ಸಂಪಾದಕೀಯ

ಸಂಪಾದಕೀಯ -ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆ ಗ್ರೇಟ್‌

ಸ್ವಾರ್ಥಿ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುವ ಹಾಲಾಡಿ ಕರಾವಳಿಯ ವಾಜಪೇಯಿ ಎಂದೇ ಖ್ಯಾತಿ ಪಡೆದಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 1999ರಿಂದ ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ 72 ವರ್ಷದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಈ ನಡೆ ಅಚ್ಚರಿ ಮೂಡಿಸಿರುವುದರ ಜತೆಗೆ ನಾಡಿನಾದ್ಯಂತ ಚರ್ಚೆಗೂ ಕಾರಣವಾಗಿದೆ.ಶ್ರೀನಿವಾಸ ಶೆಟ್ಟಿಯವರು ಓರ್ವ ಮಾದರಿ ಜನನಾಯಕ ಎಂದು ಧಾರಾಳವಾಗಿ ಹೇಳಬಹುದು. ಸತತ ಐದು …

ಸಂಪಾದಕೀಯ -ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆ ಗ್ರೇಟ್‌ Read More »

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ

ಯಕ್ಷಗಾನ ಸಮ್ಮೇಳನದಲ್ಲಿ ನಡೆಯಲಿ ಕಲಾವಿದರ ಅಕಾಲಿಕ ಸಾವಿನ ಬಗ್ಗೆ ಮಂಥನ ಯಕ್ಷಗಾನ ಕಲಾವಿದರು ವೇದಿಕೆಯಲ್ಲೆ ಕುಸಿದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಾವು ಹರಿಪಾದ ಸೇರಿದರು, ಸ್ವಾಯುಜ್ಯ ಹೊಂದಿದರು, ಯಕ್ಷ ಸರಸ್ವತಿಯ ಪಾದ ಸೇರಿದರು ಎಂದೆಲ್ಲ ಷರಾ ಬರೆದು ಈ ಪ್ರಕರಣಗಳನ್ನು ಮುಗಿಸುತ್ತಿದ್ದೇವೆ.ಯಕ್ಷಗಾನ ಕಲಾವಿದರು ಇಂದು ಒತ್ತಡದಲ್ಲಿ ಇದ್ದಾರೆ ಅನ್ನುವುದು ಗೋಡೆ ಬರಹದಷ್ಟೆ ಸತ್ಯ. ರಾತ್ರಿ ದೇವೇಂದ್ರ, ಕುಬೇರ ಮೊದಲಾದ ಪಾತ್ರಗಳನ್ನು ಮಾಡುವ ಮಹಾನ್‌ ಕಲಾವಿದರು ಬೇರೆ ವೃತ್ತಿಗಳಿಗೆ ಮತ್ತು ಕಲಾವಿದರಿಗೆ ಹೋಲಿಕೆ ಮಾಡಿದರೆ ಇನ್ನೂ ಬಡತನದಲ್ಲಿ …

ಕಲಾವಿದರ ಹಠಾತ್‌ ಸಾವು ಎಚ್ಚರಿಕೆ ಕರೆಗಂಟೆ Read More »

ಸಂಪಾದಕೀಯ

ಬೆಳ್ಳಾರೆಯಲ್ಲಿ ಅಲುಗಾಡಿದ್ದು ಕಾರು ಅಲ್ಲ – ಬಿಜೆಪಿ ಸರಕಾರ ಸುಳ್ಯದ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ಮತಾಂಧ ದುಷ್ಕರ್ಮಿಗಳು ಕೊಲೆ ಮಾಡಿರುವುದು ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಘಟನೆ. ಶಿವಮೊಗ್ಗದಲ್ಲಿ ಹರ್ಷ ಎಂಬ ಹಿಂದೂ ಕಾರ್ಯಕರ್ತನ ಹತ್ಯೆಯಾಗಿ ಹರಿದ ನೆತ್ತರ ಕಲೆ ಒಣಗುವ ಮೊದಲೇ ಇನ್ನೋರ್ವ ಹಿಂದೂ ಕಾರ್ಯಕರ್ತ ಹತ್ಯೆಯಾಗಿರುವುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಇನ್ನಿಲ್ಲದಂತೆ ಹತಾಶೆಗೆ ತಳ್ಳಿದೆ. ಆ ಹತಾಶೆಯೇ ಈಗ ಆಕ್ರೋಶದ ರೂಪ ಪಡೆದು ಸಿಡಿಯುತ್ತಿದೆ. ಅದರ ಪ್ರತಿಫಲವೇ …

ಸಂಪಾದಕೀಯ Read More »

ಸಂಪಾದಕೀಯ-ಒಂದು ಕಲ್ಲಿನಲ್ಲಿ ಎರಡಕ್ಕಿಂತ ಹೆಚ್ಚು ಹಕ್ಕಿ ಹೊಡೆದ ಬಿಜೆಪಿ!

