Author name: Newskarkala Desk

ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಅವಧಿ ಪೂರ್ಣ

ಯಾರಾಗಲಿದ್ದಾರೆ ಮುಂದಿನ ಅಧ್ಯಕ್ಷರು ? ಕಾರ್ಕಳ : ಪುರಸಭೆ ಅ‍ಧ್ಯಕ್ಷ – ಉಪಾಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು, ಮುಂದಿನ ಅ‍ಧ್ಯಕ್ಷರು ಯಾರಾಗಲಿದ್ದಾರೆ ಎನ್ನುವ ಕುತೂಹಲ ಇದೀಗ ಗರಿಗೆದರಿದೆ. ಈ ಹಿಂದೆ ಕಾರ್ಕಳ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ಸುಮಾ ಕೇಶವ್‌ ಅಧ್ಯಕ್ಷರಾಗಿ, ಪಲ್ಲವಿ ಪ್ರವೀಣ್‌ ಉಪಾಧ್ಯಕ್ಷರಾಗಿದ್ದರು. ಎ. 27ರಂದು ಅವರ ಅಧಿಕಾರವಧಿ ಕೊನೆಗೊಂಡಿದೆ. 2018ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸರಕಾರ ಮೀಸಲಾತಿ ಪ್ರಕಟಿಸಿದ್ದಾಗ್ಯೂ ಈ …

ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಅವಧಿ ಪೂರ್ಣ Read More »

ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ – ಇಬ್ಬರು ಗಂಭೀರ

ಕಾರ್ಕಳ : ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದು ನಲ್ಲೂರು ಪರಪ್ಪಾಡಿಯಲ್ಲಿ ಮರಕ್ಕೆ ಡಿಕ್ಕಿಯಾದ ಘಟನೆ ಜೂ. 3 ರಂದು ಸಂಭವಿಸಿದೆ. ಪರಿಣಾಮವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆಯಿಂದ ಬೆಂಗಳೂರಿಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಪಾಜೆಗುಡ್ಡೆ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಮೂವರಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಓರ್ವನನ್ನು ಶೃಂಗೇರಿ ಮೂಲದ ನಯಾಜ಼್ ಅಹಮದ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗ್ರಾ.ಪಂ. ಸದಸ್ಯ …

ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ – ಇಬ್ಬರು ಗಂಭೀರ Read More »

ಪೇಟೆ ಧಾರಣೆ : ಕಾರ್ಕಳದಲ್ಲಿ ತರಕಾರಿಗೆ ಇಂದಿನ ಮಾರುಕಟ್ಟೆ ದರ ಇಂತಿದೆ

ಕಾರ್ಕಳ : ಕೆಲವೆಡೆ ವಿಪರೀತ ಮಳೆ ಮತ್ತು ಇನ್ನು ಕೆಲವು ಭಾಗಗಳಲ್ಲಿ ಮಳೆಯೇ ಇಲ್ಲದ ಕಾರಣ ತರಕಾರಿ ಬೆಲೆಯಲ್ಲಿ ಏರಿಳಿತವಾಗಿದೆ. ಟೊಮ್ಯಾಟೋ ಮತ್ತು ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಳವಾಗುತ್ತದೆ ಎನ್ನಲಾಗುತ್ತಿದೆ. 25 ರಿಂದ 35 ರೂ. ಇದ್ದ ಟೊಮ್ಯಾಟೋ ಬೆಲೆ 40 ರವರೆಗೆ ಹೆಚ್ಚಳವಾಗಿದೆ. ಈರುಳ್ಳಿ ಬೆಲೆ 25 ರೂ. ಆಗಿದ್ದು, 80 ರೂ. ಇದ್ದ ನುಗ್ಗೆಕಾಯಿ ಬೆಲೆ 120 – 140 ಕ್ಕೆ ಏರಿಕೆಯಾಗಿದೆ. ಲಿಂಬೆಯ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು 120 …

ಪೇಟೆ ಧಾರಣೆ : ಕಾರ್ಕಳದಲ್ಲಿ ತರಕಾರಿಗೆ ಇಂದಿನ ಮಾರುಕಟ್ಟೆ ದರ ಇಂತಿದೆ Read More »

ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಕಾರ್ಕಳದಲ್ಲಿ ಶೌರ್ಯ ತಂಡ ರಚನೆ

ಆಪತ್ಕಾಲದ ಆಪ್ತರಕ್ಷಕರಾಗಿ 135 ಮಂದಿ ಸನ್ನದ್ಧ ಕಾರ್ಕಳ : ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಕಾರ್ಕಳ ತಾಲೂಕಿನಲ್ಲಿ 135 ಮಂದಿ ಸನ್ನದ್ಧರಾಗಿದ್ದು, ಆಪತ್ಕಾಲದ ಆಪ್ತರಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲುಸ್ತುವಾರಿಯಲ್ಲಿ ತಾಲೂಕಿನ ಪ್ರತಿ ಗ್ರಾಮದಲ್ಲಿ ಈ ತಂಡ ಕಾರ್ಯಾಚರಿಸಲಿದ್ದು, ವಿಪತ್ತಿನ ಕಾಲ, ತುರ್ತು ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಈ ತಂಡದ ಸದಸ್ಯರು ಸೇವೆಗೈಯಲಿದ್ದಾರೆ. ಗುರುವಾರ ಕರಿಯಕಲ್ಲು ಶ್ರೀ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್‌ ಕಾರ್ಕಳ, ಬೆಳ್ತಂಗಡಿ ಜನಜಾಗೃತಿ ಪ್ರಾದೇಶಿಕ …

ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಕಾರ್ಕಳದಲ್ಲಿ ಶೌರ್ಯ ತಂಡ ರಚನೆ Read More »

ಪ್ರಧಾನಿ ಮೋದಿ ಭೇಟಿಯಾದ ಕಾರ್ಕಳದ ಬೀದಿ ವ್ಯಾಪಾರಿ

ಕಾರ್ಕಳ : ಪಿಎಂ – ಸ್ವನಿಧಿ ಫಲಾನುಭವಿ ಕಾರ್ಕಳದ ಬೀದಿಬದಿ ವ್ಯಾಪಾರಿ ಪ್ರಸಾದ್‌ ಬಿ.ಹೆಚ್.‌ ಅವರು ದೆಹಲಿಯಲ್ಲಿ ಜೂ. 1ರಂದು ನಡೆದ ಪಿಎಂ – ಸ್ವನಿಧಿ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ಪಡೆದು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ಬೀದಿ ಬದಿ ವ್ಯಾಪಾರಕ್ಕಾಗಿ ಮೊದಲ ಬಾರಿಗೆ ಪಿಎಂ ಸ್ವನಿಧಿ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ 10 ಸಾವಿರ ರೂ. ಸಾಲ ಪಡೆದ ಪ್ರಸಾದ್‌ ಅದನ್ನು ಅವಧಿಗೆ ಸರಿಯಾಗಿ ಅಂದರೆ 6 ತಿಂಗಳಲ್ಲಿ ಮರುಪಾವತಿ ಮಾಡಿದ್ದರು. ಬಳಿಕ ಯೋಜನೆಯಂತೆ 20 …

ಪ್ರಧಾನಿ ಮೋದಿ ಭೇಟಿಯಾದ ಕಾರ್ಕಳದ ಬೀದಿ ವ್ಯಾಪಾರಿ Read More »

ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸಿಎಂ

ಬೆಂಗಳೂರು : ಐದು ಉಚಿತ ಗ್ಯಾರೆಂಟಿ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಯೋಜನೆಯನ್ನು ಜಾರಿಗೊಳಿಸಿದೆ. ಕಾಂಗ್ರೆಸ್ 5 ಉಚಿತ ಗ್ಯಾರೆಂಟಿಯನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜೂ. 2 ರಂದು ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು, ಕೊನೆಗೂ ಉಚಿತ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ 5 ಉಚಿತ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. …

ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸಿಎಂ Read More »

ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಕಡಬ : ಕಾಲೇಜು ವಿದ್ಯಾರ್ಥಿನಿ ಹಠಾತ್ ಕುಸಿದು ಬಿದ್ದು ನಿಧನ ಹೊಂದಿದ ಘಟನೆ ಕಡಬ ಸಮೀಪದ ರೆಂಜಿಲಾಡಿ ಗ್ರಾಮದಲ್ಲಿ ಜೂ. 2 ರಂದು ಸಂಭವಿಸಿದೆ. ನಿಡ್ಮೇರು‌ ನಿವಾಸಿ ರವೀಂದ್ರ ಅವರ ಪುತ್ರಿ ರಶ್ಮಿತಾ‌ (18) ಮೃತ ವಿದ್ಯಾರ್ಥಿನಿ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಈಕೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ ಎನ್ನಲಾಗಿದೆ. …

ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು Read More »

