ವೈರಲ್ ಸುದ್ದಿ

ಮಂಗಳೂರು : ಬಲೆಗೆ ಬಿದ್ದ 300 ಕೆ.ಜಿ ತೂಕದ ಮುರು ಮೀನು

ಮಂಗಳೂರು : ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದ್ದು ಬಿದ್ದಿದೆ.ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರದ ಮೀನುಗಾರಿಕೆಗೆಂದು ಹೊರಟ ಬೋಟ್‌ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 300 ಕೆ.ಜಿ ತೂಕವಿರುವ ಈ ಮೀನನ್ನು ಬಲೆಯಿಂದ ಮೇಲಕ್ಕೆತ್ತಲು ಮೀನುಗಾರರು ಹರಸಾಹಸಪಟ್ಟಿದ್ದಾರೆ. ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣ ಸಿಗುವುದು ವಿರಳ. ಕೆ.ಜಿ.ಗೆ 200 ರಂತೆ ಮೀನು ಮಾರಾಟವಾಗಿದೆ ಎಂದು ಮೀನುಗಾಗರರು ತಿಳಿಸಿದ್ದಾರೆ. ಇನ್ನು ಇಷ್ಟು ಬೃಹತ್‌ ಗಾತ್ರದ ಮೀನನ್ನು ಕಂಡು …

ಮಂಗಳೂರು : ಬಲೆಗೆ ಬಿದ್ದ 300 ಕೆ.ಜಿ ತೂಕದ ಮುರು ಮೀನು Read More »

ನಾಗರಹಾವಿಗೆ ಡೀಸೆಲ್‌ ಎರಚಿದ ಕಾರ್ಮಿಕ ಒಂದೇ ವಾರದಲ್ಲಿ ಅಸ್ವಸ್ಥ

ಹಾವಿಗೆ ಆದಂತೆ ಮೈ ಉರಿ ಬಂದು ಆಸ್ಪತ್ರೆಗೆ ದಾಖಲು ಕಿನ್ನಿಗೋಳಿ: ನಾಗರಹಾವಿನ ಮೇಲೆ ಡೀಸೆಲ್‌ ಎರಚಿದ ವ್ಯಕ್ತಿ ಒಂದೇ ವಾರದಲ್ಲಿ ಅಸ್ವಸ್ಥಗೊಂಡು ನಾಗರಹಾವಿನಂತೆ ಉರಿಯಿಂದ ಒದ್ದಾಡಿ ಆಸ್ಪತ್ರೆಗೆ ದಾಖಲಾಗಿರುವ ವಿಚಿತ್ರ ಘಟನೆಯೊಂದು ಕಿನ್ನಿಗೋಳಿಯಲ್ಲಿ ಸಂಭವಿಸಿದ್ದು, ಸ್ಥಳೀಯರು ಇದು ನಾಗನದ್ದೇ ಶಾಪ ಎನ್ನುತ್ತಿದ್ದಾರೆ.ಕಿನ್ನಿಗೋಳಿ ಅಪಾರ್ಟ್‌ಮೆಂಟ್‌ ಒಂದರ ಸಮೀಪ ಕಳೆದ ವಾರ ನಾಗರಹಾವು ಕಂಡುಬಂದಿತ್ತು. ಕಟ್ಟಡದ ಕಾವಲುಗಾರ ಈ ನಾಗರಹಾವನ್ನು ಓಡಿಸಲು ಅದರ ಮೇಲೆ ಡೀಸೆಲ್‌ ಎರಚಿದ್ದಾನೆ. ಡೀಸೆಲ್‌ ಉರಿಯಿಂದ ನಾಗರಹಾವು ಒದ್ದಾಡಿತ್ತು.ಸ್ಥಳೀಯರು ಉರಗ ರಕ್ಷಕ ಯತೀಶ್‌ ಕಟೀಲು ಅವರಿಗೆ …

ನಾಗರಹಾವಿಗೆ ಡೀಸೆಲ್‌ ಎರಚಿದ ಕಾರ್ಮಿಕ ಒಂದೇ ವಾರದಲ್ಲಿ ಅಸ್ವಸ್ಥ Read More »

ರಾಷ್ಟ್ರಗೀತೆ ಹಾಡಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕಿ ಮೇರಿ ಮಿಲ್ಬೆನ್

