ಹೆಬ್ರಿ : ಕಾಂಗ್ರೆಸ್ ಕಾರ್ಯಕರ್ತ ಬಿಜೆಪಿ ಸೇರ್ಪಡೆ

ಹೆಬ್ರಿ : ಚಾರ ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕ, ಕಳೆದ ಗ್ರಾ. ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಸಿದ್ದ ಚಾರ ಗ್ರಾಮದ ಪ್ರಮೋದ್ ಶೆಟ್ಟಿ ಗುರುವಾರದಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಪಕ್ಷದ ಧ್ವಜ ನೀಡಿ ಅವರನ್ನು ಬಿಜೆಪಿಗೆ ಸ್ವಾಗತಿಸಲಾಯಿತು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಪಕ್ಷದ ಪ್ರಮುಖರಾದ ಜ್ಯೋತಿ ಹರೀಶ್, ರಮೇಶ್ ಕುಮಾರ್ ಶಿವಪುರ, ಸುಧಾಕರ್ ಹೆಗ್ಡೆ, ಸೀತಾರಾಮ್ ಗಾಣಿಗ, ಸಿಎಂ ಪ್ರಸನ್ನ ಶೆಟ್ಟಿ, ಸುರೇಶ್ ಭಂಡಾರಿ, ತಾರನಾಥ್ ಬಂಗೇರ, ಸುರೇಶ್ ಪೂಜಾರಿ, ಶಿವಪ್ರಸಾದ್, ಶೋಧನ್ ಹೆಗ್ಡೆ, ಕಾರ್ಕಳ ವಿಸ್ತರಕ್ ಪ್ರಜ್ವಲ್ ಮೊದಲಾದವರು ಉಪಸ್ಥಿತರಿದ್ದರು.







































































































































error: Content is protected !!
Scroll to Top