Author name: Newskarkala Desk

ಸ್ವಯಾರ್ಜಿತ ಆಸ್ತಿ ಮತ್ತು ಜಂಟಿ ಹಕ್ಕಿನ ಆಸ್ತಿ

ಸಾಮಾನ್ಯವಾಗಿ ಸ್ಥಿರಾಸ್ತಿ ಅಂದರೆ ಭೂಮಿ ಅಥವಾ ಕಟ್ಟಡದ ಮೇಲಿನ ಮಾಲೀಕತ್ವದ ಹಕ್ಕಿನ ಸ್ವರೂಪವು ಮುಖ್ಯವಾಗಿ ಎರಡು ವಿಧಗಳನ್ನು ಹೊಂದಿರುತ್ತದೆ. ಮೊದಲನೇಯದಾಗಿ ಸ್ವಯಾರ್ಜಿತ ಆಸ್ತಿ ಅಂದರೆ ಒಂದು ಆಸ್ತಿಯ ಮೇಲೆ ಸಂಬಂಧಪಟ್ಟ ವ್ಯಕ್ತಿಯು ನೇರವಾಗಿ ಸ್ವಂತ ಮತ್ತು ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವುದು. ಒಬ್ಬ ವ್ಯಕ್ತಿ ತನ್ನ ಸ್ವಂತ ಗಳಿಕೆಯ ಹಣದಿಂದ ಸ್ಥಿರಾಸ್ತಿಯನ್ನು ಖರೀದಿಸಿದಾಗ ಆತ ನೇರವಾಗಿ ತಾನು ಖರೀದಿಸಿದ ಸ್ಥಿರಾಸ್ತಿಯ ಮೇಲೆ ಸ್ವಂತ ಮತ್ತು ಸಂಪೂರ್ಣ ಮಾಲೀಕತ್ವದ ಹಕ್ಕನ್ನು ಹೊಂದುತ್ತಾನೆ. ಇದೇ ರೀತಿಯಾಗಿ ಇತರ ಯಾವುದೇ ಕಾನೂನು ಬದ್ಧ […]

ಸ್ವಯಾರ್ಜಿತ ಆಸ್ತಿ ಮತ್ತು ಜಂಟಿ ಹಕ್ಕಿನ ಆಸ್ತಿ Read More »

ಇದೊಂದು ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

ಬೆಂಗಳೂರು : ಇದು ಆಡಳಿತವಲ್ಲ, ಸಂಘಟಿತ ಲೂಟಿ ಎಂದು ಗ್ಯಾಸ್ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು ನಾವು ಎಲ್ಲಾ ಸಮಯದಲ್ಲೂ ಎಚ್ಚರಿಸಿದಂತೆ, ವಿಧಾನಸಭಾ ಚುನಾವಣೆ ಮುಗಿದ ತಕ್ಷಣ ನರೇಂದ್ರ ಮೋದಿ ಸರ್ಕಾರ ಮತ್ತೆ ಬೆಲೆಗಳನ್ನು ಹೆಚ್ಚಿಸಿದೆ. ಮೇ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 993 ರೂ.ಯಷ್ಟು ಹೆಚ್ಚಿಸಲಾಗಿದೆ. ಚುನಾವಣಾ ಅವಧಿಯಲ್ಲಿ ಅಂತಹ ಹೆಚ್ಚಳಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದ ನಂತರ

ಇದೊಂದು ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ Read More »

ಎಸ್ಸೆಸೆಲ್ಸಿ ಪರೀಕ್ಷೆ ವೇಳೆ ಕನ್ನಡದಲ್ಲಿ ಫೇಲ್‌ ಆಗಲು ಕಾರಣವೇನು ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಬಹಿರಂಗ ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದ ಸುಮಾರು 19,000 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಇದಕ್ಕೆ ಕಾರಣಗಳನ್ನು ಅಧ್ಯಯನ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಸಮಿತಿ ಹಲವು ಮಹತ್ವದ ಶಿಫಾರಸ್ಸುಗಳನ್ನು ಮಾಡಿದೆ. ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮಗಳ ನಡುವಿನ ಏಕರೂಪತೆಯ ಕೊರತೆ, ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸದಿರುವುದು, ಪ್ರಾಥಮಿಕ ಹಂತದಿಂದಲೇ ಕಲಿಕೆ ಫಲಿತಾಂಶ ಅಳೆಯುವ ಪರೀಕ್ಷೆಗಳ ಕೊರತೆ, ಕನ್ನಡದಲ್ಲಿ ಸಾಧನೆ ಮಾಡುವವರಿಗೆ

