• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಧಾರ್ಮಿಕ

ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ

ಕಾರ್ಕಳ: ಮಿಯ್ಯಾರಿನ ಕಾರೋಲ್ ಗುಡ್ಡೆ ಪ್ರಸಿದ್ಧ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 26ರ ಭಾನುವಾರ ಸಂಜೆ 4 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ.​ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಈ ಮೆರವಣಿಗೆಯು ಸಾಂಪ್ರದಾಯಿಕ ಕಲೆಗಳು ಹಾಗೂ ವಾದ್ಯಗೋಷ್ಠಿಗಳೊಂದಿಗೆ ಸಾಗಲಿದ್ದು, ಭಕ್ತರು ಸಮರ್ಪಿಸುವ ದವಸ-ಧಾನ್ಯಗಳ ಹೊರೆಕಾಣಿಕೆಯು ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳಿಗೆ ಬಳಕೆಯಾಗಲಿದೆ.​ಗಣ್ಯರ ಉಪಸ್ಥಿತಿ:ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಗಣಪತಿ ಹೆಗ್ಡೆ […]

ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ Read More »

ಯಾನ್‌ ತುಳು ಅಪ್ಪೆನ ಮಗೆ – ಉಡುಪಿಯ ನೂತನ ಬಿಷಪ್‌ ವಂ. ಡಾ. ಲೆಸ್ಲಿ ಕ್ಲಿಫರ್ಡ್‌

ಉಡುಪಿ : ಸೌಹಾರ್ದತೆ, ಸಹಬಾಳ್ವೆ, ಶಾಂತಿ ನಮ್ಮೆಲ್ಲರ ಬದುಕಿನ ಗುರಿಯಾಗಬೇಕು. ಯಾರೊಬ್ಬರ ಕಣ್ಣಲ್ಲಿ ಕಣ್ಣೀರು ತರಿಸುವ ಕೆಲಸ ಮಾಡಬಾರದು ಎಂಬುದು ಜಿಲ್ಲೆಯ ಜನತೆಯಲ್ಲಿ ನನ್ನ ವಿನಂತಿ ಎಂದು ಉಡುಪಿ ಧರ್ಮ ಕ್ಷೇತ್ರದ ಎರಡನೇ ಧರ್ಮಾಧ್ಯಕ್ಷರಾಗಿ ಪೀಠಾರೋಹಣ ಮಾಡಿರುವ ಅ.ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಸಂದೇಶದಲ್ಲಿ ಹೇಳಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಉಡುಪಿ ಧರ್ಮಪ್ರಾಂತದ ನೂತನ ಬಿಷಪ್ ಆಗಿ ನಿಯುಕ್ತಿಗೊಂಡ ಬಳಿಕ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಯಾನ್ ತುಳು ಅಪ್ಪೆನ ಮಗೆ ಎಂದು

ಯಾನ್‌ ತುಳು ಅಪ್ಪೆನ ಮಗೆ – ಉಡುಪಿಯ ನೂತನ ಬಿಷಪ್‌ ವಂ. ಡಾ. ಲೆಸ್ಲಿ ಕ್ಲಿಫರ್ಡ್‌ Read More »

ಮಿಯ್ಯಾರು: ಕಾರೋಲ್‌ಗುಡ್ಡೆ ಶ್ರೀ ಮಹಾಗಣಪತಿ – ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

ಕಾರ್ಕಳ: ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ ಜೋಡುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗರ್ಭಗೃಹಗಳಲ್ಲಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪುನಃಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವವು ಏ. 26ರಿಂದ 30ರವರೆಗೆ ವೈಭವದಿಂದ ಜರುಗಲಿದೆ.ಬ್ರಹ್ಮಶ್ರೀ ಬೆಳ್ಳಣ್ಣು ದೊಡ್ಡಮನೆ ಸರ್ವೇಶ ತಂತ್ರಿಗಳ ಮಾರ್ಗದರ್ಶನ ಹಾಗೂ ವೇದಮೂರ್ತಿ ನಲ್ಲೂರು ಪರಪ್ಪಾಡಿ ರಾಮಕೃಷ್ಣ ಭಟ್ ಅವರ ಸಹಯೋಗದಲ್ಲಿ ಈ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.ಇದೇ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಪುನಃಪ್ರತಿಷ್ಠಾಪನೆಯೂ ನಡೆಯಲಿದೆ.ಪಂಚದಿನಗಳ ಈ ಉತ್ಸವವು ಏ. 26ರ ಭಾನುವಾರ

ಮಿಯ್ಯಾರು: ಕಾರೋಲ್‌ಗುಡ್ಡೆ ಶ್ರೀ ಮಹಾಗಣಪತಿ – ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ Read More »

ಇಂದು ಪೊಲೀಸ್ ಇಲಾಖೆಯಿಂದ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ‘ನೇಮೋತ್ಸವ’

