Author name: Newskarkala Desk

ಜನಗಣತಿ ರಾಷ್ಟ್ರೀಯ ಕರ್ತವ್ಯ : ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

ಜನಗಣತಿ ನಿಯೋಜನೆ ಪ್ರಶ್ನಿಸಿ ಕೋರ್ಟ್‌ ಮೊರೆ ಹೋದ ಪ್ರಾಂಶುಪಾಲರಿಗೆ ಹಿನ್ನಡೆ ಬೆಂಗಳೂರು : ಜನಗಣತಿ ರಾಷ್ಟ್ರೀಯ ಕರ್ತವ್ಯ, ಅದಕ್ಕಾಗಿ ಬದ್ಧರಾಗಿರಬೇಕು. ರಜೆಯಲ್ಲಿರುವ ಶಿಕ್ಷಕರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ಜನಗಣತಿ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಬೆಂಗಳೂರಿನ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.ಶಿಕ್ಷಕರನ್ನು ಜನಗಣತಿಗೆ ನಿಯೋಜನೆ ಮಾಡದ ಶಾಲೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜೆ.ಪಿ. ನಗರದ 7ನೇ ಹಂತದಲ್ಲಿರುವ ದಿ ಬ್ರಿಗೇಡ್‌ ಶಾಲೆ […]

ಜನಗಣತಿ ರಾಷ್ಟ್ರೀಯ ಕರ್ತವ್ಯ : ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ Read More »

ಏ. 30 : ಹೊಸ್ಮಾರು- ನೆಲ್ಲಿಕಾರು ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಕಾರ್ಕಳ : 11ಕೆವಿ ಫೀಡರ್‌ಗಳ ಕಾಮಗಾರಿ ನಡೆಯಲಿರುವುದರಿಂದ ಎ.30ರಂದು ಬಜಗೋಳಿ ಹಾಗೂ ಹೊಸ್ಮಾರು ಫೀಡರ್‌ನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನೆಲ್ಲಿಕಾರು , ಚಂಡೆ ಬಸದಿ , ಪುಚ್ಚಬೆಟ್ಟು ,ಜ್ಯೋತಿ ನಗರ, ನಲ್ಲೂರು ಪೇರಲ್ಕೆ, ಪೆರ್ನೊಡಿ, ಹೊಸ್ಮಾರು ಟೌನ್, ಈದು, ನೂರಾಳ್ ಬೆಟ್ಟು ಏರಿಯಾ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಏ. 30 : ಹೊಸ್ಮಾರು- ನೆಲ್ಲಿಕಾರು ಭಾಗದಲ್ಲಿ ವಿದ್ಯುತ್ ವ್ಯತ್ಯಯ Read More »

ಜಾಗದ ವಿಚಾರಕ್ಕೆ ಹಲ್ಲೆ

ಕಾರ್ಕಳ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಬೆಳ್ಮಣ್ ಗ್ರಾಮದ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೂಡಬಿದ್ರೆಯ ಹೆನ್ರಿ ಪಿಂಟೋ (65) ಹಲ್ಲೆಗೊಳಗಾದವರು. ಇವರು 2008ರಲ್ಲಿ ಆರೋಪಿ ಮೈಕೆಲ್ ಕುಟಿನ್ಹೋ ಎಂಬುವವರಿಂದ 50 ಸೆಂಟ್ಸ್ ಜಾಗ ಖರೀದಿ ಮಾಡಿದ್ದರು. ಏಪ್ರಿಲ್ 9ರಂದು ಬೆಳಿಗ್ಗೆ ಹೆನ್ರಿ ಅವರು ತಮ್ಮ ಜಾಗದ ಕಸ ಕಡ್ಡಿಗಳಿಗೆ ಬೆಂಕಿ ಹಾಕಿ ಸ್ವಚ್ಛಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ಮೈಕೆಲ್ ಬೆಂಕಿ ಹಾಕಲು ನಿನಗೆ ಯಾರು ಹೇಳಿದ್ದು ಎಂದು ಅವಾಚ್ಯವಾಗಿ

