Author name: newskarkala desk

ನಗರದ ರಸ್ತೆ ಬದಿ ವ್ಯಾಪಾರ – ಸಾರ್ವಜನಿಕರಿಗೆ ತೊಂದರೆ

ಸಾಮಾಜಿಕ ಕಾರ್ಯಕರ್ತರಿಂದ ಪೊಲೀಸ್‌ ಠಾಣೆಗೆ ದೂರು ಕಾರ್ಕಳ : ನಗರದ ಅನಂತಶಯನ ರಸ್ತೆ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸುವುದರಿಂದ ವಾಹನ ಪಾರ್ಕಿಂಗ್‌ ಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಕುರಿತು ಸೂಕ್ತ ಕ್ರಮ ವಹಿಸುವಂತೆ ಸಾಮಾಜಿಕ ಕಾರ್ಯಕರ್ತರೊರ್ವರು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿರುತ್ತಾರೆ. ನಗರದಲ್ಲಿ ವಾಹನ, ದ್ವಿಚಕ್ರ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆಯಿಲ್ಲ. ಇದರ ನಡುವೆ ರಸ್ತೆ ಬದಿ ತಾತ್ಕಾಲಿಕ ನೆಲೆಯಲ್ಲಿ ಅಂಗಡಿಗಳು ತೆರೆದುಕೊಳ್ಳುತ್ತಿದೆ. ಅಂಚೆ ಕಚೇರಿ, ಅನಂತಶಯನ ಸುತ್ತಮುತ್ತ ಪರವಾನಿಗೆ ಇಲ್ಲದೇ ಅಂಗಡಿ ಮುಂಗಟ್ಟುಗಳು ಕಾರ್ಯಾಚರಿಸುತ್ತಿದೆ …

ನಗರದ ರಸ್ತೆ ಬದಿ ವ್ಯಾಪಾರ – ಸಾರ್ವಜನಿಕರಿಗೆ ತೊಂದರೆ Read More »

ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಾದ ಪಡೆದ ಸುನಿಲ್‌ ಕುಮಾರ್‌

ಕಾರ್ಕಳ : ಪ್ರಥಮ ಬಾರಿಗೆ ನಲ್ಲೂರಿಗೆ ಪುರ ಪ್ರವೇಶಗೈದಿರುವ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪೀಠಾಧೀಶರಾದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರನ್ನು ನ. 29ರಂದು ಶಾಸಕ ವಿ. ಸುನಿಲ್ ಕುಮಾರ್ ಭೇಟಿ ಮಾಡಿ ಆಶೀರ್ವಾದ ಪಡೆದರು. ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಜ್ಞಾನಸುಧಾ ಕಾಲೇಜು ವಾರ್ಷಿಕೋತ್ಸವ

ಸಾಧನೆಗೆ ಶ್ರದ್ಧೆ, ಕಠಿಣ ಪರಿಶ್ರಮ ಮುಖ್ಯ – ಸುನಿಲ್‌ ಕುಮಾರ್‌ ಕಾರ್ಕಳ : ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಶ್ರದ್ಧೆ, ಕಠಿಣ ಪರಿಶ್ರಮ ಮುಖ್ಯ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು. ಅವರು ನ. 29ರಂದು ಜ್ಞಾನಸುಧಾ ಕಾಲೇಜಿನ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆಯಿರಬೇಕು. ಆ ಶ್ರದ್ಧೆ, ಪರಿಶ್ರಮವೇ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದು. ಇದೇ ಕಾರಣಕ್ಕಾಗಿ ಪೇಪರ್‌ ವಿತರಣೆ ಮಾಡುತ್ತಿದ್ದ ಅಬ್ದುಲ್‌ ಕಲಾಂ ಅವರು ವಿಜ್ಞಾನಿ, ರಾಷ್ಟ್ರಪತಿಯಾದರು. …

ಜ್ಞಾನಸುಧಾ ಕಾಲೇಜು ವಾರ್ಷಿಕೋತ್ಸವ Read More »

