• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂಪಾದಕೀಯ

ಹಿಂದಿ ಕಲಿಯುವುದು ಕಡ್ಡಾಯವಲ್ಲ

ಪರದೇಶದ ಭಾಷೆ ಇಂಗ್ಲೀಷ್ ಮೇಲಿಲ್ಲದ ಸಿಟ್ಟು ಹಿಂದಿ ಮೇಲೆ ಯಾಕೆ ? ಸ್ವಾತಂತ್ರ್ಯ ಹೋರಾಟದ ಹೊತ್ತಿನಲ್ಲಿ ಇಡೀ ಭಾರತವನ್ನು ರಾಷ್ಟ್ರೀಯ ವಿಚಾರಧಾರೆಯಲ್ಲಿ ಬೆಸೆಯಲು ಗಾಂಧೀಜಿ ಆರಿಸಿಕೊಂಡ ದಾರಿ ಅಂದರೆ ಅದು ಹಿಂದಿ ಭಾಷೆಯ ಶಿಕ್ಷಣ. ಸ್ವಾತಂತ್ರ್ಯ ಹೋರಾಟದ ಕಸುವನ್ನು ದಕ್ಷಿಣ ಭಾರತದಲ್ಲಿ ತೀವ್ರಗೊಳಿಸಲು ದಕ್ಷಿಣ ಭಾರತದವರು ಹಿಂದಿ ಭಾಷೆಯನ್ನು ಕಲಿಯಬೇಕು ಎಂದವರು ಇಚ್ಛೆ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾಗಿ ಆಗಿನ ಮದ್ರಾಸಿನಲ್ಲಿ ಹಿಂದಿ ಪ್ರಚಾರ ಸಮಿತಿಯ ಸ್ಥಾಪನೆಯನ್ನು (1918) ಮಾಡಿದ್ದರು ಗಾಂಧೀಜಿ. ಗಾಂಧೀಜಿಯವರು ಹಿಂದಿ ಶಿಕ್ಷಕನಾಗಿ ಎರಡು ವರ್ಷ […]

ಹಿಂದಿ ಕಲಿಯುವುದು ಕಡ್ಡಾಯವಲ್ಲ Read More »

ಬಿಎಲ್‌ಒ ಆಗಿ ಶಿಕ್ಷಕರ ನೇಮಕ – ಸರಕಾರಿ ಶಾಲೆಗಳಿಗೆ ಮಾರಕ

ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳಾಗಿ ನೇಮಕಗೊಳಿಸಿರುವುದರಿಂದ ಶಿಕ್ಷಕರು ಇಡೀ ದಿನ ಚುನಾವಣಾ ಆಯೋಗದ ಕರ್ತವ್ಯದಲ್ಲೇ ಮಗ್ನರಾಗುತ್ತಿದ್ದು, ಇದು ಸರಕಾರಿ ಶಾಲಾ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೈಕ್ಷಣಿಕ ಕಾರ್ಯಗಳು ಕಡೆಗಣನೆಯಾಗುತ್ತಿದ್ದು ವಿದ್ಯಾರ್ಥಿಗಳ ಪ್ರಗತಿಗೆ ಅಡಚಣೆಯಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಗ್ರೂಪ್‌ ಸಿ ವೃಂದದ ನೌಕರರನ್ನು ಬಿಎಲ್‌ಒ ಆಗಿ ನೇಮಕಗೊಳಿಸುವಂತೆ ನಿರ್ದೇಶವಿರುವುದರಿಂದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಮತದಾರರ ಚೀಟಿಯ ಭಾವಚಿತ್ರ ಬದಲಾವಣೆ, ಗುರುತಿನ

ಬಿಎಲ್‌ಒ ಆಗಿ ಶಿಕ್ಷಕರ ನೇಮಕ – ಸರಕಾರಿ ಶಾಲೆಗಳಿಗೆ ಮಾರಕ Read More »