ಮುಂಬಯಿ: ಏಕನಾಥ್‌ ಶಿಂಧೆ ಮುಖ್ಯಮಂತ್ರಿ ಮತ್ತು ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗುವುದರೊಂದಿಗೆ ಸುಮಾರು ಹತ್ತು ದಿನ ನಡೆದ ಮಹಾರಾಷ್ಟ್ರದ ರಾಜಕೀಯ ಪ್ರಹಸನದ ಒಂದು ಅಂಕಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ಆದರೆ ಇಡೀ ಪ್ರಹಸನದಲ್ಲಿ ಬಿಜೆಪಿ ವಹಿಸಿದ ಪಾತ್ರ ಮತ್ತು ಉರುಳಿಸಿದ ದಾಳ ಬಹಳ ಕುತೂಹಲಕಾರಿಯಾಗಿದೆ. ಕೊನೆಯ ಕ್ಷಣದವರೆಗೂ ಬಿಜೆಪಿ ತನ್ನ ನಡೆಯನ್ನು ರಹಸ್ಯವಾಗಿಯೇ ಇರಿಸಿಕೊಂಡಿತ್ತು. ರಾಷ್ಟ್ರೀಯ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಮಹಾನ್‌ ರಾಜಕೀಯ ಪಂಡಿತರಿಗೂ ಊಹಿಸಲು ಸಾಧ್ಯವಾಗಿರಲಿಲ್ಲ.ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವುದರ ಹಿಂದೆ ಬಿಜೆಪಿಯ …

ಸಂಪಾದಕೀಯ-ಒಂದು ಕಲ್ಲಿನಲ್ಲಿ ಎರಡಕ್ಕಿಂತ ಹೆಚ್ಚು ಹಕ್ಕಿ ಹೊಡೆದ ಬಿಜೆಪಿ! Read More »

ಸಂಪಾದಕೀಯ-ಪುತ್ರ ವ್ಯಾಮೋಹದಿಂದ ಕುರುಡಾದ ಆಧುನಿಕ ಧೃತರಾಷ್ಟ್ರರು

ಮಹಾರಾಷ್ಟ್ರದಲ್ಲಿ ಇತಿಹಾಸ ಮರುಕಳಿಸಲಿದೆಯೇ? ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಾಗ ಹಿಂದೆ ಬಾಳಾ ಠಾಕ್ರೆ ಇದ್ದಾಗ ಶಿವಸೇನೆಯೊಳಗೆ ಸಂಭವಿಸಿದ ಘಟನೆಗಳು ನೆನಪಾಗುತ್ತವೆ. ಭಾಳಾ ಠಾಕ್ರೆಯವರ ಬಿಗಿ ಹಿಡಿತದಲ್ಲಿ ಪಕ್ಷದಲ್ಲಿ ಒಡಕು ಮೂಡಿದ್ದು ಠಾಕ್ರೆಯವರ ಅತಿಯಾದ ಪುತ್ರ ವ್ಯಾಮೋಹದಿಂದ. ಇದೀಗ ಶಿವಸೇನೆಯಲ್ಲಿ ಏಕನಾಥ ಶಿಂಧೆ ಬಂಡೇಳಲು ಕೂಡ ಕಾರಣ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ಕುರುಡು ಪುತ್ರ ಪ್ರೇಮ ಎನ್ನುವ ಮಾತುಗಳು ಮರಾಠಿ ರಾಜ್ಯದ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.ರಾಣೆ ಮಾತ್ರವಲ್ಲ, ಸಹೋದರನ ಮಗನೇ ಆಗಿರುವ ರಾಜ್‌ ಠಾಕ್ರೆ, ಹಿರಿಯ ನಾಯಕ …

ಸಂಪಾದಕೀಯ-ಪುತ್ರ ವ್ಯಾಮೋಹದಿಂದ ಕುರುಡಾದ ಆಧುನಿಕ ಧೃತರಾಷ್ಟ್ರರು Read More »

