ್ಲಿ ಮನೆ ಮಾಡಿ ಬಅಡುಗೆಯಾಟವಾಡುತ್ತ ಶಾಲೆಗೆ ಹೋಗುವ, ಪಾಠ ಮಾಡುವ, ಟೀಚರ್‌ನಂತೆ ವರ್ತಿಸಿ ಆಟವಾಡಿದ ಆ ದಿನಗಳು. ಬಹುಶಃ ಮತ್ತೆ ಮತ್ತೆ ನೆನೆದರೆ ಮನದಲ್ಲಿ ಮಂದಹಾಸ ಮೂಡಲೇಬೇಕು. ನೆನಪುಗಳು ಮಧುರ, ಸುಂದರ. ಬೆಳೆದಂತೆ ನಮ್ಮ ಬುದ್ಧಿ ವಿಕಸನ ಹೊಂದಿ ನೆನಪುಗಳ ವ್ಯೂಹದಲ್ಲಿ ಬಾಲ್ಯವು ಅವಿಸ್ಮರಣೀಯವಾದ ಇತಿಹಾಸವಾಗಿ …

ಪ್ರೀತಿಯ ತೋಟದಲ್ಲಿ ಅರಳುವ ಸುಂದರ ಹೂವುಗಳು ಮಕ್ಕಳು Read More »

ದುಬೈಗೆ ತೆರಳಬೇಕಿದ್ದ ವಿಮಾನ ವಿಳಂಬ: ಪ್ರಯಾಣಿಕರ ಪರದಾಟ

ಅಧಿಕಾರಿಗಳ ವಿರುದ್ಧ ಪ್ರಯಾಣಿಕರ ಆಕ್ರೋಶ ಮಂಗಳೂರು: ದುಬೈಗೆ ತೆರಳಬೇಕಿದ್ದ ವಿಮಾನ ಸಂಚಾರ ವಿಳಂಬವಾಗಿ ಪ್ರಯಾಣಿಕರು ಇಡೀ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರದಾಡಿದ ಘಟನೆ ಜು. 10ರ ತಡರಾತ್ರಿ ಸಂಭವಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ ವಿಮಾನ ವಿಳಂಬವಾದ ಕಾರಣ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಆಕ್ರೋಶಗೊಂಡು ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ರಾತ್ರಿ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯನ್ನೂ ಅಧಿಕಾರಿಗಳು ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಸೋಮವಾರ ರಾತ್ರಿ 11ಕ್ಕೆ ಏರ್‌ ಇಂಡಿಯಾ ಎಕ್ಸೆಪ್ರೆಸ್‌ ವಿಮಾನ …

ದುಬೈಗೆ ತೆರಳಬೇಕಿದ್ದ ವಿಮಾನ ವಿಳಂಬ: ಪ್ರಯಾಣಿಕರ ಪರದಾಟ Read More »

ಆಗಬೇಕು ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಕಾಯಕಲ್ಪ

ಮೂಲಸೌಕರ್ಯ ಅಭಿವೃದ್ಧಿಯಾದರೆ ಅನುಕೂಲ ನಮ್ಮ ದೇಶದಲ್ಲಿ ಕೆಲವು ರಾಜ್ಯಗಳು ಕೇವಲ ಪ್ರವಾಸೋದ್ಯಮದಿಂದ ಜಿಡಿಪಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿವೆ. ಉದಾಹರಣೆಗೆ ಹೇಳುವುದಾದರೆ ಗೋವಾದ ಶೇ.90ಕ್ಕಿಂತ ಹೆಚ್ಚು ಜಿಡಿಪಿ ಪ್ರವಾಸೋದ್ಯಮ ಕ್ಷೇತ್ರದಿಂದ ಬರುತ್ತಿದೆ. ಅಂದರೆ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸಮಾಜದ ಅಭಿವೃದ್ಧಿ ವೇಗ ಪಡೆಯಲು ಸಾಧ್ಯ. ನಮ್ಮ ಉಡುಪಿ ಜಿಲ್ಲೆಯ ಬಗ್ಗೆ ಹೇಳುವುದಾದರೆ ಹಲವಾರು ವೈವಿಧ್ಯಗಳು, ವಿಶಿಷ್ಟ ಆಚರಣೆಗಳು ಕಲೆ, ಸಂಸ್ಕೃತಿ, ಭಾಷಾ ವೈವಿಧ್ಯ ಬಹುಶಃ ಯಾವ ಜಿಲ್ಲೆಯಲ್ಲೂ ನೋಡಲು ಅಸಾಧ್ಯ. ಆದರೆ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ …

ಆಗಬೇಕು ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಕಾಯಕಲ್ಪ Read More »

