ಸುದ್ದಿ

ರಾಜಪಥ-ಇನ್ನಷ್ಟು ಯೋಧರ ಕುಟುಂಬದ ಕಣ್ಣೀರ ಕಥೆಗಳು

ಹುತಾತ್ಮ ಯೋಧರ ಕುಟುಂಬದ ಜತೆ ದೇಶ ಒಂದಾಗಿ ನಿಲ್ಲಬೇಕು ಯೋಧ ಪ್ರಾಂಜಲ್ ಅವರ ಬಲಿದಾನ ಇಡೀ ಕನ್ನಡ ನಾಡಿನಲ್ಲಿ ಉಂಟುಮಾಡಿದ ದುಃಖದ ಅಲೆ ಯುವ ಸಮುದಾಯವನ್ನು ಬಡಿದೆಬ್ಬಿಸಿರುವುದು ಖಂಡಿತ. ಅಲ್ಲಲ್ಲಿ ಯೋಧರ ಸಂಸ್ಮರಣ ಕಾರ್ಯಕ್ರಮಗಳು ಈಗ ನಡೆಯುತ್ತಿವೆ. ಕಾರ್ಕಳ ತಾಲೂಕಿನ ಹಾಳೆಕಟ್ಟೆ ಶಾಲೆಯ ಶತಮಾನೋತ್ಸವ ಸಮಿತಿಯು ನಿರ್ಮಿಸಲು ಉದ್ದೇಶಿಸಿರುವ ಪ್ರಾಂಜಲ್ ಸ್ಮಾರಕದ ಭೂಮಿ ಪೂಜೆಯ ಕಾರ್ಯಕ್ರಮ ತುಂಬ ಭಾವುಕ ಆಗಿತ್ತು. ಇಡೀ ಊರಿಗೆ ಊರೇ ಸೇರಿ ಕಂಬನಿ ಮಿಡಿದದ್ದು ಒಂದು ಅನೂಹ್ಯ ಸಂವೇದನೆ. ಇನ್ನಷ್ಟು ಸೈನಿಕರ ಕುಟುಂಬದ …

ರಾಜಪಥ-ಇನ್ನಷ್ಟು ಯೋಧರ ಕುಟುಂಬದ ಕಣ್ಣೀರ ಕಥೆಗಳು Read More »

ನಗರದ ರಸ್ತೆ ಬದಿ ವ್ಯಾಪಾರ – ಸಾರ್ವಜನಿಕರಿಗೆ ತೊಂದರೆ

ಸಾಮಾಜಿಕ ಕಾರ್ಯಕರ್ತರಿಂದ ಪೊಲೀಸ್‌ ಠಾಣೆಗೆ ದೂರು ಕಾರ್ಕಳ : ನಗರದ ಅನಂತಶಯನ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುವುದರಿಂದ ವಾಹನ ಪಾರ್ಕಿಂಗ್‌ ಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಕುರಿತು ಸೂಕ್ತ ಕ್ರಮ ವಹಿಸುವಂತೆ ಸಾಮಾಜಿಕ ಕಾರ್ಯಕರ್ತರೊರ್ವರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ನಗರದಲ್ಲಿ ವಾಹನ, ದ್ವಿಚಕ್ರ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆಯಿಲ್ಲ. ಇದರ ನಡುವೆ ರಸ್ತೆ ಬದಿ ತಾತ್ಕಾಲಿಕ ನೆಲೆಯಲ್ಲಿ ಅಂಗಡಿಗಳು ತೆರೆದುಕೊಳ್ಳುತ್ತಿದೆ. ಅಂಚೆ ಕಚೇರಿ, ಅನಂತಶಯನ ಸುತ್ತಮುತ್ತ ಪರವಾನಿಗೆ ಇಲ್ಲದೇ ಅಂಗಡಿ ಮುಂಗಟ್ಟುಗಳು ಕಾರ್ಯಾಚರಿಸುತ್ತಿದೆ …

ನಗರದ ರಸ್ತೆ ಬದಿ ವ್ಯಾಪಾರ – ಸಾರ್ವಜನಿಕರಿಗೆ ತೊಂದರೆ Read More »