ಕಾರ್ಕಳ ಕಲಂಬಾಡಿಪದವಿನಲ್ಲಿ ಗುರುಕುಲ ಮಾದರಿ ಶಾಲೆ

ಶಾಸಕರ ಪರಿಕಲ್ಪನೆಯಲ್ಲಿ ನಿರ್ಮಾಣವಾದ ವಿದ್ಯಾದೇಗುಲ – ಡಿ. 23ರಂದು ಉದ್ಘಾಟನೆ ಕಾರ್ಕಳ : ಪ್ರಾಚೀನ ಭಾರತದಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು. ಇದು ಅತ್ಯಂತ ಶ್ರೇಷ್ಠವಾದ ಶಿಕ್ಷಣ ಪದ್ಧತಿಯಾಗಿದ್ದರೂ ಅದೇ ನೈಸರ್ಗಿಕ ಮಾದರಿಯಲ್ಲಿ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆಯೆರೆಯುವುದು ಕಷ್ಟ ಸಾಧ್ಯ. ಆದರೆ, ಆ ದಿಸೆಯಲ್ಲಿ ಸಾಗುವ ಪ್ರಯತ್ನ ಮಾಡಬಹುದಾಗಿದೆ. ಇದಕ್ಕೊಂದು ಉದಾಹರಣೆ ಕಲಂಬಾಡಿಪದವು ಶಾಲೆ. ನಿಟ್ಟೆ ಗ್ರಾಮದ ಅತ್ತೂರು ಸಮೀಪ ಕಲಂಬಾಡಿಪದವು ಶಾಲೆ ಗುರುಕುಲ ಮಾದರಿಯ ವಿದ್ಯಾದೇಗುಲವಾಗಿ ರೂಪುಗೊಳ್ಳುತ್ತಿದೆ. 1976ರಲ್ಲಿ ದಿ. ಶ್ಯಾಮ್‌ ಹೆಗ್ಡೆ, …

ಕಾರ್ಕಳ ಕಲಂಬಾಡಿಪದವಿನಲ್ಲಿ ಗುರುಕುಲ ಮಾದರಿ ಶಾಲೆ Read More »

ಜ್ಞಾನಸುಧಾ ಪ್ರೌಢಶಾಲಾ ವಾರ್ಷಿಕೋತ್ಸವ – ಜ್ಞಾನ ಸಂಭ್ರಮ

ಮಕ್ಕಳ ಅಭಿರುಚಿಗೆ ದೊರೆಯಲಿ ಆದ್ಯತೆ – ಜಗದೀಶ್‌ ಹೆಗ್ಡೆ ಕಾರ್ಕಳ : ಮಕ್ಕಳ ಅಭಿರುಚಿ, ಆಸಕ್ತಿಯನ್ನು ಗಮನಿಸಿ ಶಿಕ್ಷಕರು ಹಾಗೂ ಪೋಷಕರು ಆ ನಿಟ್ಟಿನಲ್ಲಿ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕೆಂದು ನಿವೃತ್ತ ಮುಖ್ಯ ಶಿಕ್ಷಕ ಜಗದೀಶ್ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ನ. 27ರಂದು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವ ಜ್ಞಾನ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಞಾನದ ವಿಕಾಸ – ದೇವಾನಂದ ಭಟ್‌ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷದೇವ ಮಿತ್ರ ಕಲಾ ಮಂಡಳಿ …

ಜ್ಞಾನಸುಧಾ ಪ್ರೌಢಶಾಲಾ ವಾರ್ಷಿಕೋತ್ಸವ – ಜ್ಞಾನ ಸಂಭ್ರಮ Read More »

ಬ್ರಾಹ್ಮಣ ಸಂಘ ಹಾಗೂ ರುದ್ರಭೂಮಿ ಕ್ರಿಯಾ ಸಮಿತಿ ವತಿಯಿಂದ ಜರಿಗುಡ್ಡೆ ರುದ್ರಭೂಮಿ ಸ್ವಚ್ಛತೆ

ಕಾರ್ಕಳ : ಕಾರ್ಕಳ ತಾಲೂಕು ಬ್ರಾಹ್ಮಣ ಸಂಘ, ರುದ್ರಭೂಮಿ ಕ್ರಿಯಾ ಸಮಿತಿ ಇದರ ವತಿಯಿಂದ ಜರಿಗುಡ್ಡೆಯಲ್ಲಿರುವ ರುದ್ರಭೂಮಿಯನ್ನು ನ. 27ರಂದು ಸ್ವಚ್ಛಗೊಳಿಸಲಾಯಿತು. ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸೌಜನ್ಯ ಉಪಾಧ್ಯಾಯ, ಕಾರ್ಯದರ್ಶಿ ಬಾಲಕೃಷ್ಣ ರಾವ್, ಜಗದೀಶ್ ಗೋಖಲೆ, ವೈ. ಪ್ರಶಾಂತ್ ಭಟ್, ಗಣಪಯ್ಯಣ್ಣ, ವಿಜಯ ಕುಮಾರ್ ತಂತ್ರಿ, ಅನಂತ ಪದ್ಮನಾಭ ಜೋಯಿಸ್, ರಾಜೇಶ್ ಗೋರೆ, ವಿಗ್ನೇಶ್ ಜೆ.ಪಿ., ಸುಧಾಕರ್ ರಾವ್ ಬೈಕಾಡಿ, ಭವನಿ ಶಂಕರ್ ರಾವ್, ಶ್ರೀನಿವಾಸ್ ಎಲಿಕೊಡು, ಸುಬ್ರಮಣ್ಯ ಭಟ್, ಪ್ರದೀಪ್ ಉಪಾಧ್ಯಾಯ, ವಿಜಯ ಕುಮಾರ್, …

