ಸಂಪಾದಕೀಯ

ಸಂಪಾದಕೀಯ-ವಿಜಯೇಂದ್ರ ನಡೆಯಬೇಕಾದ ಹಾದಿ ಬಲುದುರ್ಗಮ

ಲೋಕಸಭೆ ಚುನಾವಣೆಯೇ ಮೊದಲ ಸವಾಲು ಕಾರ್ಕಳ : ಬಿಜೆಪಿ ಹೈಕಮಾಂಡ್‌ ಅಳೆದೂ ಸುರಿದೂ ಕೊನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿಯನ್ನು ಮುನ್ನಡೆಸುವ ಚುಕ್ಕಾಣಿ ನೀಡಿದೆ. ಈ ಮೂಲಕ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನನ್ನು ಆರಿಸದ ಪಕ್ಷ ಎಂಬ ಟೀಕಾಕಾರರ ಬಾಯಿ ಮುಚ್ಚಿಸಿದೆ. ಮಗನಿಗೆ ಪಕ್ಷದಲ್ಲಿ ಆಯಕಟ್ಟಿನ ಹುದ್ದೆ ಕೊಡಿಸಬೇಕೆನ್ನುವ ಯಡಿಯೂರಪ್ಪನವರ ಆಶೆಯೂ ಈ ಮೂಲಕ ಈಡೇರಿದೆ.ಹಾಗೆಂದು ವಿಜಯೇಂದ್ರ ಮುಂದಿರುವುದು ಮುಳ್ಳಿನ ಹಾದಿ ಎನ್ನುವುದು ನೆನಪಿಟ್ಟುಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ …

ಸಂಪಾದಕೀಯ-ವಿಜಯೇಂದ್ರ ನಡೆಯಬೇಕಾದ ಹಾದಿ ಬಲುದುರ್ಗಮ Read More »

ಸಂಪಾದಕೀಯ-ಕಾನೂನು v/s ಮಾನವೀಯತೆಯ ನಡುವಿನ ಸಂಘರ್ಷ

ಮುಷ್ಕರದಿಂದ ಅತಂತ್ರರಾಗಿದ್ದಾರೆ ಸಾವಿರಾರು ಕಾರ್ಮಿಕರು ಕಾರ್ಕಳ : ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳನ್ನು ತಡೆದು ಪೊಲೀಸರು ಕೇಸು ದಾಖಲಿಸಿಕೊಳ್ಳುತ್ತಿರುವ ಕ್ರಮವನ್ನು ಖಂಡಿಸಿ ಲಾರಿ ಟೆಂಪೊ ಮಾಲೀಕರು ಮತ್ತು ಚಾಲಕರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಉಡುಪಿಗೆ ಡಾ.ಅರುಣ್‌ ಎಸ್‌ಪಿಯಾಗಿ ಬಂದ ಬಳಿಕ ಅಕ್ರಮ ಗಣಿಗಾರಿಕೆ ವಿರುದ್ಧ ಪೊಲೀಸರು ಮುಗಿಬಿದ್ದ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ.ಕಾನೂನುಬದ್ಧವಾಗಿ ಮಾಡುವ ಗಣಿಗಾರಿಕೆಗೆ ಅಡ್ಡಿಯಿಲ್ಲ. ಆದರೆ ಅಕ್ರಮವಾಗಿ ಯಾವುದೇ ಚಟುವಟಿಕೆ ನಡೆಸಲು ಬಿಡುವುದಿಲ್ಲ ಎನ್ನುವುದು ಪೊಲೀಸರ ವಾದ. ಆದರೆ ಲಾಗಾಯ್ತಿನಿಂದ …

ಸಂಪಾದಕೀಯ-ಕಾನೂನು v/s ಮಾನವೀಯತೆಯ ನಡುವಿನ ಸಂಘರ್ಷ Read More »