ಕಾರ್ಕಳ : ಕಾರ್ಕಳದ ಜನಜೀವನದಲ್ಲಿ ಅತೀವ ನಂಬಿಕೆಯ ಕೇಂದ್ರವಾಗಿರುವ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಇಂದು (ಮಂಗಳವಾರ) ಕಾರ್ಕಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳ ವತಿಯಿಂದ ಕಾಲಾವಧಿ ನೇಮೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ. ಪೊಲೀಸ್ ಇಲಾಖೆಯ ವತಿಯಿಂದ ನಡೆಯುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ದೈವಸ್ಥಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.​ಇಂದು ರಾತ್ರಿ ಗಂಟೆ 8:30ಕ್ಕೆ ದೈವದ ಭವ್ಯ ಗಗ್ಗರ ಸೇವೆ ಪ್ರಾರಂಭವಾಗಲಿದ್ದು, ತದನಂತರ ರಾತ್ರಿ 9:30ಕ್ಕೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ

ಇಂದು ಪೊಲೀಸ್ ಇಲಾಖೆಯಿಂದ ತಾಲೂಕು ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ‘ನೇಮೋತ್ಸವ’ Read More »

ಬೋಳ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ

ಕಾರ್ಕಳ : ಬೋಳ ಪಿಲಿಯೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವಕ್ಕೆ ಎ. 3ರಂದು ಚಾಲನೆ ದೊರೆತಿದ್ದು, ಎ. 14ರವರೆಗೆ ನಡೆಯಲಿದೆ.ವೇದಮೂರ್ತಿ ಕಡಂದಲೆ ಕೆ.ವಿ. ಕೃಷ್ಣ ಭಟ್ಟರ ಆಚಾರ್ಯತ್ವದಲ್ಲಿ ನೆರವೇರುತ್ತಿದೆ. ಎ. 3ರಂದು ರಾತ್ರಿ 7ಕ್ಕೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಶ್ರೀ ದೇವರಿಗೆ ಪ್ರಸನ್ನ ಪೂಜೆಯೊಂದಿಗೆ ನಡೆಯಿತು.ಎ. 4 ಶನಿವಾರದಿಂದ 7ರ ಮಂಗಳವಾರದವರೆಗೆ ವೇದ ಪಾರಾಯಣ ಹಾಗೂ ಎ. 8ರಿಂದ 14ರವರೆಗೆ ವಿವಿಧ ದೇವತಾ ಕಾರ್ಯಕ್ರಮಗಳು ಹಾಗೂ ಎ. 10ಕ್ಕೆ ಸಾಯಂ ಗಂಟೆ

ಬೋಳ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ Read More »

ಎ. 7 – 9 : ಇರ್ವತ್ತೂರು ಕೊರಗಜ್ಜ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಕಾರ್ಕಳ : ಕೊಳಕೆ ಇರ್ವತ್ತೂರು ಶ್ರೀ ಬ್ರಹ್ಮಮುಗೇರ ಮಹಾಕಾಳಿ ಹಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಎ. 7ರಿಂದ 9ರ ವರೆಗೆ ಜರುಗಲಿದೆ.ಎ. 7 ಮಂಗಳವಾರ ರಾತ್ರಿ 8 ಗಂಟೆಗೆ ಧರ್ಮರಸು ಪಂಜುರ್ಲಿ ದೈವ ಮತ್ತು ಮಹಾಕಾಳಿ ದೈವದ ನೇಮೋತ್ಸವ, ಎ. 8ರ ಬುಧವಾರ ಸಂಜೆ 6 ಗಂಟೆಗೆ ಶ್ರೀ ವೇಣುಗೋಪಾಲಕೃಷ್ಣ ಭಜನಾ ಮಂಡಳಿ ಕೊಳಕೆ ಇರ್ವತ್ತೂರು ಇವರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8ಗಂಟೆಗೆ ಬ್ರಹ್ಮ ಮುಗೇರ ದೈವ, ತನ್ನಿಮಾನಿಗ ದೈವದ ನೇಮೋತ್ಸವ

ಎ. 7 – 9 : ಇರ್ವತ್ತೂರು ಕೊರಗಜ್ಜ ದೈವಸ್ಥಾನ ವರ್ಷಾವಧಿ ನೇಮೋತ್ಸವ Read More »

ಎ. 2 : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕಾರ್ಕಳ : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ ಎ. 2ರಂದು ನಡೆಯಲಿದೆ. ಸಂಜೆ 6.30ಕ್ಕೆ ಭಂಡಾರ ಇಳಿಯುವುದು, 7.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಮಹಾಂಕಾಳಿ ಭಜನಾ ಮಂಡಳಿ, ಮಂಗಲ್ದಿ ಮಠ ಪಳ್ಳಿ ಇವರಿಂದ ಭಜನಾ ಕಾರ್ಯಕ್ರಮ ಹಾಗೂ 9 ಗಂಟೆಗೆ ಬೊಬ್ಬರ್ಯ ಹಾಗೂ ನೀಚ ದೈವದ ಸಿರಿ ಸಿಂಗಾರದ ನೇಮೋತ್ಸವ ನಡೆಯಲಿರುವುದು ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಎ. 2 : ಮುಂಡ್ಯಾರು ಕರೆಕಂಡಿಗೆ ಬೊಬ್ಬರ್ಯ ಹಾಗೂ ನೀಚ ದೈವಸ್ಥಾನ ವಾರ್ಷಿಕ ನೇಮೋತ್ಸವ Read More »