ಕಾರ್ಕಳ : ಕ್ಷಯ ಮುಕ್ತ ಗ್ರಾಮಕ್ಕಾಗಿ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮ

ಕಾರ್ಕಳ: ಕೇಂದ್ರ ಸರಕಾರದ ಆಶಯದಂತೆ 2025ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಉಡುಪಿ ಜಿ. ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ, ಕಾರ್ಕಳ ಕ್ಷಯ ಘಟಕ, ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಶಿರ್ಲಾಲು ಗ್ರಾಮ ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಕ್ಷಯ ಮುಕ್ತ ಗ್ರಾಮಕ್ಕಾಗಿ-ಸಮುದಾಯದ ಸಹಭಾಗಿತ್ವ ಕಾರ್ಯಕ್ರಮವು ಸೆ.19 ರಂದು ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ಜರುಗಿತು. ಶಿರ್ಲಾಲು ಗ್ರಾ. ಪಂ. ಅಧ್ಯಕ್ಷ ರಮಾನಂದ …

ಕಾರ್ಕಳ : ಕ್ಷಯ ಮುಕ್ತ ಗ್ರಾಮಕ್ಕಾಗಿ ಸಮುದಾಯದ ಸಹಭಾಗಿತ್ವ ಕಾರ್ಯಕ್ರಮ Read More »

ಕಾರ್ಕಳ ಬಸ್‌ ನಿಲ್ದಾಣದಲ್ಲಿಲ್ಲ ಕಸದ ತೊಟ್ಟಿ

ಸ್ವಚ್ಛ ಕಾರ್ಕಳ ಪರಿಕಲ್ಪನೆಗೆ ಬೇಕಿದೆ ಸಾಥ್‌ ಕಾರ್ಕಳ : ನಗರದ ಬಸ್‌ ನಿಲ್ದಾಣದ ಬಳಿಯಲ್ಲಿ ಕಸದ ತೊಟ್ಟಿಯಿಲ್ಲದ ಕಾರಣ ನಿಲ್ದಾಣದ ಅಲ್ಲಲ್ಲಿ ಕಸ ಹರಡಿಕೊಂಡಿರುವುದು ಕಂಡುಬರುತ್ತಿದೆ. ಕಸದ ತೊಟ್ಟಿಯಿಲ್ಲದ ಕಾರಣ ಜನರು ಎಲ್ಲೆಂದರಲ್ಲಿ ಕಸ ಎಸೆದು ಸ್ವಚ್ಛ ಕಾರ್ಕಳ ಪರಿಕಲ್ಪನೆಗೆ ಧಕ್ಕೆ ತರುತ್ತಿದ್ದಾರೆ. ಕೆಲ ಅಂಗಡಿಯವರು ಕಸದ ತೊಟ್ಟೆಯನ್ನು ಅಂಗಡಿ ಬಳಿಯಲ್ಲಿಡುತ್ತಿದ್ದು, ಅದರಲ್ಲಿರುವ ಕಸವನ್ನು ಬೀದಿನಾಯಿಗಳು ನಿಲ್ದಾಣದೆಲ್ಲೆಡೆ ಹರಡಿ ಪೇಟೆಯನ್ನು ನರಕಗೊಳಿಸುತ್ತಿವೆ. ಬೀದಿನಾಯಿಗಳ ಕಾಟಕಾರ್ಕಳ ನಗರದಲ್ಲಿ ಬೀದಿನಾಯಿಗಳ ಕಾಟ ಅತಿಯಾಗಿದೆ. ಸ್ವರಾಜ್‌ ಮೈದಾನ, ಗಾಂಧಿ ಮೈದಾನ, ಬಂಡಿಮಠ, …

ಕಾರ್ಕಳ ಬಸ್‌ ನಿಲ್ದಾಣದಲ್ಲಿಲ್ಲ ಕಸದ ತೊಟ್ಟಿ Read More »