ನವದೆಹಲಿ: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿಯೊಬ್ಬರು ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದು, ಮೋದಿ ಅವರು ತಮ್ಮ ಅಮೇರಿಕಾ ಪ್ರವಾಸದ ವೇಳೆ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಎನ್‌ಆರ್‌ಐ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ರಾಷ್ಟ್ರ ಗೀತೆ ಜನಗಣಮನ ಗೀತೆ ಮೊಳಗಿದಾಗ ಭಾರತೀಯರಿಗೆ ರೋಮಾಂಚನ, ಗೌರವ ಮೂಡುವ ಕ್ಷಣ. ಎಲ್ಲೇ …

ರಾಷ್ಟ್ರಗೀತೆ ಹಾಡಿ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಗಾಯಕಿ ಮೇರಿ ಮಿಲ್ಬೆನ್ Read More »

ಉಡುಪಿ: ಫುಡ್ ಡೆಲಿವರಿ‌ ಬಾಯ್‌ ವೇಷದಲ್ಲಿ ಗಾಂಜಾ ಮಾರಾಟ, ಮೂವರ ಬಂಧನ

ಉಡುಪಿ: ಫುಡ್‌ ಡೆಲಿವರಿ ಬಾಯ್‌ ವೇಷದಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಯತ್ನಿಸುತಿದ್ದ ಮೂವರು ಆರೋಪಿಗಳನ್ನು ಉಡುಪಿ ಅಪರಾಧ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಾದ ರವಿ ಶಂಕರ್‌, ಅಂಜಲ್‌ ಬೈಜು ಹಾಗೂ ದೇವಿಪ್ರಸಾದ್‌ ಇವರನ್ನು ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಬಂಧಿಸಲಾಗಿದ್ದು ಬಂಧಿತ ಆರೋಪಿಗಳಿಂದ 1 ಕೆಜಿ 277 ಗ್ರಾಂ ತೂಕದ ಗಾಂಜಾ, ಎರಡು ಬೈಕ್‌, ಫುಡ್‌ ಡೆಲಿವರಿ ಬ್ಯಾಗ್‌, 4 ಮೊಬೈಲ್‌ ಫೋನ್‌ಗಳು ಮತ್ತು ಮೂವತ್ತು ಸಾವಿರ ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು ರೂ.1.37 ಲಕ್ಷ ಮೌಲ್ಯಗಳ ಸ್ವತ್ತನ್ನು …

ಉಡುಪಿ: ಫುಡ್ ಡೆಲಿವರಿ‌ ಬಾಯ್‌ ವೇಷದಲ್ಲಿ ಗಾಂಜಾ ಮಾರಾಟ, ಮೂವರ ಬಂಧನ Read More »

ಶಿರೂರು ಟೋಲ್ ನಲ್ಲಿ ಪಲ್ಟಿಯಾದ ಆ್ಯಂಬುಲನ್ಸ್ : ಮೂವರ ಸಾವು

ಶಿರೂರು : ಅತಿವೇಗದಿಂದ ಬಂದ ಆ್ಯಂಬುಲನ್ಸ್ ಟೋಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಶಿರೂರು ಟೋಲ್‌ನಲ್ಲಿ ಬುಧವಾರ ಸಂಭವಿಸಿದೆ. ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ರೋಗಿಯನ್ನು ಕರೆ ತರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ‌ ರಭಸವಾಗಿ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡು ಮೂವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ಭಯಾನಕ ವಿಡಿಯೋಗಾಗಿ

ಭಾವಿ ಪತಿಯನ್ನೇ ಜೈಲಿಗೆ ಕಳುಹಿಸಿದ ಪೊಲೀಸ್ ಸಬ್ಇನ್‌ಸ್ಪೆಕ್ಟರ್

ಗುವಾಹಟಿ : ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಅನೇಕರಿಗೆ ವಂಚನೆ ಮಾಡಿದ್ದ ಕಿರಾತಕನೊಬ್ಬನನ್ನು ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅಸ್ಸಾಂನ ನಾಗಾನ್‌ನ ಪೊಲೀಸ್ ಅಧಿಕಾರಿ ಜುನ್ಮೋನಿ ರಭಾ ಅವರು ದಾಖಲಿಸಿದ ಎಫ್‌ಐಆರ್ ಅನುಗುಣವಾಗಿ ಅವರ ಭಾವಿ ಪತಿ ರಾಣಾ ಪೊಗಾಗ್ ಎಂಬಾತನನ್ನು ಬಂಧಿಸಲಾಗಿದೆ.ತಾನು ಅಸ್ಸಾಂನಲ್ಲಿನ ಒಎನ್‌ಜಿಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪೊಗಾಗ್ ಸುಳ್ಳು ಹೇಳಿಕೊಂಡಿದ್ದ. ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ. ಹೀಗೆ ಆತ ಜನರಿಂದ ಕೋಟ್ಯಂತರ …