ದೀಪಾವಳಿ ವಿಶೇಷಾಂಕಕ್ಕೆ ಚಿತ್ರ ಆಹ್ವಾನ

ಅವಳಿ ಜವಳಿ ಪುಟಾಣಿಗಳ, ಶತಾಯುಷಿ ಹಿರಿಯರ ಚಿತ್ರ ಕಳುಹಿಸಿ ಕಾರ್ಕಳ : ಕಳೆದ 5 ವರ್ಷಗಳಿಂದ ಜನತೆಯ ನಾಡಿಮಿಡಿತ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನ್ಯೂಸ್‌ ಕಾರ್ಕಳವು ದೀಪಾವಳಿಗೆ ವಿಶೇಷ ಸಂಚಿಕೆ ಹೊರತರಲು ಮುಂದಾಗಿದೆ. ಈ ವರ್ಣರಂಜಿತ, ಸಂಗ್ರಹಯೋಗ್ಯ ವಿಶೇಷಾಂಕಕ್ಕೆ ರೂಪದರ್ಶಿ, ದೀಪಾವಳಿ ಸಂಭ್ರಮದ ಚಿತ್ರ, ಸಾಂಪ್ರದಾಯಿಕ ಉಡುಗೆಯ ಫೋಟೋಗಳನ್ನು ಪ್ರಕಟಿಸಲಿದ್ದೇವೆ. ಆಯ್ದ ಫೋಟೋ ಪ್ರಕಟಿಸಲಾಗುವುದು. ಅವಳಿ ಜವಳಿ ಪುಟಾಣಿಗಳ ಚಿತ್ರಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಅವಳಿ ಜವಳಿ ಮಕ್ಕಳ (5 ವರ್ಷದೊಳಗಿನ) ಚಿತ್ರ ಹಾಗೂ ವಿವರ (ಹೆಸರು, ಊರು,

ದೀಪಾವಳಿ ವಿಶೇಷಾಂಕಕ್ಕೆ ಚಿತ್ರ ಆಹ್ವಾನ Read More »

ಯರ್ಲಪಾಡಿ ಗ್ರಾಮಕ್ಕೆ ಸರಕಾರಿ ಬಸ್‌ – ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ

ಕಾರ್ಕಳ : ಯರ್ಲಪಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆಯೊಂದು ಈಡೇರಿದ್ದು ಸರಕಾರಿ ಬಸ್ ಸಂಚಾರ ಸೇವೆಯು ಲಭ್ಯವಾಗಲಿದೆ ಎಂದು ಯರ್ಲಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸುನಿಲ್‌ ಕುಮಾರ್‌ ಹೆಗ್ಡೆ ತಿಳಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಹಲವಾರು ಗ್ರಾಮ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದ ಸರಕಾರಿ ಬಸ್‌ ಸಂಚಾರದ ಬೇಡಿಕೆಯು ಫಲಪ್ರದವಾಗುವ ಸಂದರ್ಭವು ಕೂಡಿ ಬಂದಿದೆ. ಪ್ರತಿ ದಿನ ಉಡುಪಿ – ಮಣಿಪಾಲ- ಹಿರಿಯಡ್ಕ- ಪಂಚನಬೆಟ್ಟು- ಗೋವಿಂದೂರು- ಬೈಲೂರು- ಕಾಂತರಗೋಳಿ- ಚಿಕ್ಕಲ್‌ಬೆಟ್ಟು- ಹಿರ್ಗಾನ- ಕಾರ್ಕಳ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚರಿಸಲಿದ್ದು, ಗ್ರಾಮೀಣ ಪ್ರದೇಶದ

ಯರ್ಲಪಾಡಿ ಗ್ರಾಮಕ್ಕೆ ಸರಕಾರಿ ಬಸ್‌ – ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿಕೆ Read More »

ಈಗ ಬೆಲೆ ಏರಿಕೆಯೇ ಸರಕಾರದ ಗ್ಯಾರಂಟಿ

ದರ ಹೆಚ್ಚಳದಿಂದ ಜನಸಾಮಾನ್ಯರು ಹೈರಾಣಾದರೂ ಆಳುವವರು ಡೋಂಟ್‌ಕೇರ್‌ ರಾಜ್ಯ ಸರಕಾರ ನಿನ್ನೆ ಮತ್ತೊಮ್ಮೆ ಹಾಲಿನ ಬೆಲೆಯನ್ನು ಲೀಟರಿಗೆ 4 ರೂಪಾಯಿಯಂತೆ ಏರಿಸಿದೆ. ಇದರ ಬೆನ್ನಿಗೆ ವಿದ್ಯುತ್‌ ದರವೂ ಏರಿಕೆಯಾಗಿದ್ದು, ರಾಜ್ಯದ ಜನರಿಗೆ ಒಟ್ಟೊಟ್ಟಿಗೆ ಎರಡೆರಡು ಬರೆ ಬಿದ್ದಿದೆ. ಅಂದು ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆಯನ್ನೇ ಮುಖ್ಯ ವಿಷಯ ಮಾಡಿಕೊಂಡು ಬಡವರಿಗೆ ಗ್ಯಾರಂಟಿ ಕೊಡುಗೆಗಳನ್ನು ಕೊಟ್ಟು ಬೆಲೆ ಏರಿಕೆಯ ಬಿಸಿಯಿಂದ ಪಾರು ಮಾಡುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್‌ ಅಧಿಕಾರ ದಕ್ಕುತ್ತಿದ್ದಂತೆಯೇ ಉಲ್ಟಾ ಹೊಡೆದು ಈಗ ಬೆಲೆ ಏರಿಕೆಯೇ ತನ್ನ ಗ್ಯಾರಂಟಿ

