ಕಾರ್ಕಳ : ಟ್ಯಾಂಕರ್ಗೆ ನೇಣು ಬಿಗಿದು ಲಾರಿ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಕ್ಕುಂದೂರು ಗ್ರಾ.ಪಂ. ಬಳಿಯ ಕಾಂಗ್ರೆಸ್ ಕಚೇರಿ ಮುಂಭಾಗ ನಡೆದಿದೆ. ಬೆಳಗಾಂ ಮೂಲದ ಈರಣ್ಣ (40) ಎಂಬವರೇ ಆತ್ಮಹತ್ಯೆಗೆ ಶರಣಾದ ಚಾಲಕ. ಕಳೆದ 10 ವರ್ಷಗಳಿಂದ ಕಾರ್ಕಳದಲ್ಲಿ ಲಾರಿ ಚಾಲಕರಾಗಿ ದುಡಿಯುತ್ತಿದ್ದ ಈರಣ್ಣ ಸೆ. 25 ರ ತಡರಾತ್ರಿ ಟ್ಯಾಂಕರ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯಿಂದಷ್ಟೇ ಸಾವಿಗೆ ಕಾರಣ ಏನೆಂದು ತಿಳಿಯಲಿದೆ. ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಟ್ಯಾಂಕರ್ಗೆ ನೇಣು ಬಿಗಿದು ಲಾರಿ ಚಾಲಕ ಆತ್ಮಹತ್ಯೆ
