ಎ. 13-16 – ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನ : ದೈವ ಪುನರ್‌ ಪ್ರತಿಷ್ಠೆ – ಕಲಶಾಭಿಷೇಕ – ವಾರ್ಷಿಕ ನೇಮೋತ್ಸವ

ಕಾರ್ಕಳ : ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ದೈವ ಪುನರ್‌ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ವಾರ್ಷಿಕ ನೇಮೋತ್ಸವ ಎ. 13ರಿಂದ 16ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಜಾರ್ಕಳ ಪ್ರಸಾದ್‌ ತಂತ್ರಿಯವರ ಉಪಸ್ಥಿತಿಯಲ್ಲಿ ವೇ. ಮೂ. ಲಕ್ಷ್ಮೀ ನಾರಾಯಣ ಭಟ್‌ ಹಾಗೂ ಲಕ್ಷ್ಮೀ ಪ್ರಸಾದ್‌ ಭಟ್‌ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಎ. 13ರಂದು ಸಂಜೆ 5 ಗೇಹ ಪ್ರತಿಗ್ರಹ, ಭಂಡಾರ ತರುವುದು, ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಎ. 14ರಂದು ಬೆಳಗ್ಗೆ

ಎ. 13-16 – ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನ : ದೈವ ಪುನರ್‌ ಪ್ರತಿಷ್ಠೆ – ಕಲಶಾಭಿಷೇಕ – ವಾರ್ಷಿಕ ನೇಮೋತ್ಸವ Read More »

ಎ. 1-3 : ನೀರೆ ಗರಡಿಯ ವಾರ್ಷಿಕ ನೇಮೋತ್ಸವ

ಕಾರ್ಕಳ : ನೀರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಎ.1 ರಿಂದ ಎ. 3ರವರೆಗೆ ನಡೆಯಲಿದೆ. ಎ. 1ರಂದು ಬೆಳಿಗ್ಗೆ 9 ಗಂಟೆಗೆ ಭಂಡಾರದ ಮನೆ ಪೆರಿಮಾರು ಗುತ್ತು ಮನೆಯಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಹೊರಟು ಗರಡಿಗೆ ಬರುವುದು. ಅನಂತರ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ ಗಂಟೆ 12-30ರಿಂದ 3 ಗಂಟೆ ತನಕ ಸಾರ್ವಜನಿಕ ಅನ್ನಸಂತರ್ಪಣೆಯಾಗಲಿದೆ. ಸಂಜೆ 7 ಗಂಟೆಯಿಂದ ಧರ್ಮರಸು ಮತ್ತು ಕೊಡಮಣಿತ್ತಾಯಿ ನೇಮೋತ್ಸವ ಜರಗುವುದು. ಎ. 2ರಂದು ರಾತ್ರಿ ಬೈದರ್ಕಳ ನೇಮೋತ್ಸವನಡೆಯಲಿದೆ. ಎ.

ಎ. 1-3 : ನೀರೆ ಗರಡಿಯ ವಾರ್ಷಿಕ ನೇಮೋತ್ಸವ Read More »

ಕಾರ್ಕಳ : ದೇವಸ್ಥಾನದ ಆಡಳಿತಾಧಿಕಾರಿಗೆ 1 ಲಕ್ಷ ರೂ. ದಂಡ

ಕಾರ್ಕಳ : ಮಾಹಿತಿ ಹಕ್ಕಿನಡಿಯಲ್ಲಿ ಕೋರಿದ್ದ ಮಾಹಿತಿ ನೀಡದ್ದಕ್ಕೆ ಕಾರ್ಕಳದ ಶ್ರೀ ಮಾರಿಯಮ್ಮ ದೇವಾಲಯದ ಸಾರ್ವಜನಿಕ ಮಾಹಿತಿ ಆಧಿಕಾರಿಯಾದ ಆಡಳಿತ ಮೋಕ್ತೇಸರ ಕೆ.ಪಿ. ಗೋಪಾಲಕೃಷ್ಣ ರಾವ್ ಅವರಿಗೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ 1 ಲಕ್ಷ ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ. ಅರ್ಜಿದಾರರಿಗೆ ನಾಲ್ಕು ಪ್ರಕರಣಗಳಲ್ಲಿ 16 ಸಾವಿರ ರೂ. ಪರಿಹಾರ ನೀಡಬೇಕು ಎಂದೂ ನಿರ್ದೇಶನ ನೀಡಿದೆ. ಸೋಮನಾಥ ನಾಯಕ್ ಕೆ. ಎಂಬವರು ಅರ್ಜಿ ಸಲ್ಲಿಸಿ ದೇವಾಲಯಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಕೇಳಿದ್ದರು. ಶ್ರೀ

ಕಾರ್ಕಳ : ದೇವಸ್ಥಾನದ ಆಡಳಿತಾಧಿಕಾರಿಗೆ 1 ಲಕ್ಷ ರೂ. ದಂಡ Read More »

error: Content is protected !!
Scroll to Top