ಸಂಪಾದಕೀಯ : ಅಂಕಗಳೇ ಜೀವನವಲ್ಲ – ಬದುಕು ಅದಕ್ಕಿಂತ ದೊಡ್ಡದು

ಇಂದು ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ. ರಾಜ್ಯದಾದ್ಯಂತ ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳು ಬಹಳ ಕಾತರತೆಯಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ಮಕ್ಕಳ ವಾಟ್ಸಪ್ ನಂಬರಿಗೆ ಎಸೆಸೆಲ್ಸಿ ಬೋರ್ಡ್ ಫಲಿತಾಂಶವನ್ನು ಮೆಸೇಜ್ ಮಾಡುವುದರ ಮೂಲಕ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಕೋರೋನಾ ಸಂತ್ರಸ್ತ ಬ್ಯಾಚ್ ಇದು !ಈ ಬಾರಿಯ ಎಸೆಸೆಲ್ಸಿ ಬ್ಯಾಚ್ ನಿಜವಾದ ಅರ್ಥದಲ್ಲಿ ಕೊರೋನ ಸಂತ್ರಸ್ತ ಬ್ಯಾಚ್ ಎಂದು ಕರೆಯಲ್ಪಟ್ಟಿದೆ. ಈ ಬ್ಯಾಚಿನ ವಿದ್ಯಾರ್ಥಿಗಳಿಗೆ ಎಂಟು, ಒಂಬತ್ತು ತರಗತಿಯಲ್ಲಿ ಸರಿಯಾಗಿ ಪಾಠಗಳು ಆಗಿಲ್ಲ. ಪರೀಕ್ಷೆಯೂ ಆಗಿರಲಿಲ್ಲ. ಅದು …

ಸಂಪಾದಕೀಯ : ಅಂಕಗಳೇ ಜೀವನವಲ್ಲ – ಬದುಕು ಅದಕ್ಕಿಂತ ದೊಡ್ಡದು Read More »

ಸಂಪಾದಕೀಯ : ವಂಶ ಪ್ರಭುತ್ವ – ರಾಜಕೀಯಕ್ಕಂಟಿದ ಶಾಪ

ಕಾಂಗ್ರೆಸ್ ಪಕ್ಷದ ವರಿಷ್ಠ ಚಿಂತನ ಸಭೆಯಲ್ಲಿ ‘ಒಂದು ಕುಟುಂಬ ಒಂದೇ ಹುದ್ದೆ’ ಎಂಬ ತೀರ್ಮಾನಕ್ಕೆ ಬರಲಾಗಿದೆ. ಅದನ್ನು ಹಾಗೆಯೇ ಪ್ರಕಟಿಸಿ ಅನುಷ್ಟಾನ ಮಾಡಿದರೆ ಅದೊಂದು ಚಾರಿತ್ರಿಕ ನಡೆಯಾಗುತ್ತಿತ್ತು. ಆದರೆ, ಆ ತೀರ್ಮಾನಕ್ಕೆ ಕೆಲವು ರಿಯಾಯಿತಿಗಳನ್ನು ಕೂಡ ಕೊಡಲಾಗಿದೆ. ಯಾವುದೇ ವ್ಯಕ್ತಿ ಪಕ್ಷಕ್ಕಾಗಿ ಐದು ವರ್ಷಗಳ ಸೇವೆ ಕೊಟ್ಟಿದ್ದರೆ ಅಂತಹ ಕುಟುಂಬಗಳಿಗೆ ಈ ನಿಯಮದಿಂದ ರಿಯಾಯಿತಿ ಕೊಡಲಾಗಿದೆ ! ಅಂದರೆ ಗಾಂಧಿ ಕುಟುಂಬ, ನೆಹರೂ ಕುಟುಂಬ ಸಲೀಸಾಗಿ ಈ ನಿಯಮದ ಹೊರಗೆ ಉಳಿಯುತ್ತವೆ. ವಂಶಾಡಳಿತ – ಯಾವ ಪಕ್ಷವೂ …

ಸಂಪಾದಕೀಯ : ವಂಶ ಪ್ರಭುತ್ವ – ರಾಜಕೀಯಕ್ಕಂಟಿದ ಶಾಪ Read More »

ಜಾನ್‌ ಸ್ಪೋರ್ಟ್ಸ್‌ ಅಕಾಡೆಮಿ ವತಿಯಿಂದ ಬೇಸಿಗೆ ಈಜು ಶಿಬಿರ

ಕಾರ್ಕಳ :‌ ನಗರದ ಕರಿಯಕಲ್ಲು ಪರಿಸರದಲ್ಲಿರುವ ಜಾನ್ ಸ್ಪೋರ್ಟ್ಸ್‌ ಅಕಾಡೆಮಿ ವತಿಯಿಂದ ಎ. 1ರಿಂದ ಈಜು ಶಿಬಿರ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 8.30 – 9.30, 9.30 – 10.30, 10.30 – 11.30. ಸಂಜೆ 6 – 7, 7 – 8, 8 – 9 ಈಜು ತರಬೇತಿ ನಡೆಯಲಿದೆ. ಆಹಾರ ಸಹಿತ ಒಂದು ದಿನದ ಪ್ಯಾಕೇಜ್‌ ಇಂತಿವೆ.ಮಧ್ಯವಯಸ್ಕರಿಗೆ 700 ರೂ., 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 600 ರೂ. ನೋಂದಣಿ ಶುಲ್ಕವಾಗಿದ್ದು ಈ …