ಎಸ್ಸೆಸೆಲ್ಸಿ ಪರೀಕ್ಷೆ ವೇಳೆ ಕನ್ನಡದಲ್ಲಿ ಫೇಲ್‌ ಆಗಲು ಕಾರಣವೇನು ? Read More »

ಸಿಎಂ ಬದಲಾವಣೆ ಇನ್ನೂ ತೀರ್ಮಾನವಾಗಿಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ – ಮಲ್ಲಿಕಾರ್ಜುನ್ ಖರ್ಗೆ

ಕಲಬುರಗಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾಗಿ ಸದ್ಯಕ್ಕೆ ಯಾವುದೇ ಚರ್ಚೆಗಳು ನಡೆದಿಲ್ಲ, ಅದಕ್ಕೆ ದಿನಾಂಕವೂ ನಿಗದಿಯಾಗಿಲ್ಲ. ಈ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಪದೇ ಪದೇ ಪ್ರಶ್ನೆ ಕೇಳಬೇಡಿ. ಈ ಬಗ್ಗೆ ಯಾವುದೇ ಊಹಾಪೋಹಗಳನ್ನು ಮಾಧ್ಯಮಗಳು ಸೃಷ್ಟಿಸಬಾರದು ಎಂದು ಮನವಿ ಮಾಡಿದರು. ಸಿಎಂ ಬದಲಾವಣೆಯ ಬಗ್ಗೆ ಇನ್ನೂ

ಸಿಎಂ ಬದಲಾವಣೆ ಇನ್ನೂ ತೀರ್ಮಾನವಾಗಿಲ್ಲ, ಹೈಕಮಾಂಡ್ ನಿರ್ಧಾರವೇ ಅಂತಿಮ – ಮಲ್ಲಿಕಾರ್ಜುನ್ ಖರ್ಗೆ Read More »

ಈರುಳ್ಳಿಯ ಆರೋಗ್ಯ ಲಾಭಗಳು

ಅಡುಗೆಯಲ್ಲಿ ಬಳಸುವಂತಹ ಈರುಳ್ಳಿ ಬಾಯಿ ರುಚಿಯನ್ನು ಮಾತ್ರ ಹೆಚ್ಚಿಸದೆ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದಷ್ಟೇ ಅಲ್ಲದೆ ಈರುಳ್ಳಿ ಸೇವಿಸುವುದರಿಂದ ತ್ವಚೆಯ ಸಮಸ್ಯೆ ದೂರವಾಗುತ್ತದೆ ಮತ್ತು ನಮ್ಮ ಬುದ್ಧಿ ಶಕ್ತಿಯು ಕೂಡ ಹೆಚ್ಚುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ಪಲಾಂಡು ಎಂದು ಹೆಸರು.ಭಾರತದಲ್ಲಿ ಎಲ್ಲೆಡೆ ದಿನನಿತ್ಯ ಅಡುಗೆಯಲ್ಲಿ ಬಳಸುವಂತಹ ತರಕಾರಿ ಇದು. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸಬಹುದು. ಈರುಳ್ಳಿಯ ಗುಣಗಳುರುಚಿಯಲ್ಲಿ ಮಧುರ ಹಾಗೂ ಖಾರವಿರುವುದು. ತೀಕ್ಷ್ಣ, ಗುರು ಹಾಗೂ ಜಿಡ್ಡಿನಂಶದಿಂದ ಹೊಂದಿದೆ. ಸ್ವಭಾವದಲ್ಲಿ ಇದು ಅನುಷ್ಣ ಅಂದರೆ

ಈರುಳ್ಳಿಯ ಆರೋಗ್ಯ ಲಾಭಗಳು Read More »

ಇಂದಿನಿಂದ ದೇಶದಲ್ಲಿ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ

ದೆಹಲಿ : ಅಪ್ರಾಪ್ತರು ಸೇರಿದಂತೆ ಅನೇಕರು ಆನ್‌ಲೈನ್‌ ಗೇಮ್‌ಗಳಿಗೆ ಹಣ ಹೂಡಿಕೆ ನಷ್ಟ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಆನ್‌ಲೈನ್‌ ಗೇಮಿಂಗ್‌ ಕಾಯ್ದೆಯನ್ನು ಜಾರಿಗೆ ತಂದಿದೆ. ಭಾರತದ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ (ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025 ರ ಅಡಿ) ಇಂದಿನಿಂದ (ಮೇ 1) ಜಾರಿಯಾಗಲಿದೆ. ಕಾಯ್ದೆಯಿಂದ ಗೇಮಿಂಗ್‌ನಲ್ಲಿ 5 ಮಹತ್ವದ ಬದಲಾವಣೆಗಳಾಗಿವೆ. ಯಾವೆಲ್ಲ ಕಂಪನಿಗಳು ಹೊಸ ಲೈಸೆನ್ಸ್‌ ಪಡೆಯಬೇಕು?ನ್ಯಾಷನಲ್