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಎಕ್ಸಲೆಂಟ್, ಎಸ್‌ಡಿಎಂಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ : ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಎಷ್ಟು ಮುಖ್ಯವೋ, ಅಷ್ಟೇ ಪಠ್ಯೇತರ ಚಟುವಟಿಕೆಗಳು ಕೂಡ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದೆ. ವಿದ್ಯಾರ್ಥಿಗಳಲ್ಲಿ ಕೌಶಲ ಅಭಿವೃದ್ಧಿಗೆ ಈ ರೀತಿಯ ಚಟಿವಟಿಕೆಗಳು ಬಹಳ ಅಗತ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ (ಪ.ಪೂ ಶಿಕ್ಷಣ) ಮಂಗಳೂರು ವಿಭಾಗದ ಉಪನಿರ್ದೇಶಕ ಜಯಣ್ಣ ಸಿ.ಡಿ. ಹೇಳಿದರು. ಅವರು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ದ.ಕ. ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಶಿಕ್ಷಣ), ಮೂಡಬಿದಿರೆ ಎಕ್ಸಲೆಂಟ್ ವಿಜ್ಞಾನ …

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಎಕ್ಸಲೆಂಟ್, ಎಸ್‌ಡಿಎಂಗೆ ಸಮಗ್ರ ಪ್ರಶಸ್ತಿ Read More »

ಕಲ್ಯಾ ಶಾಲೆಯಲ್ಲಿ ಕ್ಯಾ. ಪ್ರಾಂಜಲ್‌ ಸ್ಮಾರಕಕ್ಕೆ ಭೂಮಿ ಪೂಜೆ

ಕಾರ್ಕಳದಲ್ಲಿ ಸೈನಿಕ ಶಾಲೆ ಸ್ಥಾಪನೆ ಚಿಂತನೆ – ಸುನಿಲ್‌ ಕುಮಾರ್‌ ಸೇನೆ ಸೇರಲು ಪ್ರೇರೇಪಣೆ ಅವಶ್ಯ – ನಿವೃತ್ತ ಸೈನಿಕ ಸುಬೇದಾರ್‌ ವಿಜಯ್‌ ಫೆರ್ನಾಂಡೀಸ್‌ ಕಾರ್ಕಳ : ನಮ್ಮ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರ್ಪಡೆಯಾಗುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸೈನಿಕ ಶಾಲೆ ಸ್ಥಾಪನೆ ತೆರೆಯುವ ಚಿಂತನೆಯಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಹೇಳಿದರು.ಅವರು ನ. 29ರಂದು ಕಲ್ಯಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹುತಾತ್ಮ ಯೋಧ ಕ್ಯಾ. ಪ್ರಾಂಜಲ್‌ ಸ್ಮಾರಕ ನಿರ್ಮಾಣ ಭೂಮಿ ಪೂಜೆ …

ಕಲ್ಯಾ ಶಾಲೆಯಲ್ಲಿ ಕ್ಯಾ. ಪ್ರಾಂಜಲ್‌ ಸ್ಮಾರಕಕ್ಕೆ ಭೂಮಿ ಪೂಜೆ Read More »

ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಾದ ಪಡೆದ ಸುನಿಲ್‌ ಕುಮಾರ್‌

ಕಾರ್ಕಳ : ಪ್ರಥಮ ಬಾರಿಗೆ ನಲ್ಲೂರಿಗೆ ಪುರ ಪ್ರವೇಶಗೈದಿರುವ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೀಠಾಧೀಶರಾದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ನ. 29ರಂದು ಶಾಸಕ ವಿ. ಸುನಿಲ್ ಕುಮಾರ್ ಭೇಟಿ ಮಾಡಿ ಆಶೀರ್ವಾದ ಪಡೆದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಜ್ಞಾನಸುಧಾ ಕಾಲೇಜು ವಾರ್ಷಿಕೋತ್ಸವ

ಸಾಧನೆಗೆ ಶ್ರದ್ಧೆ, ಕಠಿಣ ಪರಿಶ್ರಮ ಮುಖ್ಯ – ಸುನಿಲ್‌ ಕುಮಾರ್‌ ಕಾರ್ಕಳ : ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಶ್ರದ್ಧೆ, ಕಠಿಣ ಪರಿಶ್ರಮ ಮುಖ್ಯ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು. ಅವರು ನ. 29ರಂದು ಜ್ಞಾನಸುಧಾ ಕಾಲೇಜಿನ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆಯಿರಬೇಕು. ಆ ಶ್ರದ್ಧೆ, ಪರಿಶ್ರಮವೇ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದು. ಇದೇ ಕಾರಣಕ್ಕಾಗಿ ಪೇಪರ್‌ ವಿತರಣೆ ಮಾಡುತ್ತಿದ್ದ ಅಬ್ದುಲ್‌ ಕಲಾಂ ಅವರು ವಿಜ್ಞಾನಿ, ರಾಷ್ಟ್ರಪತಿಯಾದರು. …

