ಕರಾಟೆಯಲ್ಲಿ ಸಾಧನೆಗೈದ ಅವಳಿ ಸಹೋದರರು

ನಿಟ್ಟೆ: ಕರಾಟೆ ಕ್ಷೇತ್ರದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಸಾಧನೆಗೈದಿರುವ ನಿಟ್ಟೆಯ ಪ್ರತಿಭಾನ್ವಿತ ಅವಳಿ ಸಹೋದರರಾದ ಅನುಷ್ ಅರುಣ್ ಕೆ. ಮತ್ತು ಆಯುಷ್ ಅರುಣ್ ಅವರಿಗೆ ಈ ವರ್ಷದ ಪ್ರತಿಷ್ಠಿತ ‘ಯುವ ಸಾಧಕ’ ಬಿರುದು ನೀಡಿ ಗೌರವಿಸಲಾಗಿದೆ.
​ಕಾರ್ಕಳದ ತೆಲಿಕೆದ ತೆನಾಲಿ ತಂಡದ ಆಶ್ರಯದಲ್ಲಿ ಜರುಗಿದ ತೆಲಿಕೆದ ಸಂಭ್ರಮ-2026 ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಈ ಇಬ್ಬರು ಯುವ ಕ್ರೀಡಾಪಟುಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಬಿರುದು ಪ್ರದಾನ ಮಾಡಲಾಯಿತು.
ಬಾಲ್ಯದಲ್ಲೇ ಅಪ್ರತಿಮ ಕರಾಟೆ ಸಾಧನೆ
​ಅನುಷ್ ಮತ್ತು ಆಯುಷ್ ಅವರು ಬಾಲ್ಯದಿಂದಲೇ ಕರಾಟೆಯಲ್ಲಿ ತೊಡಗಿಸಿಕೊಂಡು ಗಮನಾರ್ಹ ಸಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಸಹೋದರರು, ನಿಟ್ಟೆಯ ಉದ್ಯಮಿ ಅರುಣ್ ಕುಮಾರ್ ಹಾಗೂ ಸಂಗೀತ ದಂಪತಿಯ ಸುಪುತ್ರರು.
ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಾಜಿ ಮೊಬೈಲ್ಸ್‌ನ ಪ್ರಶಾಂತ್ ಶೆಣೈ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ವೃಷಭರಾಜ್ ಕದಂಬ, ದಿನೇಶ್ ಪ್ರಭು ಕಲ್ಲೊಟ್ಟೆ ಹಾಗೂ ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು, ಸಾಧಕ ಸಹೋದರರನ್ನು ಹಾರೈಸಿದರು.





























































































error: Content is protected !!
Scroll to Top