ಕಾರ್ಕಳ : ಮಂಗಳೂರಿನ ಉದ್ಯಮಿ ಮುದ್ರಾಡಿ ಬೆಳಗುಂಡಿಯ ಮಂಜುನಾಥ ಆಚಾರ್ಯ (70) ಅವರು ಜು. 18ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಕೊಡುಗೈ ದಾನಿಯಾಗಿರುವ ಇವರು ಇತ್ತೀಚೆಗೆ ಲೋಕಾರ್ಪಣೆಗೊಂಡ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೀರ್ಥಮಂಟಪವನ್ನು ನೀಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮುದ್ರಾಡಿ ಬೆಳಗುಂಡಿಯ ಅವರ ಸ್ವಗೃಹದಲ್ಲಿ ಜು. 19 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




