ಬ್ರಾಹ್ಮಣ ಸಂಘ ಹಾಗೂ ರುದ್ರಭೂಮಿ ಕ್ರಿಯಾ ಸಮಿತಿ ವತಿಯಿಂದ ಜರಿಗುಡ್ಡೆ ರುದ್ರಭೂಮಿ ಸ್ವಚ್ಛತೆ Read More »

ಅಮ್ಮ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 2 ಲಕ್ಷ ರೂ. ವಿದ್ಯಾರ್ಥಿ ವೇತನ ಹಸ್ತಾಂತರ

ಕಾರ್ಕಳ : ಅಮ್ಮ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 40 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ವಿನಂತೆ ಒಟ್ಟು 2 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಯಿತು. ಯುವ ಉದ್ಯಮಿ ಅವಿನಾಶ್‌ ಶೆಟ್ಟಿ ಅವರು ಪ್ರತಿ ವರ್ಷ ಅಂಬಾ ಭವಾನಿ ಕ್ರಾಕರ್ಸ್ ಪಟಾಕಿ ಅಂಗಡಿ ತೆರೆದು ಅದರಲ್ಲಿ ಬಂದ ಲಾಭಾಂಶದಲ್ಲಿ ಕಳೆದ 10 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡುತ್ತ ಬಂದಿರುತ್ತಾರೆ. ಭಾನುವಾರ ಗಾಂಧಿ ಮೈದಾನದಲ್ಲಿ ಅವಿನಾಶ್ ಶೆಟ್ಟಿ, ಅವರ ಪತ್ನಿ ಐಶ್ವರ್ಯ ಎ. ಶೆಟ್ಟಿ, ಅಜ್ಜಿ ಗಿರಿಜಾ …

ಅಮ್ಮ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 2 ಲಕ್ಷ ರೂ. ವಿದ್ಯಾರ್ಥಿ ವೇತನ ಹಸ್ತಾಂತರ Read More »

ಕಾರ್ಕಳದಲ್ಲಿ ಕಟಿಲೇಶ್ವರಿ ಫ್ರೂಟ್ಸ್‌ ಶಾಪ್‌ ಶುಭಾರಂಭ

ಕಾರ್ಕಳ : ನಗರದ ಮುಖ್ಯರಸ್ತೆಯ ಸ್ಪಂದನಾ ಆಸ್ಪತ್ರೆಯ ಬಳಿ ಕಟಿಲೇಶ್ವರಿ ಫ್ರೂಟ್ಸ್‌ ಶಾಪ್‌ ಶುಭಾರಂಭಗೊಂಡಿದೆ. ವಿವಿಧ ಬಗೆಯ ತಾಜಾ ಹಣ್ಣುಗಳು ಹೋಲ್‌ಸೇಲ್‌ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಬಗೆ ಬಗೆಯ ತಂಪು ಪಾನೀಯ ಮತ್ತು ಫ್ರುಟ್ಸ್‌ ಸಲಾಡ್‌, ಕ್ಯಾರೆಟ್‌ ಐಸ್‌ಕ್ರೀಮ್‌ ಮತ್ತು ಡ್ರೈ ಫ್ರುಟ್ಸ್‌ ಪಾನ್‌ಗಳು ಲಭ್ಯವಿದ್ದು, ಗ್ರಾಹಕರು ಪ್ರೋತ್ಸಾಹ ನೀಡುವಂತೆ ಸಂಸ್ಥೆಯ ಮಾಲಕರು ಮನವಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9164592601 ಸಂಪರ್ಕಿಸಬಹುದಾಗಿದೆ