ಸಂಪಾದಕೀಯ

ಕಾರ್ಕಳದಲ್ಲಿ ನಿಲ್ಲದ ರಾಜಕೀಯ ಕೆಸರೆರಚಾಟ – ಅಭಿವೃದ್ಧಿಯತ್ತ ಚಿತ್ತ ಹರಿಸಲಿ ರಾಜಕೀಯ ಪಕ್ಷ ಕರಾವಳಿಯ ಕೊನೆಯಂತಿರುವ, ಮಲೆನಾಡಿನ ಮೊನೆಯಂತಿರುವ ಕಾರ್ಕಳ ಬಹುಷಃ ರಾಜ್ಯದಲ್ಲೇ ಅತ್ಯಂತ ಸುರಕ್ಷಿತ, ಸಾಮರಸ್ಯದ ನಾಡು. ಶಿಲ್ಪಕಲೆ, ಸಾಹಿತ್ಯ, ಭೌಗೋಳಿಕವಾಗಿಯೂ ಸಮೃದ್ಧವಾಗಿರುವ ನೆಲ. ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿರುವ ಕಾರ್ಕಳ ರಾಜಕೀಯ ಕ್ಷೇತ್ರದಲ್ಲೂ ರಾಜ್ಯ, ರಾಷ್ಟ್ರಮಟ್ಟದ ನಾಯಕರನ್ನು ಬೆಳೆಸಿದ ಊರು. ಚುನಾವಣೆ ಸಂದರ್ಭ ರಾಜಕೀಯ ಬೆಳವಣಿಗೆಗಳು ಗರಿಗೆದರಿದರೂ ಅನಂತರ ಮೌನವಾಗುವುದು ಇಲ್ಲಿನ ಸಂಪ್ರದಾಯ. ಚುನಾವಣೆ ಅನಂತರ ರಾಜಕೀಯ ದ್ವೇಷ, ಆರೋಪ – ಪ್ರತ್ಯಾರೋಪ ಅನ್ನುವುದು …

ಸಂಪಾದಕೀಯ Read More »

ವಾಣಿಜ್ಯ ನ್ಯಾಯಾಲಯಗಳ ಕಾಯಿದೆ 2015 – ಕಾನೂನು ಮಾಹಿತಿ

ದೇಶದಾದ್ಯಂತ ಮೂರು ಲಕ್ಷ ರೂ.ಗಳಿಗಿಂತ ಜಾಸ್ತಿ ಮೌಲ್ಯದ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ವಿವಾದಗಳನ್ನು ಶೀಘ್ರವಾಗಿ ತೀರ್ಮಾನಗೊಳಿಸುವ ಉದ್ದೇಶದಿಂದ 2015 ರಲ್ಲಿ ಕೇಂದ್ರ ಸರಕಾರವು ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ 2015 ಜಾರಿಮಾಡಿದೆ. ಇದರ ಪ್ರಕಾರ ಸಿವಿಲ್ ಪ್ರೋಸೀಜರ್ ಕೋಡ್ 1908ರ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಲಾಗಿರುತ್ತದೆ. ರಾಜ್ಯ ಸರಕಾರವು ಸಂಬಂಧಪಟ್ಟ ಉಚ್ಚ ನ್ಯಾಯಾಲಯ (ಹೈ ಕೋರ್ಟ್) ನೊಂದಿಗೆ ಸಮಾಲೋಚಿಸಿ ವಾಣಿಜ್ಯ ವ್ಯವಹಾರಗಳಿಗೆ ಸಂಬಂದಿಸಿದ ವಿವಿಧ ವಿವಾದಗಳನ್ನು ತೀರ್ಮಾನಿಸಲು ಅಗತ್ಯವುಳ್ಳ ವಾಣಿಜ್ಯ ನ್ಯಾಯಾಲಯಗಳನ್ನು ರಚಿಸಿ ಸೂಕ್ತ ಅಧಿಕಾರವನ್ನು ನೀಡಲಾಗಿರುತ್ತದೆ. ಈ …

ವಾಣಿಜ್ಯ ನ್ಯಾಯಾಲಯಗಳ ಕಾಯಿದೆ 2015 – ಕಾನೂನು ಮಾಹಿತಿ Read More »

ಸಂಪಾದಕೀಯ -ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆ ಗ್ರೇಟ್‌

ಸ್ವಾರ್ಥಿ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುವ ಹಾಲಾಡಿ ಕರಾವಳಿಯ ವಾಜಪೇಯಿ ಎಂದೇ ಖ್ಯಾತಿ ಪಡೆದಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 1999ರಿಂದ ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ 72 ವರ್ಷದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಈ ನಡೆ ಅಚ್ಚರಿ ಮೂಡಿಸಿರುವುದರ ಜತೆಗೆ ನಾಡಿನಾದ್ಯಂತ ಚರ್ಚೆಗೂ ಕಾರಣವಾಗಿದೆ.ಶ್ರೀನಿವಾಸ ಶೆಟ್ಟಿಯವರು ಓರ್ವ ಮಾದರಿ ಜನನಾಯಕ ಎಂದು ಧಾರಾಳವಾಗಿ ಹೇಳಬಹುದು. ಸತತ ಐದು …

ಸಂಪಾದಕೀಯ -ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆ ಗ್ರೇಟ್‌ Read More »