ಜಾಗದ ವಿಚಾರಕ್ಕೆ ಹಲ್ಲೆ Read More »

ರಸ್ತೆಗೆ ಅಡ್ಡ ಬಂದ ದನ ಸ್ಕೂಟಿ ಸ್ಕಿಡ್ ಆಗಿ ತಾಯಿ-ಮಗನಿಗೆ ಗಾಯ

ಹೆಬ್ರಿ: ದನವೊಂದು ರಸ್ತೆಗೆ ಏಕಾಏಕಿ ಅಡ್ಡ ಬಂದ ಪರಿಣಾಮ ಅದನ್ನು ತಪ್ಪಿಸಲು ಹೋಗಿ ಸ್ಕೂಟಿ ಸ್ಕಿಡ್ ಆಗಿ ಬಿದ್ದ ಘಟನೆಯಲ್ಲಿ ತಾಯಿ ಮತ್ತು ಮಗ ಗಾಯಗೊಂಡಿರುವ ಘಟನೆ ತಾಲೂಕಿನ ಕುಚ್ಚೂರು ಗ್ರಾಮದ ಮಾಬ್ಲಾಡಿ ಎಂಬಲ್ಲಿ ಶನಿವಾರ ನಡೆದಿದೆ. ಹೆಬ್ರಿಯ ಎಸ್.ಆರ್. ಶಾಲೆಯಲ್ಲಿ ಕಚೇರಿ ಕೆಲಸ ಮುಗಿಸಿ ಮಗ ಯಕ್ಷೀತ್ (10) ನೊಂದಿಗೆ ಸ್ಕೂಟಿಯಲ್ಲಿ ಮನೆಗೆ ಮರಳುತ್ತಿದ್ದ ಅಕ್ಷತಾ ಎಂಬುವವರು ಅಪಘಾತಕ್ಕೆ ಈಡಾದವರು. ಸಂಜೆ ವೇಳೆಗೆ ಮಾಬ್ಲಾಡಿ ತಲುಪುತ್ತಿದ್ದಂತೆ ದನವೊಂದು ಏಕಾಏಕಿ ಸ್ಕೂಟಿಯತ್ತ ನುಗ್ಗಿ ಬಂದಿದ್ದು, ಡಿಕ್ಕಿ ತಪ್ಪಿಸಲು

ರಸ್ತೆಗೆ ಅಡ್ಡ ಬಂದ ದನ ಸ್ಕೂಟಿ ಸ್ಕಿಡ್ ಆಗಿ ತಾಯಿ-ಮಗನಿಗೆ ಗಾಯ Read More »

ಯುದ್ಧ ಅಂತ್ಯಗೊಳಿಸಲು ಇರಾನ್‌ ಸಲ್ಲಿಸಿದ ಹೊಸ ಪ್ರಸ್ತಾವನೆಗೆ ಟ್ರಂಪ್‌ ಅತೃಪ್ತಿ

ವಾಷಿಂಗ್ಟನ್ : ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ನೀಡಿರುವ ಇತ್ತೀಚಿನ ಪ್ರಸ್ತಾವನೆಯ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಫೆ. 28ರಂದು ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿದ್ದವು. ಇದು ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಕಾರಣವಾಗಿತ್ತು. ಇದು ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ, ಹಣದುಬ್ಬರ ಹಾಗೂ ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಪಶ್ಚಿಮ ಏಷ್ಯಾ ಸಂಘರ್ಷ ಮತ್ತು

ಯುದ್ಧ ಅಂತ್ಯಗೊಳಿಸಲು ಇರಾನ್‌ ಸಲ್ಲಿಸಿದ ಹೊಸ ಪ್ರಸ್ತಾವನೆಗೆ ಟ್ರಂಪ್‌ ಅತೃಪ್ತಿ Read More »