ಈಗ ಬೆಲೆ ಏರಿಕೆಯೇ ಸರಕಾರದ ಗ್ಯಾರಂಟಿ Read More »

ಸಂಪಾದಕೀಯ – ಹನಿಟ್ರ್ಯಾಪ್‌ ಹೀನ ಸುಳಿಯೂ ಅವಕಾಶವಾದಿ ರಾಜಕಾರಣವೂ

ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಮುಂದೆ ತಂದು ನಿಲ್ಲಿಸುವ ಕೆಚ್ಚೆದೆ ಇದೆಯೇ? ದೇಶಾದ್ಯಂತ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್‌ ಪ್ರಕರಣ ಅಂತಿಮವಾಗಿ ಸುತ್ತಿಕೊಳ್ಳುವುದು ಯಾರ ಕೊರಳಿಗೆ ? ಹೀಗೊಂದು ಅನುಮಾನ ಈಗ ರಾಜ್ಯದ ಜನರನ್ನು ಕಾಡುತ್ತಿದೆ. ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಹನಿಟ್ರ್ಯಾಪ್‌ ಗುಸುಗುಸು ನಿಜ ಎನ್ನುವುದನ್ನು ವಿಧಾನಮಂಡಲ ಕಲಾಪದಲ್ಲೇ ಒಪ್ಪಿಕೊಳ್ಳಲಾಗಿದೆ. ಹಿರಿಯ ಸಚಿವ ಕೆ. ಎನ್‌. ರಾಜಣ್ಣ ತನ್ನನ್ನೂ ಸೇರಿಸಿ ಸುಮಾರು 48 ಮಂದಿಯ ಹನಿಟ್ರ್ಯಾಪ್‌ ಪ್ರಯತ್ನ ನಡೆದಿದೆ ಹಾಗೂ ಅನೇಕರ ವೀಡಿಯೊಗಳು ದಾಖಲಾಗಿದೆ

ಸಂಪಾದಕೀಯ – ಹನಿಟ್ರ್ಯಾಪ್‌ ಹೀನ ಸುಳಿಯೂ ಅವಕಾಶವಾದಿ ರಾಜಕಾರಣವೂ Read More »

ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ

ಒಂದೇ ಒಂದು ಕಳಂಕ, ಕಪ್ಪುಚುಕ್ಕೆ ಇಲ್ಲದೆ ಎಂಟು ದಶಕ ಬದುಕಿದ್ದು ಅದ್ಭುತ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು ನಮ್ಮನ್ನಗಲಿರುವುದರಿಂದ ದಸರಾ ಸಂಭ್ರಮದ ನಡುವೆ ದೇಶದಲ್ಲಿ ಸೂತಕದ ಛಾಯೆ ಹರಡಿದಂತಾಗಿದೆ. ರತನ್‌ ಟಾಟಾ ಭಾರತದ ಕೈಗಾರಿಕೋದ್ಯಮ ಕ್ಷೇತ್ರದ ಯುಗ ಪುರುಷ ಎಂದರೆ ಅತಿಶಯೋಕ್ತಿ ಆಗಲಾರದು. ಶತಮಾನಗಳ ಕಾಲ ವಿದೇಶಿಗರ ಆಳ್ವಿಕೆಗೆ ಒಳಗಾಗಿ ದೇಶ ತನ್ನ ಅಂತಃಸ್ಸತ್ವವನ್ನೇ ಕಳೆದುಕೊಂಡು ನಿಸ್ತೇಜವಾಗಿದ್ದ ಕಾಲದಲ್ಲಿ ಹುಟ್ಟಿಕೊಂಡದ್ದು ಟಾಟಾ ಕಂಪನಿ. ಆ ಟಾಟಾ ಪರಿವಾರದ ಕುಡಿಯಾಗಿರುವ ರತನ್‌ ಟಾಟಾ

ಭಾರತ ಮಾತೆಯ ಅನರ್ಘ್ಯ ರತ್ನ ರತನ್‌ ಟಾಟಾ Read More »