ಜಾನ್‌ ಸ್ಪೋರ್ಟ್ಸ್‌ ಅಕಾಡೆಮಿ ವತಿಯಿಂದ ಬೇಸಿಗೆ ಈಜು ಶಿಬಿರ Read More »

ನಲ್ಮೆಯ ವಿದ್ಯಾರ್ಥಿಗಳಿಗೊಂದು ಪತ್ರ – ಕಿವಿಮಾತು

ಪ್ರೀತಿಯ ವಿದ್ಯಾರ್ಥಿಗಳೇ, ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಕಾರಣಕ್ಕಾಗಿ ದೊಡ್ಡ ಸುದ್ದಿಯಾಗಿದೆ. ಇಂದು ಇಡೀ ದೇಶ ಉಡುಪಿಯ ಕಡೆಗೆ ನೋಡುವಂತಾಗಿದ್ದು, ಇದು ಖಂಡಿತವಾಗಿಯೂ ಸಾಧನೆಯಲ್ಲ. ಇದರಿಂದ ವಿದ್ಯಾರ್ಥಿಗಳು ಗಳಿಸಿದ್ದು ಎಷ್ಟು ? ಕಳೆದುಕೊಂಡದ್ದು ಎಷ್ಟು ? ಸ್ವಲ್ಪ ಯೋಚನೆ ಮಾಡಬೇಕಾಗಿದೆ. ಒಂದೇ ಕಾಲೇಜಿನಲ್ಲಿ ಕೂತು ಪಾಠ ಕೇಳುವ ವಿದ್ಯಾರ್ಥಿಗಳು, ಒಂದೇ ತಾಯಿಯ ಮಕ್ಕಳ ಹಾಗೆ ಇದ್ದವರು ಇಂದು ಹಿಜಾಬ್ ಮತ್ತು ಕೇಸರಿ ಶಾಲಿನ ಕಾರಣಕ್ಕೆ ಮುಖಕ್ಕೆ ಮುಖ ಕೊಟ್ಟು ಮಾತಾಡಲು ಸಾಧ್ಯವಾಗದ ಪರಿಸ್ಥಿತಿಯಿದೆ. ನಿಮ್ಮ …

ನಲ್ಮೆಯ ವಿದ್ಯಾರ್ಥಿಗಳಿಗೊಂದು ಪತ್ರ – ಕಿವಿಮಾತು Read More »

ಈ ಕೊರೋನಾಕ್ಕಿಂತ ಲಾಕ್ ಡೌನ್ ಸಹಿಸುವುದು ಕಷ್ಟಕರ !

ಸಂಪಾದಕೀಯ ಕೊರೋನ ಮೂರನೇ ಅಲೆ ಈಗಾಗಲೇ ವ್ಯಾಪಕವಾಗಿ ಹರಡಿ ಎಲ್ಲರಿಗೂ ಆತಂಕ ಉಂಟು ಮಾಡಿದೆ. ಅದು ಹರಡುವ ವೇಗವು ಹಿಂದಿನ ಅಲೆಗಿಂತ ಅಧಿಕವಾಗಿದೆ. ಅದರ ಜೊತೆಗೆ ಅದರ ರೂಪಾಂತರಿ ಒಮಿಕ್ರಾನ್ ಕಾಟ ಬೇರೆ ! ಇದು ಸರಕಾರದ ತಲೆ ಕೆಡಿಸಿದೆ. ಅದಕ್ಕೆ ಪೂರಕವಾಗಿ ತಜ್ಞರ ಅಭಿಪ್ರಾಯ ಪಡೆದು ಸರಕಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಇದು ಮುಂದಿನ ಒಂದೆರಡು ತಿಂಗಳು ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೊದಲೇ ದೇಶದ ಆರ್ಥಿಕತೆ ಹಳ್ಳ ಹಿಡಿದು ಇನ್ನೇನು ಚೇತರಿಕೆ ಕಂಡಿತು …

ಈ ಕೊರೋನಾಕ್ಕಿಂತ ಲಾಕ್ ಡೌನ್ ಸಹಿಸುವುದು ಕಷ್ಟಕರ ! Read More »

error: Content is protected !!
Scroll to Top