1947ರಲ್ಲಿ ಲಡ್ಡು ಕೊಟ್ಟಿದ್ದರು – ಸ್ವಾತಂತ್ರ್ಯದ ನೆನಪು ಮಾಡಿಕೊಂಡ ಭುಜಂಗ ಶೆಟ್ಟಿ

ಅಂದು ಭಾರತೀಯರಲ್ಲಿ ಸಮಾನತೆಯಿತ್ತು ಕಾರ್ಕಳ : ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ 1947ರಲ್ಲಿ ಬ್ರಿಟೀಷ್‌ ಆಳ್ವಿಕೆಯಿಂದ ಭಾರತ ಸ್ವತಂತ್ರವಾದ ಸಂದರ್ಭದ ಬಗ್ಗೆ 86ರ ಹರೆಯದ ನಿವೃತ್ತ ಶಿಕ್ಷಕ ಸಾಣೂರಿನ ಭುಜಂಗ ಶೆಟ್ಟಿ ಮುಕ್ತವಾಗಿ ಮಾತನಾಡಿದ್ದಾರೆ. 1947ರ ಪ್ರಥಮ ಸ್ವಾತಂತ್ರ್ಯ ಸಂಭ್ರಮದ ದಿನದಂದು ಶಾಲೆಯಲ್ಲಿದ್ದ ನಮಗೆಲ್ಲ ಶಿಕ್ಷಕರು ದೊಡ್ಡ ಲಡ್ಡು ನೀಡಿದ್ದರು. ಇಡೀ ದೇಶವೇ ಅಂದು ಸಂಭ್ರಮದಲ್ಲಿತ್ತು. ಕಾರ್ಕಳದಲ್ಲಿದ್ದ ಮಿಷನ್‌ ಶಾಲೆಯಲ್ಲಿ 5 ತರಗತಿಯಲ್ಲಿ ಆವಾಗ ನಾನು ಕಲಿಯುತ್ತಿದೆ. ಬ್ರಿಟೀಷರನ್ನು ನಾನು ನೋಡಿಲ್ಲ. ಅವರ …

1947ರಲ್ಲಿ ಲಡ್ಡು ಕೊಟ್ಟಿದ್ದರು – ಸ್ವಾತಂತ್ರ್ಯದ ನೆನಪು ಮಾಡಿಕೊಂಡ ಭುಜಂಗ ಶೆಟ್ಟಿ Read More »

ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್‌

ಇಸ್ಲಾಮಿಕ್ ಕ್ಯಾಲೆಂಡರ್‌ ಒಂಬತ್ತನೆಯ ತಿಂಗಳು ರಮ್ಜಾನ್‌. ಮುಸ್ಲಿಂ ಬಾಂಧವರಿಗೆ ಇದು ಪವಿತ್ರವಾದ ತಿಂಗಳು. ಈ ತಿಂಗಳು ದೇವರ ಧ್ಯಾನದಲ್ಲಿದ್ದು, ಹಗಲು ಉಪವಾಸ ಮಾಡುವುದರಿಂದ ಮುಸ್ಲಿಮರು ಮುಂದಿನ ಮೆಕ್ಕಾ ಯಾತ್ರೆಗೆ ಸಿದ್ಧತೆ ನಡೆಸುತ್ತಾರೆ.ಮುಸ್ಲಿಂ ನಂಬಿಕೆಗಳ ಪ್ರಕಾರ ದೇವತೆಗಳ ಪ್ರತಿನಿಧಿಯಾದ ಗೇಬ್ರಿಯಲ್ ಸ್ಪರ್ಶದಿಂದ ಭೂಮಿಗೆ ಇಳಿದು ಬಂದು ದೇವವಾಣಿಯಾದ ಕುರಾನ್ ನ್ನು ಪ್ರವಾದಿ ಮಹಮ್ಮದ್‌ ಅವರಿಗೆ ಪರಿಚಯ ಮಾಡಿದ ಸಂಕೇತವಾಗಿ 29 ರಿಂದ 30 ದಿನ ಉಪವಾಸವೃತ ಕೈಗೊಳ್ಳುತ್ತಾರೆ. ಇದರಿಂದ ಸ್ವಯಂ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಅವರ ನಂಬಿಕೆ.ರಮ್ಜಾನ್‌ ಹಬ್ಬವನ್ನು …

ಧ್ಯಾನ, ಸೌಹಾರ್ದತೆ , ಸೇವಾ ಧರ್ಮದ ಪ್ರತೀಕ ರಮ್ಜಾನ್‌ Read More »

ಯಾಕಾಗಿ ಈ ಬಂದ್..?

ಸದ್ಯ ದೇಶದಾದ್ಯಂತ ಎ. ಪಿ. ಎಂ. ಸಿ. ತಿದ್ದುಪಡಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯಿದೆ ಈ ಎರಡು ವಿಷಯಗಳು ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ. ಒಂದಷ್ಟು ಕೃಷಿಕರು ಈ ಎರಡೂ ಕಾಯಿದೆಯನ್ನು ಬೆಂಬಲಿಸಿದರೆ ಮತ್ತೊಂದಿಷ್ಟು ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಷಯ ರಾಜಕೀಯ ತಿರುವು ಪಡೆದಿದ್ದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾದ – ಪ್ರತಿವಾದಕ್ಕೆ ವೇದಿಕೆ.ಭೂಸುಧಾರಣಾ ಕಾಯ್ದೆ ತಿದ್ದುಪಡಿ – 2020 ಭಾರತವು ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ಆದರೆ ಕೃಷಿಯ ಕಡೆ …