ಮಾದಕ ವಸ್ತು ಪೂರೈಕೆ – ಕಾರ್ಕಳದಲ್ಲಿ ಬೀಳಲಿ ಕಡಿವಾಣ

ರಾಜ್ಯಾದ್ಯಂತ ಸಂಚಲವನ್ನುಂಟು ಮಾಡಿದ ಕಾರ್ಕಳದ ಗ್ಯಾಂಗ್‌ ರೇಪ್‌ ಕೇಸಿನಲ್ಲಿ ಪ್ರಮುಖವಾಗಿ ವ್ಯಕ್ತವಾದ ಅಂಶ ಆರೋಪಿಗಳು ಯುವತಿಗೆ ಬಿಯರ್‌ನಲ್ಲಿ ಮಾದಕ ವಸ್ತು ಬೆರೆಸಿ ಕುಡಿಸಿದ್ದರು ಎನ್ನುವುದು. ಆಕೆ ಮಾದಕ ವಸ್ತುವಿನ ಅಮಲಿನಲ್ಲಿ ಅರೆ ಪ್ರಜ್ಞಾವಸ್ಥೆಗೆ ಜಾರಿದಾಗ ಕೃತ್ಯ ಎಸಗಲಾಗಿದೆ ಎನ್ನುವುದು ವ್ಯಾಪಕವಾಗಿ ಚರ್ಚೆಯಾದ ವಿಷಯ. ಹಾಗೆಂದು ಮಾದಕ ವಸ್ತು ನೀಡಿ ಅತ್ಯಾಚಾರ ಎಸಗುವ ಸುದ್ದಿ ಹೊಸದೇನೂ ಅಲ್ಲ. ಡ್ರಗ್‌ ನೀಡಿ ಅತ್ಯಾಚಾರ ಎಸಗಿದ ಸಾವಿರಾರು ಕೃತ್ಯಗಳು ಈ ಹಿಂದೆಯೂ ಸಂಭವಿಸಿವೆ. ಆಘಾತ ಉಂಟು ಮಾಡಿದ್ದು ಸುಸಂಸ್ಕೃತ ಊರು ಎನಿಸಿಕೊಂಡಿರುವ

ಮಾದಕ ವಸ್ತು ಪೂರೈಕೆ – ಕಾರ್ಕಳದಲ್ಲಿ ಬೀಳಲಿ ಕಡಿವಾಣ Read More »

ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಕೊಚ್ಚಿಹೋದ ರಾಜಕೀಯ ನೈತಿಕತೆ

ಯುವಜನತೆಯ ಕನಸುಗಳನ್ನು ನುಚ್ಚುನೂರು ಮಾಡಿದ ಕೇಜ್ರಿವಾಲ್‌ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ರಾಜಕೀಯ ನಾಯಕರ ಬಂಧನವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ. ಸ್ವಾತಂತ್ರ್ಯ ಲಭಿಸಿ ನಮ್ಮನ್ನು ನಾವೇ ಆಳಲು ತೊಡಗಿದ ಬಳಿಕ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೆಂಬುದು ಜತೆಜತೆಗೆ ಬೆಳೆದು ಬಂದಿದೆ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ಪರಾಕಾಷ್ಠೆಯನ್ನು ತಲುಪಿತ್ತು. ಈ ಸಂದರ್ಭದಲ್ಲೇ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ, ಬಾಬಾ ರಾಮ್‌ದೇವ್‌ ಮುಂತಾದವರು ಚಳವಳಿ ಮಾಡಿದ್ದು. ಇದರಲ್ಲಿ ಇಡೀ ದೇಶದ ಗಮನ ಸೆಳೆದದ್ದು ಮತ್ತು

ಸಂಪಾದಕೀಯ- ಅಧಿಕಾರದ ಅಮಲಿನಲ್ಲಿ ಕೊಚ್ಚಿಹೋದ ರಾಜಕೀಯ ನೈತಿಕತೆ Read More »

ಉಡುಪಿ – ಚಿಕ್ಕಮಗಳೂರಿನಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧ

ಕೋಟಗೆ ಟಿಕೆಟ್‌ ನೀಡುವ ಮೂಲಕ ಲೆಕ್ಕಾಚಾರ ಬದಲಾಯಿಸಿದ ಬಿಜೆಪಿ ಕಾರ್ಕಳ : ಭಾರತೀಯ ಜನತಾ ಪಕ್ಷ ಕಳೆದ ವಿಧಾನಸಭೆಯಲ್ಲಿ ಮಾಡಿದಂಥ ಕೆಲವು ಪ್ರಯೋಗಗಳನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಿದೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾ. 14ರಂದು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕದ ಮಟ್ಟಿಗೆ ಕೆಲವು ಅಚ್ಚರಿಗಳಿವೆ. ಈ ಪೈಕಿ ಬಹಳ ಕುತೂಹಲ ಮೂಡಿಸಿರುವುದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ.ಈ ಕ್ಷೇತ್ರದಲ್ಲಿ ಹಾಲಿ ಸಂಸದೆ, ಕೇಂದ್ರದಲ್ಲಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆಗೆ

ಉಡುಪಿ – ಚಿಕ್ಕಮಗಳೂರಿನಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧ Read More »

error: Content is protected !!
Scroll to Top