ಭಾವಿ ಪತಿಯನ್ನೇ ಜೈಲಿಗೆ ಕಳುಹಿಸಿದ ಪೊಲೀಸ್ ಸಬ್ಇನ್‌ಸ್ಪೆಕ್ಟರ್ Read More »

ದೇವಸ್ಥಾನದ ಆಭರಣ ಕದ್ದು ಪರಾರಿಯಾಗುವಾಗ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿದ ಕಳ್ಳ

ಶ್ರೀಕಾಕುಳಂ : ತಾನು ತೋಡಿದ ಖೆಡ್ಡಾಗೆ ಕಳ್ಳನೋರ್ವ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾನೆ. ಕದ್ದ ಮಾಲುಗಳೊಂದಿಗೆ ಪಾರಾರಿಯಾಗುವಾಗ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾನೆ.ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಶ್ರೀಕಾಕುಳಂ ಎಂಬಲ್ಲಿ. ಕಳ್ಳನೊಬ್ಬ ದೇವಾಲಯವೊಂದರಿಂದ ಆಭರಣಗಳನ್ನು ಕದಿಯಲು ದೇವಸ್ಥಾನದ ಗೋಡೆಯಲ್ಲಿ ರಂಧ್ರ ಕೊರೆದಿದ್ದಾನೆ. ದೇಗುಲವನ್ನು ದೋಚಿ ಹೊರ ಬರುವಾಗ, ರಂಧ್ರದಲ್ಲಿ ಸಿಲುಕಿ ಹೊರ ಬರಲು ಆಗದೇ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳನನ್ನು 30 ವರ್ಷದ ಪಾಪ ರಾವ್ ಎಂದು ಗುರುತಿಸಲಾಗಿದೆ. ದೇವಸ್ಥಾನದ ಕಿಟಕಿ ಒಡೆದು ಒಳಗೆ ನುಗ್ಗಿದ್ದ ಕಳ್ಳ, ದೇವರ ಆಭರಣ …

ದೇವಸ್ಥಾನದ ಆಭರಣ ಕದ್ದು ಪರಾರಿಯಾಗುವಾಗ ತಾನೇ ಕೊರೆದ ರಂಧ್ರದಲ್ಲಿ ಸಿಲುಕಿದ ಕಳ್ಳ Read More »

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ

ಮಾನವರ ಮುಖವನ್ನೇ ಹೋಲುವ ವಿಚಿತ್ರ ಮೀನೊಂದು ಕರ್ನಾಟಕದಲ್ಲಿ ಪತ್ತೆಯಾಗಿದೆ. ಕೊಪ್ಪಳದ ವಿರುಪಾಪುರ ಗಡ್ಡೆಯ ನದಿ ಪಾತ್ರದಲ್ಲಿ ಪತ್ತೆಯಾಗಿರುವ ಮೀನು ಎಲ್ಲರ ಅಚ್ಚರಿಗೆ ಕಾರಣವಾಗಿದೆ.  ಈ ಮೀನಿನ ವಿಶೇಷತೆ ಎಲ್ಲರನ್ನೂ ಅಚ್ಚರಿಗೊಳ್ಳುವಂತೆ ಮಾಡಿದೆ. ಇದೇ ಕಾರಣದಿಂದ ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಹಂಪಿ ಮತ್ತು ವಿರುಪಾಪುರ ಗಡ್ಡೆ ಮಧ್ಯೆ ಹರಿಯುವ ನದಿಯಲ್ಲಿ ಪತ್ತೆಯಾಗಿರುವ ಮೀನಿನ ಬಾಯಿಯಲ್ಲಿ ಮನುಷ್ಯನಂತೆ ಹಲ್ಲುಗಳು ಇವೆ. ಮೀನನ್ನು ನೋಡಿ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಫಿ ಎನ್ನುವ ವ್ಯಕ್ತಿ ಮೀನು ಹಿಡಿಯುವಾಗ …

ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ Read More »

ಮದುವೆ ಸಮಾರಂಭದಲ್ಲಿ ಬೆಂಕಿ ಬಿದ್ದರೂ, ಊಟ ಬಿಟ್ಟು ಕದಲಲಿಲ್ಲ !

