Author name: Newskarkala Desk

ಕೊನೆಗೂ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ

ದೇಶದ ಇತಿಹಾಸದಲ್ಲೇ‌ ಬಹುದೊಡ್ಡ ಕಾರ್ಯಾಚರಣೆ ಉತ್ತರಕಾಶಿ  : ಉತ್ತರಾಖಂಡ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಿಗಾಗಿ 17 ದಿನಗಳ ಸುದೀರ್ಘ ಕಾಯುವಿಕೆ ಇಂದು ಕೊನೆಗೊಂಡಿತು. ಸಂಜೆ 7.50ಕ್ಕೆ ಮೊದಲ ಕಾರ್ಮಿಕ ಹೊರಗೆ ಬಂದಿದ್ದು, ಇತ್ತ ಕಾರ್ಮಿಕರ ಕುಟುಂಬಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಅವಶೇಷಗಳ ನಡುವೆ ಸಾಗಿಸಿದ್ದ ಪೈಪ್ ಮೂಲಕ ಮೊದಲ ಕಾರ್ಮಿಕನನ್ನು ಹೊರಗೆ ಕರೆತರಲಾಗಿದೆ. ಸುರಂಗದ ಒಳಗಿನ ಕತ್ತಲಿನಲ್ಲಿ ಹಾಗೂ ಚಿಕ್ಕ ಜಾಗದಲ್ಲಿ, ಕುಟುಂಬದವರಿಂದ ದೂರವಿದ್ದು, ಆತಂಕದಲ್ಲಿಯೇ 17 ದಿನಗಳನ್ನು ಕಳೆದ ಕಾರ್ಮಿಕರ ಮಾನಸಿಕ ಸಾಮರ್ಥ್ಯವನ್ನು ಉಳಿಸಿಕೊಂಡಿರುವುದು ಪವಾಡದಂತಿದೆ. …

ಕೊನೆಗೂ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ Read More »

ಹವಾಲ್ದಾರ್ ಬೆಟ್ಟು ರಸ್ತೆ ಅಸಮರ್ಪಕ ಕಾಮಗಾರಿ

ಸಂಚಾರಕ್ಕೆ ಅಡಚಣೆ – ಪಾದಚಾರಿಗಳ ಗೋಳು ಕಾರ್ಕಳ : ಅಸಮರ್ಪಕ ಕಾಮಗಾರಿಯಿಂದ ಹವಾಲ್ದಾರ್‌ ಬೆಟ್ಟು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು ಪ್ರಯಾಣಿಕರಿಗೆ ಮುಗಿಯದ ಗೋಳಾಗಿ ಪರಿಣಮಿಸಿದೆ. ಪುರಸಭಾ ವ್ಯಾಪ್ತಿಗೊಳಪಡುವ ಈ ರಸ್ತೆ ಗಾಂಧಿ ಮೈದಾನ ಹಾಗೂ ಕಾರ್ಕಳ ಪೇಟೆಯನ್ನು ಸಂಪರ್ಕಿಸುವ ರಸ್ತೆಯಾಗಿದೆ. ಪ್ರತಿನಿತ್ಯ ಶಾಲಾ ವಾಹನ, ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಈ ರಸ್ತೆಯ ಮೂಲಕ ಸಾಗುತ್ತಾರೆ. ಆದರೆ, ರಸ್ತೆ ವ್ಯವಸ್ಥಿತವಾಗಿಲ್ಲದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆಗಾಲದಲ್ಲಿ ಕೆಸರುಮಯಮಳೆಗಾಲದಲ್ಲಿ ರಸ್ತೆಯ ಹೊಂಡ ತುಂಬೆಲ್ಲ ನೀರು ತುಂಬಿಕೊಂಡಿರುತ್ತದೆ. ಚರಂಡಿಯಿಲ್ಲದೆ ಮಳೆ …

ಹವಾಲ್ದಾರ್ ಬೆಟ್ಟು ರಸ್ತೆ ಅಸಮರ್ಪಕ ಕಾಮಗಾರಿ Read More »