ಪೂರ್ತಿ ಆಸ್ತಿ ಮಗನಿಗೆ ನೀಡಿ ತಪ್ಪು ಮಾಡಿದೆ : ಹತಾಶೆ ವ್ಯಕ್ತಪಡಿಸಿದ ರೇಮಂಡ್‌ನ ಮಾಜಿ ಒಡೆಯ ವಿಜಯ್‌ಪತ್

ಮಕ್ಕಳಿಗೆ ಎಲ್ಲವನ್ನೂ ನೀಡುವ ಮುಂಚೆ ಯೋಚಿಸುವಂತೆ ಪೋಷಕರಿಗೆ ಸಲಹೆ ನೀಡಿದ ಸಿಂಘಾನಿಯಾ ಮುಂಬಯಿ : ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರ ತಂದೆ ವಿಜಯ್‌ಪತ್‌ ಸಿಂಘಾನಿಯಾ ತಮ್ಮ ಆಸ್ತಿಯನ್ನು ಮಗನಿಗೆ ಹಸ್ತಾಂತರಿಸುತ್ತಿರುವುದಕ್ಕೆ ಇದೀಗ ಹತಾಶೆ ವ್ಯಕ್ತಪಡಿಸಿದ್ದಾರೆ. ಬ್ಯುಸಿನೆಸ್ ಟುಡೆಯೊಂದಿಗೆ ಮಾತನಾಡಿರುವ ವಿಜಯ್‌ಪತ್‌ ಸಿಂಘಾನಿಯಾ ನನ್ನ ಬಳಿ ಈಗ ಏನೂ ಇಲ್ಲ. ಎಲ್ಲವನ್ನೂ ಮಗನಿಗೆ ಕೊಟ್ಟೆ. ಆದ್ರೆ ಅದೇನೋ ತಪ್ಪಿ ನನ್ನ ಬಳಿ ಸ್ವಲ್ಪ ಹಣ ಉಳಿದಿದ್ದು ನಾನು ಆ ಹಣದಿಂದಾಗಿ ಇಂದು ಬದುಕುತ್ತಿದ್ದೇನೆ. ಅದಲ್ಲವಾಗಿದ್ದರೆ ನಾನು …

ಪೂರ್ತಿ ಆಸ್ತಿ ಮಗನಿಗೆ ನೀಡಿ ತಪ್ಪು ಮಾಡಿದೆ : ಹತಾಶೆ ವ್ಯಕ್ತಪಡಿಸಿದ ರೇಮಂಡ್‌ನ ಮಾಜಿ ಒಡೆಯ ವಿಜಯ್‌ಪತ್ Read More »

ಹಿಂದುಳಿದ ವರ್ಗಗಳ ಆಯೋಗದ ಅ‍ಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅಧಿಕಾರಾವಧಿ ವಿಸ್ತರಣೆ

ಬೆಂಗಳೂರು : ರಾಜ್ಯ ಸರಕಾರ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ಸದಸ್ಯರ ಅಧಿಕಾರಾವಧಿಯನ್ನು ಜ. 31ರ ವರೆಗೆ ವಿಸ್ತರಿಸಿದೆ.ಜಾತಿ ಗಣತಿ ವರದಿ ಪ್ರಕಟ ಕುರಿತಂತೆ ಭಾರಿ ಗೊಂದಲ, ವಿವಾದ ಸೃಷ್ಟಿಯಾಗುತ್ತಿದ್ದು ಇದೇ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿಯನ್ನು 2 ತಿಂಗಳು ವಿಸ್ತರಣೆ ಮಾಡುವ ಮಹತ್ವದ ನಿರ್ಧಾರಕ್ಕೆ ಸರಕಾರ ಮುಂದಾಗಿದೆ. ವಿಸ್ತರಣೆಯಾಗದೇ ಇರುತ್ತಿದ್ದಲ್ಲಿ 2023ರ ನ. 26ಕ್ಕೆ ಇವರ ಅಧಿಕಾರಾವಧಿ ಮುಕ್ತಾಯವಾಗುತ್ತಿತ್ತು. ಸಿಎಂಗೆ ಪತ್ರ ನ. 22ರಂದು ಹಿಂದುಳಿದ ವರ್ಗಗಳ …

ಹಿಂದುಳಿದ ವರ್ಗಗಳ ಆಯೋಗದ ಅ‍ಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅಧಿಕಾರಾವಧಿ ವಿಸ್ತರಣೆ Read More »

error: Content is protected !!
Scroll to Top