ಜ್ಞಾನಸುಧಾ ಕಾಲೇಜು ವಾರ್ಷಿಕೋತ್ಸವ Read More »

ಕಲಿಕೆ ಕೌಶಲವಾಗಿ ಪರಿವರ್ತನೆಯಾದರೆ ಜ್ಞಾನಕ್ಕೆ ಮಹತ್ವ : ಪುರುಷೋತ್ತಮ ಸಂಪಂಗಿ

ವೈಬ್ರಂಟ್ ಕಾಲೇಜಿನಲ್ಲಿ ರೋಬೋಟಿಕ್ಸ್ ಕೃತಕ ಬುದ್ಧಿಮತ್ತೆ ವಿಷಯಾಧಾರಿತ ಕಾರ್ಯಾಗಾರ ಮೂಡುಬಿದಿರೆ : ಕಲಿಕೆಯನ್ನು ಜ್ಞಾನ ವೃದ್ಧಿಗೆ ಮಾತ್ರ ಸೀಮಿತವಾಗಿಸದೆ ಕೌಶಲವಾಗಿ ಪರಿವರ್ತಿಸಿ ಜೀವನದಲ್ಲಿ ಅಳವಡಿಸಿಕೊಡರೆ ಜ್ಞಾನಕ್ಕೆ ಮಹತ್ವವಿರುತ್ತದೆ. ಮನುಷ್ಯ ತನ್ನ ಜ್ಞಾನವನ್ನು ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಬಳಸಿಕೊಳ್ಳುತ್ತಾನೆ ಎಂಬುದನ್ನು ರೋಬೋಟಿಕ್ಸ್ ಕೃತಕ ಬುದ್ಧಿಮತ್ತೆಯಲ್ಲಿ ನೋಡಬಹುದಾಗಿದೆ ಎಂದು ಮೂಡುಬಿದಿರೆಯ ಸಿಎಸ್‌ಡಿಸಿ ಸಮೂಹ ಕಂಪನಿಗಳ ಸಂಸ್ಥಾಪಕ ಪುರುಷೋತ್ತಮ ಸಂಪಂಗಿ ಹೇಳಿದರು.ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರಂಟ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ‘ವಿ ಪ್ರೇರಣಾ’ದ ಅಡಿಯಲ್ಲಿ ರೋಬೋಟಿಕ್ಸ್ ಕೃತಕ …

ಕಲಿಕೆ ಕೌಶಲವಾಗಿ ಪರಿವರ್ತನೆಯಾದರೆ ಜ್ಞಾನಕ್ಕೆ ಮಹತ್ವ : ಪುರುಷೋತ್ತಮ ಸಂಪಂಗಿ Read More »

ಕಾರ್ಕಳ ಕಲಂಬಾಡಿಪದವಿನಲ್ಲಿ ಗುರುಕುಲ ಮಾದರಿ ಶಾಲೆ

ಶಾಸಕರ ಪರಿಕಲ್ಪನೆಯಲ್ಲಿ ನಿರ್ಮಾಣವಾದ ವಿದ್ಯಾದೇಗುಲ – ಡಿ. 23ರಂದು ಉದ್ಘಾಟನೆ ಕಾರ್ಕಳ : ಪ್ರಾಚೀನ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು. ಇದು ಅತ್ಯಂತ ಶ್ರೇಷ್ಠವಾದ ಶಿಕ್ಷಣ ಪದ್ಧತಿಯಾಗಿದ್ದರೂ ಅದೇ ನೈಸರ್ಗಿಕ ಮಾದರಿಯಲ್ಲಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆಯೆರೆಯುವುದು ಕಷ್ಟ ಸಾಧ್ಯ. ಆದರೆ, ಆ ದಿಸೆಯಲ್ಲಿ ಸಾಗುವ ಪ್ರಯತ್ನ ಮಾಡಬಹುದಾಗಿದೆ. ಇದಕ್ಕೊಂದು ಉದಾಹರಣೆ ಕಲಂಬಾಡಿಪದವು ಶಾಲೆ. ನಿಟ್ಟೆ ಗ್ರಾಮದ ಅತ್ತೂರು ಸಮೀಪ ಕಲಂಬಾಡಿಪದವು ಶಾಲೆ ಗುರುಕುಲ ಮಾದರಿಯ ವಿದ್ಯಾದೇಗುಲವಾಗಿ ರೂಪುಗೊಳ್ಳುತ್ತಿದೆ. 1976ರಲ್ಲಿ ದಿ. ಶ್ಯಾಮ್‌ ಹೆಗ್ಡೆ, …