ಅನೇಕರು ಮದುವೆ `ಸಮಾರಂಭಗಳನ್ನು ನಮ್ಮಲ್ಲಿ ನೋಡುವುದಕ್ಕಿಂತಲೂ ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಮಾಡಿದಂತಹ ಊಟದ ರುಚಿ ಸವಿಯಲು ಹೋಗುವುದುಂಟು. ಇದರಲ್ಲೇನೂ ತಪ್ಪಿಲ್ಲ ಬಿಡಿ ಅವರವರ ಇಷ್ಟಾರ್ಥಗಳು ಅವರವರಿಗೆ ಬಿಟ್ಟಿದ್ದು . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮದುವೆಯ ಸಮಾರಂಭದಲ್ಲಿ ಅತಿಥಿಗಳು ಭೋಜನ ಆನಂದಿಸುತ್ತಿದ್ದರೆ, ಹಿಂಬದಿಯಲ್ಲಿ ಭಾರಿ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದದ್ದನ್ನು ನೋಡಬಹುದು. ಹೌದು, ಮುಂಬೈ ಖಬರ್ 9 ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ 24 ಸೆಕೆಂಡಿನ ವಿಡಿಯೋ ತುಣುಕಿನಲ್ಲಿ ಥಾಣೆಯ ಭವಾಂಡಿಯ ಅನ್ಸಾರಿ ಮ್ಯಾರೇಜ್ ಹಾಲ್‌ನಲ್ಲಿ ಭಾನುವಾರ ಸಂಜೆ …

ಮದುವೆ ಸಮಾರಂಭದಲ್ಲಿ ಬೆಂಕಿ ಬಿದ್ದರೂ, ಊಟ ಬಿಟ್ಟು ಕದಲಲಿಲ್ಲ ! Read More »

ಹುಲಿಗಳೊಂದಿಗೆ ಸೆಣಸಿದ ಬೆಕ್ಕಿನ ಮರಿ ! ಇದು ಅಚ್ಚರಿಯಾದರೂ ಸತ್ಯ

ಯುನೈಟೆಡ್ ಅರಬ್ ಎಮಿರೆಟ್ಸ್ ಪ್ರಮುಖ ನಗರಗಳಲ್ಲಿ ಒಂದಾದ ದುಬೈನ ಆಡಳಿತಗಾರ ಮೊಹಮ್ಮದ್ ಬಿನ್ ರಶೀದ್ ಆಲ್ ಮಕಮ್, ಪುತ್ರಿಯರಲ್ಲಿ ಒಬ್ಬರಾದ ಶೇಖ್ ಲತೀಫಾ ಅವರು, ಮೂರು ಹುಲಿಗಳೊಂದಿಗೆ ಬೆಕ್ಕಿನ ಮರಿಯೊಂದು ಸೆಣಸಾಡುವ ಮೈನವಿರೇಳಿಸುವ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಲತೀಫಾ ಅವರು ಶೇರ್ ಮಾಡಿರುವುದು ಸಿಟಿಟಿವಿ ವಿಡಿಯೋಗಳಾಗಿವೆ. ಹುಲಿಗಳಿರುವ ಜಾಗಕ್ಕೆ ಆಕಸ್ಮಿಕವಾಗಿ ಹೋಗುವ ಬೆಕ್ಕಿನ ಮರಿಯನ್ನು ನೋಡಿ ಮೂರು ಹುಲಿಗಳು ಏಕಾಮಿಕ ದಾಳಿ ಮಾಡಿವೆ. ಯಾವುದಕ್ಕೂ ಹೆದರದ ಮರಿ, ಮೂರು ಹುಲಿಗಳೊಂದಿಗೆ ಸೆಣಸಾಡಿ ಕೊನೆಗೆ ಇಬ್ಬರು ಕಾವಲುಗಾರರ ರಕ್ಷಣೆಯಿಂದ …

ಹುಲಿಗಳೊಂದಿಗೆ ಸೆಣಸಿದ ಬೆಕ್ಕಿನ ಮರಿ ! ಇದು ಅಚ್ಚರಿಯಾದರೂ ಸತ್ಯ Read More »

error: Content is protected !!
Scroll to Top