ಕಾರ್ಕಳ – ಹೆಬ್ರಿ ದೇವಸ್ಥಾನಗಳಲ್ಲಿ ಋಗುಪಕರ್ಮ ಆಚರಣೆ

ಕಾರ್ಕಳ : ಕಾರ್ಕಳ – ಹೆಬ್ರಿಯ ಉಭಯ ತಾಲೂಕಿನ ವಿವಿಧ ದೇವಸ್ಥಾನ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಆ. 29 ರಂದು ನೂಲ ಶ್ರಾವಣ (ಋಗುಪಕರ್ಮ) ದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.

ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಋಗುಪಕರ್ಮ ಆಚರಣೆ ಜರುಗಿದ್ದು, ಸುರೇಂದ್ರ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಸಾಮೂಹಿಕವಾಗಿ ಜನಿವಾರಧಾರಣೆ ನಡೆದಿದ್ದು, ಸುಮಾರು 700 ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಋಗುಪಾಕರ್ಮ ಆಚರಣೆ ನಡೆಯಿತು. ವೇದಮೂರ್ತಿ ಗಿಲ್ಲಾಳಿ ಪದ್ಮನಾಭ ಆಚಾರ್ಯ ನೇತೃತ್ವದಲ್ಲಿ, ಅರ್ಚಕ ರಾಮಕೃಷ್ಣ ಆಚಾರ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿತು. ಹಲವಾರು ವಿಪ್ರ ಬಾಂಧವರು ಭಾಗವಹಿಸಿದ್ದರು.






































error: Content is protected !!
Scroll to Top