ವೈಬ್ರಂಟ್ ಕಾಲೇಜು : ‘ರೋಬೋಟಿಕ್ಸ್ ಕೃತಕ ಬುದ್ದಿವಂತಿಕೆ’ ವಿಷಯಾಧಾರಿತ ಕಾರ್ಯಾಗಾರ

ಮೂಡುಬಿದಿರೆ : ನ್ಯೂ ವೈಬ್ರಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ‘ವಿ ಪ್ರೇರಣಾʼ ಕಾರ್ಯಕ್ರಮದಡಿಯಲ್ಲಿ ರೋಬೋಟಿಕ್ಸ್ ಕೃತಕ ಬುದ್ದಿವಂತಿಕೆ ವಿಷಯಾಧಾರಿತ ಕಾರ್ಯಾಗಾರ ಜರುಗಿತು. ಮೂಡುಬಿದಿರೆಯ CSDC ಸಮೂಹ ಕಂಪೆನಿಗಳ ಸಂಸ್ಥಾಪಕ ಪುರುಷೋತ್ತಮ ಸಂಪಂಗಿ ಮಾತನಾಡುತ್ತಾ, ಕಲಿಕೆಯನ್ನು ಜ್ಞಾನ ವೃದ್ಧಿಗೆ ಮಾತ್ರ ಸೀಮಿತವಾಗಿಸದೆ ಕೌಶಲ್ಯಗಳಾಗಿ ಪರಿವರ್ತಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ತಾವು ಪಡೆದ ಜ್ಞಾನಕ್ಕೆ ಮಹತ್ವವಿರುತ್ತದೆ. ಒಬ್ಬ ಮನುಷ್ಯ ತನ್ನ ಜ್ಞಾನವನ್ನು ತನ್ನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದನ್ನು ನೀವು …

ವೈಬ್ರಂಟ್ ಕಾಲೇಜು : ‘ರೋಬೋಟಿಕ್ಸ್ ಕೃತಕ ಬುದ್ದಿವಂತಿಕೆ’ ವಿಷಯಾಧಾರಿತ ಕಾರ್ಯಾಗಾರ Read More »

ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಆಯ್ಕೆ ಸರಿಯಾಗಿದ್ದಲ್ಲಿ ಸಾಧನೆ ಖಚಿತ – ಸೈಮನ್ ಮಸ್ಕರೇನ್ಹಸ್ ಕಾರ್ಕಳ : ನಾವು ಆಯ್ಕೆ ಮಾಡಿಕೊಂಡ ದಾರಿ ಸರಿಯಾಗಿದ್ದರೆ ನಮ್ಮ ಸಾಧನೆ ಕೂಡಾ ಅತ್ಯುತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯ ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ತನ್ಮೂಲಕ ಕ್ರೀಡಾಕ್ಷೇತ್ರಗಳಲ್ಲಿ ಸಾಧನೆಗೈಯಬೇಕು ಎಂದು ಬೆಳುವಾಯಿ ಬ್ಲೋಸಮ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ಸಂಚಾಲಕ ಸೈಮನ್ ಮಸ್ಕರೇನ್ಹಸ್ ಅಭಿಪ್ರಾಯಪಟ್ಟರು. ಅವರು ನ. 28 ರಂದು ಗಾಂಧಿ ಮೈದಾನದಲ್ಲಿ ನಡೆದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ‌ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸರ್ವತೋಮುಖ …

ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ Read More »