ನ್ಯಾಯ ದೊರೆಯುವ ನಂಬಿಕೆ ಇಲ್ಲ- ಸತ್ಯಾಗ್ರಹಕ್ಕೆ ಕೂರುತ್ತೇನೆ : ಕೇಜ್ರಿವಾಲ್‌ ಸವಾಲ್ ಪತ್ರ

ನವದೆಹಲಿ : ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ವಿಚಾರಣೆ ಎದುರಿಸುತ್ತಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಸಂಬಂಧಿಸಿದಂತೆ ಹೊಸದೊಂದು ತಗಾದೆ ತೆಗೆದಿದ್ದಾರೆ. ಈ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠ ಈ ವಿಚಾರಣೆ ನಡೆಸುವುದನ್ನು ಆಕ್ಷೇಪಿಸಿದ್ದ ಕೇಜ್ರಿವಾಲ್ ಅವರು ಆಗ ಹಿನ್ನಡೆ ಅನುಭವಿಸಿದ್ದರು. ತೀರ್ಪು ನೀಡಿದ್ದ ಕೋರ್ಟ್ ಸ್ವರ್ಣ ಕಾಂತ ಶರ್ಮಾ ಅವರ ನೇತೃತ್ವದಲ್ಲಿಯೇ ವಿಚಾರಣೆ ನಡೆಸುವುದಾಗಿ ಘೋಷಣೆ ಮಾಡಿತ್ತು.‌ಇದೀಗ ಅರವಿಂದ್

ನ್ಯಾಯ ದೊರೆಯುವ ನಂಬಿಕೆ ಇಲ್ಲ- ಸತ್ಯಾಗ್ರಹಕ್ಕೆ ಕೂರುತ್ತೇನೆ : ಕೇಜ್ರಿವಾಲ್‌ ಸವಾಲ್ ಪತ್ರ Read More »

ಬೀಗ ಹಾಕಿದ ಮನೆಯಲ್ಲಿ ಕಳ್ಳತನ; 2.64 ಲಕ್ಷ ಮೌಲ್ಯದ ಚಿನ್ನಾಭರಣ ಅಪಹರಣ

ಕಾರ್ಕಳ: ತಾಲ್ಲೂಕಿನ ಕಸಬಾ ಗ್ರಾಮದ ಅಯ್ಯಪ್ಪನಗರ ನಿವಾಸಿಯೊಬ್ಬರ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.​ಇಲ್ಲಿನ ನಿವಾಸಿ ಶಂಕರ ಕುಲಾಲ್ (49) ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 2.64 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕಳ್ಳರು ದೋಚಿದ್ದಾರೆ.​ಘಟನೆಯ ವಿವರ:​ಶಂಕರ ಕುಲಾಲ್ ಅವರು ಏಪ್ರಿಲ್ 23ರಂದು ಬೆಳಿಗ್ಗೆ 9:10ಕ್ಕೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು. ಏಪ್ರಿಲ್ 24ರಂದು ಸಂಜೆ 6:00 ಗಂಟೆಗೆ ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಬೀಗ ಹಾಕಿದ ಮನೆಯಲ್ಲಿ ಕಳ್ಳತನ; 2.64 ಲಕ್ಷ ಮೌಲ್ಯದ ಚಿನ್ನಾಭರಣ ಅಪಹರಣ Read More »

ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್‌ಚಂದ್ರ

ನಿಟ್ಟೆ ಅಪಘಾತದಲ್ಲಿ ಸಾವಿಗೀಡಾದ ಅಮಾಯಕ – ಪುತ್ರಿಯೂ ಗಂಭೀರ ಉಡುಪಿ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಬಳಿ ಎ. 24ರಂದು ಸಂಭವಿಸಿದ ಅಪಘಾತದಲ್ಲಿ ನಿಧನರಾದ ಬಜಕಳ ನವೀನ್‌ಚಂದ್ರ ಮೂಲ್ಯರ ಗೃಹಪ್ರವೇಶ ಮೇ 6ರಂದು ನಿಗದಿಯಾಗಿತ್ತು. ವೆಲ್ಡರ್‌ ಆಗಿದ್ದ ನವೀನ್‌ಚಂದ್ರ ಕುಟುಂಬ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು ಇತ್ತೀಚೆಗೆ ನೂತನ ಮನೆ ನಿರ್ಮಾಣ ಮಾಡಿದ್ದರು. ಕಷ್ಟಪಟ್ಟು ಕಟ್ಟಿದ ಮನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮೇ 6ರಂದು ಗೃಹಪ್ರವೇಶದ ಸಂಭ್ರಮಕ್ಕೆ ಅಣಿಯಾಗಿತ್ತು. ಆದರೆ, ವಿಧಿಲಿಖಿತ ಬೇರೆಯೇ ಆಗಿತ್ತು. ನವೀನ್‌ಚಂದ್ರ

ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್‌ಚಂದ್ರ Read More »

ಗೂಂಡಾ ಕಾಯ್ದೆಯಡಿ ಗರುಡ ಗ್ಯಾಂಗ್‌ನ ಸದಸ್ಯ ಅಲ್ಫಾಝ್ ಬಂಧನ

ಉಡುಪಿ : ರೌಡಿ ಶೀಟರ್, ಗರುಡ ಗ್ಯಾಂಗ್‌ನ ಸದಸ್ಯ ಕಿರಿಮಂಜೇಶ್ವರ ಅರೆಹೊಳೆ ಕ್ರಾಸ್‌ನ ಅಲ್ಫಾಝ್‌ (25) ನನ್ನು ಬೈಂದೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಉಡುಪಿ ಎಸ್‌ಪಿ ಡಾ. ಹರಿರಾಂ ಶಂಕರ್ ಅವರ ವರದಿಯ ಮೇರೆಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಎ.24ರಂದು ಈ ಆದೇಶ ಹೊರಡಿಸಿದ್ದಾರೆ.ಅಲ್ಫಾಝ್‌ ಹೆಸರಲ್ಲಿ ಉಡುಪಿ ಜಿಲ್ಲೆಯ ಶಿರ್ವ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ

ಗೂಂಡಾ ಕಾಯ್ದೆಯಡಿ ಗರುಡ ಗ್ಯಾಂಗ್‌ನ ಸದಸ್ಯ ಅಲ್ಫಾಝ್ ಬಂಧನ Read More »

ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ

ಕಾರ್ಕಳ: ಮಿಯ್ಯಾರಿನ ಕಾರೋಲ್ ಗುಡ್ಡೆ ಪ್ರಸಿದ್ಧ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಏಪ್ರಿಲ್ 26ರ ಭಾನುವಾರ ಸಂಜೆ 4 ಗಂಟೆಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಲಿದೆ.​ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡುವ ಈ ಮೆರವಣಿಗೆಯು ಸಾಂಪ್ರದಾಯಿಕ ಕಲೆಗಳು ಹಾಗೂ ವಾದ್ಯಗೋಷ್ಠಿಗಳೊಂದಿಗೆ ಸಾಗಲಿದ್ದು, ಭಕ್ತರು ಸಮರ್ಪಿಸುವ ದವಸ-ಧಾನ್ಯಗಳ ಹೊರೆಕಾಣಿಕೆಯು ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳಿಗೆ ಬಳಕೆಯಾಗಲಿದೆ.​ಗಣ್ಯರ ಉಪಸ್ಥಿತಿ:ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಗಣಪತಿ ಹೆಗ್ಡೆ

ಮಿಯ್ಯಾರು ಕಾರೋಲ್ ಗುಡ್ಡೆ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ: 26 ರಂದು ಭವ್ಯ ‘ಹಸಿರುವಾಣಿ’ ಹೊರೆಕಾಣಿಕೆ ಮೆರವಣಿಗೆ Read More »

error: Content is protected !!
Scroll to Top