ಇಂದಿನಿಂದ ದೇಶದಲ್ಲಿ ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ Read More »

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂ. ಏರಿಕೆ

ದೆಹಲಿ : ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಮೇ 1 ಜಾರಿಗೆ ಬರುವಂತೆ 993 ರೂಪಾಯಿ ಹೆಚ್ಚಳ ಮಾಡಲಾಗಿದೆ. ಭಾರಿ ಏರಿಕೆಯ ನಂತರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,071.50 ರೂಪಾಯಿ ತಲುಪಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,078.50 ರೂಪಾಯಿ ಇತ್ತು. ಬೆಂಗಳೂರಿನಲ್ಲಿ 991 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಒಂದು ಕಮರ್ಷಿಯಲ್ ಸಿಲಿಂಡರ್ ಬೆಲೆ ಬರೋಬ್ಬರಿ 3,152 ರೂ. ಆಗಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ, ಗೃಹ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 993 ರೂ. ಏರಿಕೆ Read More »

ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಅಧಿನಿಯಮ – 2025

ಖಾಸಗಿ ಲೇವಾದೇವಿದಾರರು ಅಥವಾ ಸಾಲ ನೀಡುವವರು ಸಾಲ ಪಡಕೊಂಡವರಿಂದ ಮಿತಿ ಮೀರಿದ ದರದ ಬಡ್ಡಿಯನ್ನು ವಸೂಲು ಮಾಡುವುದನ್ನು ಮತ್ತು ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯುವ ಪ್ರಮುಖ ಉದ್ದೇಶದಿಂದ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004 ಎಂಬ ಕಾನೂನು ನಮ್ಮ ರಾಜ್ಯದಲ್ಲಿ 2004ರಿಂದಲೇ ಜ್ಯಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಖಾಸಗಿ ಲೇವಾದೇವಿದಾರರು ಸರ್ಕಾರವು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವುದನ್ನು ಮತ್ತು ಸಾಲ ವಸೂಲಾತಿಗಾಗಿ ಸಾಲ ಪಡಕೊಂಡ ವ್ಯಕ್ತಿಗಳಿಗೆ ಬೆದರಿಕೆ ಹಾಕುವ, ಹಿಂಸೆ ನೀಡುವ ಅಥವಾ

ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಅಧಿನಿಯಮ – 2025 Read More »

ಎ. 2 : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕಾರ್ಕಳ : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ ಎ. 2ರಂದು ನಡೆಯಲಿದೆ. ಸಂಜೆ 6.30ಕ್ಕೆ ಭಂಡಾರ ಇಳಿಯುವುದು, 7.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಮಹಾಂಕಾಳಿ ಭಜನಾ ಮಂಡಳಿ, ಮಂಗಲ್ದಿ ಮಠ ಪಳ್ಳಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ 9 ಗಂಟೆಗೆ ಬೊಬ್ಬರ್ಯ ಹಾಗೂ ನೀಚ ದೈವದ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿರುವುದು ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಎ. 2 : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ Read More »

ಎ. 13-16 – ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನ : ದೈವ ಪುನರ್‌ ಪ್ರತಿಷ್ಠೆ – ಕಲಶಾಭಿಷೇಕ – ವಾರ್ಷಿಕ ನೇಮೋತ್ಸವ

ಕಾರ್ಕಳ : ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ದೈವ ಪುನರ್‌ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ವಾರ್ಷಿಕ ನೇಮೋತ್ಸವ ಎ. 13ರಿಂದ 16ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಜಾರ್ಕಳ ಪ್ರಸಾದ್‌ ತಂತ್ರಿಯವರ ಉಪಸ್ಥಿತಿಯಲ್ಲಿ ವೇ. ಮೂ. ಲಕ್ಷ್ಮೀ ನಾರಾಯಣ ಭಟ್‌ ಹಾಗೂ ಲಕ್ಷ್ಮೀ ಪ್ರಸಾದ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಎ. 13ರಂದು ಸಂಜೆ 5 ಗೇಹ ಪ್ರತಿಗ್ರಹ, ಭಂಡಾರ ತರುವುದು, ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಎ. 14ರಂದು ಬೆಳಗ್ಗೆ

ಎ. 13-16 – ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನ : ದೈವ ಪುನರ್‌ ಪ್ರತಿಷ್ಠೆ – ಕಲಶಾಭಿಷೇಕ – ವಾರ್ಷಿಕ ನೇಮೋತ್ಸವ Read More »

error: Content is protected !!
Scroll to Top