ಶ್ರವಣಬೆಳಗೊಳ ಪೀಠಾಧೀಶ ಪುರಪ್ರವೇಶ

ನಲ್ಲೂರು ಶ್ರೇಷ್ಠ ಕ್ಷೇತ್ರ – ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಕಳ : ನಲ್ಲೂರು ಶ್ರೇಷ್ಠವಾಗಿರುವ ಕ್ಷೇತ್ರ. ಶ್ರವಣಬೆಳಗೊಳದ ಪೂರ್ವ ಸ್ವಾಮೀಜಿಯವರ ಪರಂಪರೆ ಈ ಕ್ಷೇತ್ರದೊಂದಿಗಿದೆ. ಹೀಗಾಗಿ ಪಟ್ಟಾಭಿಷೇಕದ ಬಳಿಕ ನಲ್ಲೂರು ಕ್ಷೇತ್ರಕ್ಕೆ ಪುರಪ್ರವೇಶ ಕೈಗೊಂಡಿರುವೆ. ಇಲ್ಲಿಂದ ನಂತರದ ವಿಹಾರವನ್ನು ಪ್ರಾರಂಭಿಸುತ್ತೇನೆ ಎಂದು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೀಠಾಧೀಶ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದರು.ಅವರು ನ. 28 ರಂದು ಅತಿಶಯ ಶ್ರೀ ಕೇತ್ರ ನಲ್ಲೂರು ಬಸದಿಗೆ ಪುರಪ್ರವೇಶ ಮಾಡಿ, ಶ್ರೀ ಕೂಷ್ಮಾಂಡಿನಿ ಸಭಾಭವನದಲ್ಲಿ ನಡೆದ …

ಶ್ರವಣಬೆಳಗೊಳ ಪೀಠಾಧೀಶ ಪುರಪ್ರವೇಶ Read More »

ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಸಲು 21 ದಿನ ಕಾಲಾವಕಾಶ ಕೋರಿದ ಎಎಸ್‌ಐ

ದೆಹಲಿ : ಜ್ಞಾನವಾಪಿ ಮಸೀದಿಯ ಆವರಣದಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಮೂರು ವಾರಗಳ ಕಾಲಾವಕಾಶ ಕೋರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಇಂದು (ನ. 28) ಅರ್ಜಿ ಸಲ್ಲಿಸಿದೆ. ಸಮಗ್ರ ವರದಿಯನ್ನು ಹೊಂದಿಸಲು ಮತ್ತು ಅಂತಿಮಗೊಳಿಸಲು ಹೆಚ್ಚಿನ ಸಮಯವನ್ನು ಕೋರಿ ಎಎಸ್‌ಐ ಅನ್ನು ಪ್ರತಿನಿಧಿಸುವ ಸ್ಥಾಯಿ ಸರಕಾರಿ ವಕೀಲ ಅಮಿತ್ ಶ್ರೀವಾಸ್ತವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. 100 ದಿನಗಳ ಅವಧಿಯ ವ್ಯಾಪಕ ಸಮೀಕ್ಷೆಯು ಸುಮಾರು ಒಂದು ತಿಂಗಳ …

ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಸಲು 21 ದಿನ ಕಾಲಾವಕಾಶ ಕೋರಿದ ಎಎಸ್‌ಐ Read More »

ಮಂಗಳೂರು : ಫ್ಲ್ಯಾಟ್‌ನಲ್ಲಿ ಅಗ್ನಿ ಅವಘಡ – ಮಹಿಳೆ ಮೃತ್ಯು

ಮಂಗಳೂರು : ನಗರದ ಅತ್ತಾವರದಲ್ಲಿ ವಸತಿ ಸಮುಚ್ಚಯದ 12ನೇ ಮಹಡಿಯಲ್ಲಿ ನ. 28 ರ ಮುಂಜಾನೆ ಅಗ್ನಿ ಅನಾಹುತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸಹೈನ್ ಮುಸಾಬ್ (57) ಮೃತಪಟ್ಟ ಮಹಿಳೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ. ಒಂಭತ್ತು ಮಂದಿ ಇದ್ದ ಫ್ಲ್ಯಾಟ್‌ನಲ್ಲಿ ಈ ಘಟನೆ ನಡೆದಿದ್ದು, ಇತರರು ಹೊರ ಬಂದಿದ್ದರು. ಆದರೆ ಮುಸಾಬ್ ಶೌಚಾಲಯದೊಳಗಿದ್ದ ಕಾರಣ ಹೊರಬರಲಾಗದೇ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. …

ಮಂಗಳೂರು : ಫ್ಲ್ಯಾಟ್‌ನಲ್ಲಿ ಅಗ್ನಿ ಅವಘಡ – ಮಹಿಳೆ ಮೃತ್ಯು Read More »