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ

ಯಕ್ಷಗಾನ ಸಮ್ಮೇಳನದಲ್ಲಿ ನಡೆಯಲಿ ಕಲಾವಿದರ ಅಕಾಲಿಕ ಸಾವಿನ ಬಗ್ಗೆ ಮಂಥನ ಯಕ್ಷಗಾನ ಕಲಾವಿದರು ವೇದಿಕೆಯಲ್ಲೆ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಾವು ಹರಿಪಾದ ಸೇರಿದರು, ಸ್ವಾಯುಜ್ಯ ಹೊಂದಿದರು, ಯಕ್ಷ ಸರಸ್ವತಿಯ ಪಾದ ಸೇರಿದರು ಎಂದೆಲ್ಲ ಷರಾ ಬರೆದು ಈ ಪ್ರಕರಣಗಳನ್ನು ಮುಗಿಸುತ್ತಿದ್ದೇವೆ.ಯಕ್ಷಗಾನ ಕಲಾವಿದರು ಇಂದು ಒತ್ತಡದಲ್ಲಿ ಇದ್ದಾರೆ ಅನ್ನುವುದು ಗೋಡೆ ಬರಹದಷ್ಟೆ ಸತ್ಯ. ರಾತ್ರಿ ದೇವೇಂದ್ರ, ಕುಬೇರ ಮೊದಲಾದ ಪಾತ್ರಗಳನ್ನು ಮಾಡುವ ಮಹಾನ್‌ ಕಲಾವಿದರು ಬೇರೆ ವೃತ್ತಿಗಳಿಗೆ ಮತ್ತು ಕಲಾವಿದರಿಗೆ ಹೋಲಿಕೆ ಮಾಡಿದರೆ ಇನ್ನೂ ಬಡತನದಲ್ಲಿ …

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ Read More »

ಸಂಪಾದಕೀಯ

ಬೆಳ್ಳಾರೆಯಲ್ಲಿ ಅಲುಗಾಡಿದ್ದು ಕಾರು ಅಲ್ಲ – ಬಿಜೆಪಿ ಸರಕಾರ ಸುಳ್ಯದ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ಮತಾಂಧ ದುಷ್ಕರ್ಮಿಗಳು ಕೊಲೆ ಮಾಡಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಘಟನೆ. ಶಿವಮೊಗ್ಗದಲ್ಲಿ ಹರ್ಷ ಎಂಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿ ಹರಿದ ನೆತ್ತರ ಕಲೆ ಒಣಗುವ ಮೊದಲೇ ಇನ್ನೋರ್ವ ಹಿಂದೂ ಕಾರ್ಯಕರ್ತ ಹತ್ಯೆಯಾಗಿರುವುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಹತಾಶೆಗೆ ತಳ್ಳಿದೆ. ಆ ಹತಾಶೆಯೇ ಈಗ ಆಕ್ರೋಶದ ರೂಪ ಪಡೆದು ಸಿಡಿಯುತ್ತಿದೆ. ಅದರ ಪ್ರತಿಫಲವೇ …

ಸಂಪಾದಕೀಯ Read More »

ಸಂಪಾದಕೀಯ-ಒಂದು ಕಲ್ಲಿನಲ್ಲಿ ಎರಡಕ್ಕಿಂತ ಹೆಚ್ಚು ಹಕ್ಕಿ ಹೊಡೆದ ಬಿಜೆಪಿ!

ಮುಂಬಯಿ: ಏಕನಾಥ್‌ ಶಿಂಧೆ ಮುಖ್ಯಮಂತ್ರಿ ಮತ್ತು ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗುವುದರೊಂದಿಗೆ ಸುಮಾರು ಹತ್ತು ದಿನ ನಡೆದ ಮಹಾರಾಷ್ಟ್ರದ ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಆದರೆ ಇಡೀ ಪ್ರಹಸನದಲ್ಲಿ ಬಿಜೆಪಿ ವಹಿಸಿದ ಪಾತ್ರ ಮತ್ತು ಉರುಳಿಸಿದ ದಾಳ ಬಹಳ ಕುತೂಹಲಕಾರಿಯಾಗಿದೆ. ಕೊನೆಯ ಕ್ಷಣದವರೆಗೂ ಬಿಜೆಪಿ ತನ್ನ ನಡೆಯನ್ನು ರಹಸ್ಯವಾಗಿಯೇ ಇರಿಸಿಕೊಂಡಿತ್ತು. ರಾಷ್ಟ್ರೀಯ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಮಹಾನ್‌ ರಾಜಕೀಯ ಪಂಡಿತರಿಗೂ ಊಹಿಸಲು ಸಾಧ್ಯವಾಗಿರಲಿಲ್ಲ.ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವುದರ ಹಿಂದೆ ಬಿಜೆಪಿಯ …