ಕಾರ್ಕಳ ಕಲಂಬಾಡಿಪದವಿನಲ್ಲಿ ಗುರುಕುಲ ಮಾದರಿ ಶಾಲೆ Read More »

ಕಾಸರಗೋಡಿನಿಂದ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳು ಉಡುಪಿಯಲ್ಲಿ ಪತ್ತೆ

ಗೋವಾಕ್ಕೆ ಹೊರಟಿದ್ದರು ಅಪ್ರಾಪ್ತ ವಯಸ್ಸಿನ ಬಾಲಕರು ಉಡುಪಿ : ಕಾಸರಗೋಡಿನಿಂದ ನಾಪತ್ತೆಯಾಗಿದ್ದ ನಾಲ್ವರು ಬಾಲಕರು ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ಈ ನಾಲ್ಕು ಬಾಲಕರ ಪೈಕಿ ಮೂವರು ಮಕ್ಕಳು ನ.27ರಂದು ಸಂಜೆ ಶಾಲೆಯಿಂದ ಮನೆಗೆ ಬಂದಿದ್ದು, ಬಳಿಕ ಆಟ ಆಡಲೆಂದು ಮನೆಯಿಂದ ಹೊರಗೆ ತೆರಳಿದ್ದರು. ಈ ಮೂವರು ಬಾಲಕರೊಂದಿಗೆ ಇದೇ ಪ್ರದೇಶದ ಇನ್ನೋರ್ವ ಬಾಲಕನೂ ತೆರಳಿದ್ದು, ನಾಲ್ವರು ತಡವಾದರೂ ಇನ್ನೂ ಮನೆಗೆ ಬಂದಿರಲಿಲ್ಲ. ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದ್ದರಿಂದ ಆತಂಕಗೊಂಡ ಬಾಲಕರ ಪೋಷಕರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.ಬಳಿಕ …

ಕಾಸರಗೋಡಿನಿಂದ ನಾಪತ್ತೆಯಾಗಿದ್ದ ನಾಲ್ಕು ಮಕ್ಕಳು ಉಡುಪಿಯಲ್ಲಿ ಪತ್ತೆ Read More »

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ದೇಶಕ್ಕೆ ಭಾವುಕ ಕ್ಷಣ : ಮೋದಿ

ಕಾರ್ಮಿಕರ ಜತೆ ಫೋನಿನಲ್ಲಿ ಮಾತನಾಡಿದ ಪ್ರಧಾನಿ ಹೊಸದಿಲ್ಲಿ : ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹರ್ಷ ವ್ಯಕ್ತಪಡಿಸಿದ್ದಾರೆ. ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ತಾಳ್ಮೆ, ಧೈರ್ಯವನ್ನು ಕೊಂಡಾಡಿ ಟ್ವೀಟ್‌ ಮಾಡಿರುವ ಮೋದಿ, ಇದೊಂದು ಭಾವುಕ ಕ್ಷಣ ಎಂದು ಬಣ್ಣಿಸಿದ್ದಾರೆ. ಅಲ್ಲದೆ, 17 ದಿನಗಳ ನಂತರ ತಮ್ಮವರನ್ನು ಕಾಣುತ್ತಿರುವ ಕಾರ್ಮಿಕರಿಗೆ ಶುಭ ಕೋರಿದ್ದಾರೆ.ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ …

ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ದೇಶಕ್ಕೆ ಭಾವುಕ ಕ್ಷಣ : ಮೋದಿ Read More »

error: Content is protected !!
Scroll to Top