ಕಾರ್ಕಳ : ಪಾದಚಾರಿಗೆ ಬೈಕ್‌ ಡಿಕ್ಕಿ – ಸಾವು

ಕಾರ್ಕಳ : ಶಿವತಿಕೆರೆ ಶ್ರೀ ಉಮಾಮಹೇ‍ಶ್ವರ ದೇವಸ್ಥಾನ ಬಳಿಯ ಬೈಪಾಸ್‌ ರಸ್ತೆಯಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವಿಗೀಡಾದ ಘಟನೆ ನ. 27ರ ಸಂಜೆ ಸಂಭವಿಸಿದೆ. ಸ್ಥಳೀಯ ನಿವಾಸಿ ಕುಟ್ಟಿ (65 ) ಎಂಬವರೇ ಅಪಘಾತದಿಂದ ಮೃತಪಟ್ಟ ದುರ್ದೈವಿ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಸವಾರ ಪರಾರಿಅಪಘಾತವೆಸಗಿ ಸವಾರ ವಾಹನ ಸಮೇತ ಪರಾರಿಯಾಗಿದ್ದು, ಇದುವರೆಗೂ ಯಾರು ಎಂದು ತಿಳಿದು ಬಂದಿಲ್ಲ. ಈ ಕುರಿತು ಕಾರ್ಕಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ʼಎಲಿಕ್ಸಿರ್ʼ ಮಾದರಿ ವಸ್ತು ಪ್ರದರ್ಶನ

ಸೈದ್ದಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಹೊಂದುವುದು ಅವಶ್ಯ : ವಿನಯ್ ಹೆಗ್ಡೆ ಕಾರ್ಕಳ : ಸಂಸ್ಥೆಯ ಇಲೆಕ್ಟ್ರಿಕಲ್ ವಿಭಾಗವು ಸತತ 12 ವರ್ಷಗಳಿಂದ ನಡೆಸುತ್ತಾ ಬಂದಿರುವ ‘ಎಲಿಕ್ಸಿರ್’ ಎಂಬ ಮಾದರಿ ವಸ್ತು ಪ್ರದರ್ಶನವು ವಿಭಾಗದಿಂದ ಸಂಶೋಧನೆಗೆ ಸಿಗುತ್ತಿರುವ ಪ್ರೋತ್ಸಾಹಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗದು. ವಿದ್ಯಾರ್ಥಿಗಳು ಪ್ರಸ್ತುತ ವ್ಯವಸ್ಥೆಯಲ್ಲಿ ಇಂಜಿನಿಯರಿಂಗ್‌ನ ಸೈದ್ದಾಂತಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಸಂಪಾದಿಸಿಕೊಳ್ಳುವುದು ಅವಶ್ಯ ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ …

ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ʼಎಲಿಕ್ಸಿರ್ʼ ಮಾದರಿ ವಸ್ತು ಪ್ರದರ್ಶನ Read More »

ಮಣಿಪಾಲ : ಲಾಡ್ಜ್‌ನಲ್ಲಿ ವೇಶ್ಯವಾಟಿಕೆ – ಮೂವರ ಬಂಧನ

ಉಡುಪಿ : ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ ಬಳಿ ಇರುವ ಉನ್ನತ ರೆಸಿಡೆನ್ಸಿಯ 101 ಮತ್ತು 102 ರಲ್ಲಿ ನ.26 ರಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಉಡುಪಿ ಪೋಲೀಸರು ಬಂಧಿಸಿ ಇಬರು ಸಂತ್ರಸ್ಥ ಮಹಿಳೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಗಣೇಶ್‌, ಸುಧೀರ್‌ ಮತ್ತು ಮಾರುತಿ ಎಂದು ಗುರುತಿಸಲಾಗಿದೆ. ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಜಯಾನಂದ ಕೆ., ಠಾಣೆಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು …

ಮಣಿಪಾಲ : ಲಾಡ್ಜ್‌ನಲ್ಲಿ ವೇಶ್ಯವಾಟಿಕೆ – ಮೂವರ ಬಂಧನ Read More »

error: Content is protected !!
Scroll to Top