ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ
ಕಾರ್ಕಳ: ಮಿಯ್ಯಾರಿನ ಕಾರೋಲ್ ಗುಡ್ಡೆ ಪ್ರಸಿದ್ಧ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 26ರ ಭಾನುವಾರ ಸಂಜೆ 4 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ.ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಈ ಮೆರವಣಿಗೆಯು ಸಾಂಪ್ರದಾಯಿಕ ಕಲೆಗಳು ಹಾಗೂ ವಾದ್ಯಗೋಷ್ಠಿಗಳೊಂದಿಗೆ ಸಾಗಲಿದ್ದು, ಭಕ್ತರು ಸಮರ್ಪಿಸುವ ದವಸ-ಧಾನ್ಯಗಳ ಹೊರೆಕಾಣಿಕೆಯು ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳಿಗೆ ಬಳಕೆಯಾಗಲಿದೆ.ಗಣ್ಯರ ಉಪಸ್ಥಿತಿ:ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಗಣಪತಿ ಹೆಗ್ಡೆ […]