ಯಾಕಾಗಿ ಈ ಬಂದ್..? Read More »

ಕೊರೊನ ಸವಾಲುಗಳ ನಡುವೆ ವಿದ್ಯಾರ್ಥಿಗಳ ಕಲಿಕೆ

ಕೊರೊನ ಸಮಸ್ಯೆಯಿಂದ ಪ್ರಪಂಚವೇ ತಲ್ಲಣಗೊಂಡಿದೆ.ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಿವೆ. ಕೊರೊನ ವೈರಸ್ ನಮ್ಮ ಶಿಕ್ಷಣದ ಮೇಲೂ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡಿದೆ.ಬಹುತೇಕ ಶಾಲಾ- ಕಾಲೇಜುಗಳು ಆನ್ ಲೈನ್ ಶಿಕ್ಷಣ ಮತ್ತು ರೆಕಾರ್ಡಿಂಗ್ ತರಗತಿಗಳನ್ನು ನಡೆಸುತ್ತಿವೆ.ಈ ಕ್ರಮಗಳು ನಮ್ಮ ಶಿಕ್ಷಣದ ಕೊಂಡಿಯು ತಪ್ಪಬಾರದು ಎನ್ನುವ ಉದ್ದೇಶವನ್ನು ಒಳಗೊಂಡಿವೆ ಎನ್ನುವುದು ನಿಜ.ಆದರೆ ಈ ಕ್ರಮ ಗಳಾವುದೂ ತರಗತಿಯಲ್ಲಿ ಕುಳಿತು ಕಲಿತಂಥ ಅನುಭವವನ್ನು ತಂದುಕೊಡಲಾರದು.ಹಾಗಾಗಿ ನಮ್ಮ ಓದು ಬರಹದಲ್ಲಿ ಕೆಲವು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ.ಇಲ್ಲವಾದರೆ ನಮಗೆಲ್ಲ ಶಿಕ್ಷಣದ ಬಗ್ಗೆ ಆಸಕ್ತಿ ಇಲ್ಲದೇ ಹೋಗಬಹುದು ಅಥವಾ …

ಕೊರೊನ ಸವಾಲುಗಳ ನಡುವೆ ವಿದ್ಯಾರ್ಥಿಗಳ ಕಲಿಕೆ Read More »

ಚಾರಣಿಗರ ಸ್ವರ್ಗ ಕಾರ್ಕಳದ ನಕ್ರೆ ಕಲ್ಲು

ಅಗಸದೆತ್ತರಕ್ಕೆ ಮುಖಮಾಡಿ ನಿಂತಿರುವ ಈ ಕಲ್ಲು ಜನ್ಮ ತಾಳಿ ಅದೆಷ್ಟು ಶತಮಾನಗಳಾಯಿತೋ ಏನೋ? ಬೆಟ್ಟದ ಮೇಲೆ ಯಾರೋ ಒಂದು ದೊಡ್ಡ ಬಂಡೆ ಕಲ್ಲನ್ನು ಎತ್ತಿ ನಿಲ್ಲಿಸಿದಂತೆ ಭಾಸವಾಗುವ ಈ ಕಲ್ಲು ಊರ ಪರವೂರಿನ ಜನರಿಗೆ ವಿಸ್ಮಯ ತಾಣ, ಹಲವಾರು ರಹಸ್ಯಗಳನ್ನು ತನ್ನೊಳಗೆ ಅಡಗಿಸಿಟ್ಟಿರುವ ಈ ನಕ್ರೆ ಕಲ್ಲು ಸಾಹಸಿ ಚಾರಣಿಗರಿಗೆ ಆಕರ್ಷಣೆಯ ಕೇಂದ್ರ ಬಿಂದು.ಬೆಟ್ಟದ ಮೇಲೆ ಬಿರು ಬಿರುಬಿಸಿಲಿದ್ದರೂ ಈ ಕಲ್ಲಿನ ಬುಡದಲ್ಲಿರುವ ವಿಶಾಲ ತಂಪು ಪ್ರದೇಶ ಬೆಟ್ಟ ಹತ್ತುವವರ ಮೈ ಮನಸ್ಸಿಗೆ ಮುದನೀಡುತ್ತದೆ. ಬಂಡೆಯ ತಳಭಾಗದಲ್ಲಿರುವ …

ಚಾರಣಿಗರ ಸ್ವರ್ಗ ಕಾರ್ಕಳದ ನಕ್ರೆ ಕಲ್ಲು Read More »

error: Content is protected !!
Scroll to Top