ಆರೋಗ್ಯ ಧಾರಾ – ಕೋಪದ ಮೇಲೆ ನಿಯಂತ್ರಣವಿರಲಿ…ಇಚ್ಛಾಶಕ್ತಿಯಿದ್ದಲ್ಲಿ ಎಲ್ಲವೂ ಸಾಧ್ಯ

ನಮ್ಮ ಗುಣಗಳು ನಮ್ಮನ್ನು ಬಿಂಬಿಸುತ್ತವೆ. ನಮ್ಮನ್ನು ಅಂಟಿಕೊಂಡಿರುವ ಈ ಗುಣಗಳು ನಮ್ಮ ಸ್ವಭಾವವಾಗುವುದು. ಕೋಪವನ್ನು ದೂರವಿರಬೇಕೆಂದು ಬಯಸಿದರೂ ಅದು ಸುಲಭವಾಗಿ ನಮ್ಮನ್ನು ಬಿಡಲ್ಲ. ನಿನ್ನೆ ರಾಮಾಯಣದ ಕಥೆಯನ್ನು ಕೇಳುತ್ತಿದ್ದೆ. ಅದರಲ್ಲಿ ವಿಶ್ವಾಮಿತ್ರರ ಕಥೆಯ ಪ್ರಸಂಗವನ್ನು ವಾಲ್ಮೀಕಿ ಮಹರ್ಷಿಗಳು ರಾಮ ಲಕ್ಷ್ಮಣರಿಗೆ ಹೇಳುತ್ತಿದ್ದರು. ವಿಶ್ವಾಮಿತ್ರರು ಮೊದಲು ಋಷಿಯಿಂದ ಮಹರ್ಷಿ, ಮಹರ್ಷಿಯಿಂದ ಬ್ರಹ್ಮರ್ಷಿ ಆಗುವ ಕಥೆಯದು. ಪ್ರತಿಯೊಂದು ಹಂತವನ್ನು ಏರುವಾಗ ಒಂದು ಸಾವಿರ ವರ್ಷಗಳ ತಪಸ್ಸನ್ನು ಮಾಡಿ ಮುಂದಿನ ಹಂತಕ್ಕೆ ತಲುಪುತ್ತಿದ್ದರು. ವಿಶ್ವಾಮಿತ್ರರು, ಕ್ರೋಧ, ಲೋಬ ಇತ್ಯಾದಿಗಳು ಇವುಗಳನ್ನು ಗೆದ್ದ …

ಆರೋಗ್ಯ ಧಾರಾ – ಕೋಪದ ಮೇಲೆ ನಿಯಂತ್ರಣವಿರಲಿ…ಇಚ್ಛಾಶಕ್ತಿಯಿದ್ದಲ್ಲಿ ಎಲ್ಲವೂ ಸಾಧ್ಯ Read More »

ವರಂಗ : ದೀಪಾಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಾಗಾರ

ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿಯ ಉಳಿವು – ಚಂದ್ರಶೇಖರ ಭಟ್ ಹೆಬ್ರಿ : ಆಧುನಿಕ ಜೀವನ ಶೈಲಿಯ ಭರಾಟೆಯ ಮಧ್ಯೆ ನಮ್ಮ ಧಾರ್ಮಿಕ ಪರಂಪರೆ ಮತ್ತು ಸಂಸ್ಕೃತಿಯ ಉಳಿವಿನಲ್ಲಿ ಹಬ್ಬಗಳ ಆಚರಣೆಯು ಮಹತ್ವದ್ದಾಗಿದೆ. ಹಬ್ಬಗಳು, ಧಾರ್ಮಿಕ ಆಚರಣೆಗಳು ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಹೊಂದಿದ್ದ ಸಂಬಂಧ ಮತ್ತು ಅವರ ಜೀವನ ಶೈಲಿಯನ್ನು ನಮಗೆ ಕಟ್ಟಿಕೊಡುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಹಬ್ಬಗಳ ಮಹತ್ವತೆಯನ್ನು ತಿಳಿಸುವುದು ಅವಶ್ಯ ಎಂದು ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ತಿಳಿಸಿದರು. ಅವರು ಮೇ …

ವರಂಗ : ದೀಪಾಶ್ರೀ ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಾಗಾರ Read More »

ಜೂ. 6 : ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಹೆಬ್ರಿ : ಜೂ. 6 ರಂದು 110/33/11 ಕೆವಿ ವಿದ್ಯುತ್‌ ಉಪಕೇಂದ್ರ ಹಿರಿಯಡ್ಕದಲ್ಲಿ ನಿರ್ವಹಣೆಯ ಕಾಮಗಾರಿ ನಡೆಯಲಿರುವುದರಿಂದ, ಆ ಸ್ಥಾವರದಿಂದ ಹೊರಡುವ 33 ಕೆವಿ ಹೆಬ್ರಿ ಫೀಡರ್‌ನಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ಅಡಚಣೆಯಾಗಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೇಳಂಜೆ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ, ಚಾರ, ಶಿವಪುರ, ಕನ್ಯಾನ, ನಾಡ್ಪಾಲು, ಸೋಮೇಶ್ವರ, ಸೀತಾನದಿ, ಮಡಾಮಕ್ಕಿ, ಕಾಸನಮಕ್ಕಿ, ಮುದ್ರಾಡಿ, ವರಂಗ, ಮುನಿಯಾಲು, ಕಬ್ಬಿನಾಲೆ, ಕರಬೆಟ್ಟು, ಹೊಸುರು, ಬಚ್ಚಪ್ಪು, ಹೆಬ್ರಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ …

ಜೂ. 6 : ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ Read More »

error: Content is protected !!
Scroll to Top