ಸಂಪಾದಕೀಯ-ಒಂದು ಕಲ್ಲಿನಲ್ಲಿ ಎರಡಕ್ಕಿಂತ ಹೆಚ್ಚು ಹಕ್ಕಿ ಹೊಡೆದ ಬಿಜೆಪಿ! Read More »

ಸಂಪಾದಕೀಯ-ಪುತ್ರ ವ್ಯಾಮೋಹದಿಂದ ಕುರುಡಾದ ಆಧುನಿಕ ಧೃತರಾಷ್ಟ್ರರು

ಮಹಾರಾಷ್ಟ್ರದಲ್ಲಿ ಇತಿಹಾಸ ಮರುಕಳಿಸಲಿದೆಯೇ? ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಾಗ ಹಿಂದೆ ಬಾಳಾ ಠಾಕ್ರೆ ಇದ್ದಾಗ ಶಿವಸೇನೆಯೊಳಗೆ ಸಂಭವಿಸಿದ ಘಟನೆಗಳು ನೆನಪಾಗುತ್ತವೆ. ಭಾಳಾ ಠಾಕ್ರೆಯವರ ಬಿಗಿ ಹಿಡಿತದಲ್ಲಿ ಪಕ್ಷದಲ್ಲಿ ಒಡಕು ಮೂಡಿದ್ದು ಠಾಕ್ರೆಯವರ ಅತಿಯಾದ ಪುತ್ರ ವ್ಯಾಮೋಹದಿಂದ. ಇದೀಗ ಶಿವಸೇನೆಯಲ್ಲಿ ಏಕನಾಥ ಶಿಂಧೆ ಬಂಡೇಳಲು ಕೂಡ ಕಾರಣ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ಕುರುಡು ಪುತ್ರ ಪ್ರೇಮ ಎನ್ನುವ ಮಾತುಗಳು ಮರಾಠಿ ರಾಜ್ಯದ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.ರಾಣೆ ಮಾತ್ರವಲ್ಲ, ಸಹೋದರನ ಮಗನೇ ಆಗಿರುವ ರಾಜ್‌ ಠಾಕ್ರೆ, ಹಿರಿಯ ನಾಯಕ …

ಸಂಪಾದಕೀಯ-ಪುತ್ರ ವ್ಯಾಮೋಹದಿಂದ ಕುರುಡಾದ ಆಧುನಿಕ ಧೃತರಾಷ್ಟ್ರರು Read More »

ಸಂಪಾದಕೀಯ : ಅಂಕಗಳೇ ಜೀವನವಲ್ಲ – ಬದುಕು ಅದಕ್ಕಿಂತ ದೊಡ್ಡದು

ಇಂದು ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ. ರಾಜ್ಯದಾದ್ಯಂತ ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳು ಬಹಳ ಕಾತರತೆಯಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ಮಕ್ಕಳ ವಾಟ್ಸಪ್ ನಂಬರಿಗೆ ಎಸೆಸೆಲ್ಸಿ ಬೋರ್ಡ್ ಫಲಿತಾಂಶವನ್ನು ಮೆಸೇಜ್ ಮಾಡುವುದರ ಮೂಲಕ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಕೋರೋನಾ ಸಂತ್ರಸ್ತ ಬ್ಯಾಚ್ ಇದು !ಈ ಬಾರಿಯ ಎಸೆಸೆಲ್ಸಿ ಬ್ಯಾಚ್ ನಿಜವಾದ ಅರ್ಥದಲ್ಲಿ ಕೊರೋನ ಸಂತ್ರಸ್ತ ಬ್ಯಾಚ್ ಎಂದು ಕರೆಯಲ್ಪಟ್ಟಿದೆ. ಈ ಬ್ಯಾಚಿನ ವಿದ್ಯಾರ್ಥಿಗಳಿಗೆ ಎಂಟು, ಒಂಬತ್ತು ತರಗತಿಯಲ್ಲಿ ಸರಿಯಾಗಿ ಪಾಠಗಳು ಆಗಿಲ್ಲ. ಪರೀಕ್ಷೆಯೂ ಆಗಿರಲಿಲ್ಲ. ಅದು …

ಸಂಪಾದಕೀಯ : ಅಂಕಗಳೇ ಜೀವನವಲ್ಲ – ಬದುಕು ಅದಕ್ಕಿಂತ ದೊಡ್ಡದು Read More »

error: Content is protected !!
Scroll to Top