ಚಂದ್ರಯಾನದ ಕೌಂಟ್‌ಡೌನ್‌ ಧ್ವನಿಯಾಗಿದ್ದ ವಿಜ್ಞಾನಿ ವಲಮರ್ತಿ ನಿಧನ

ಚೆನ್ನೈ: ಚಂದ್ರಯಾನ ಯಶಸ್ಸು ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಏರಿಸಿದ ಖುಷಿಯಲ್ಲಿರುವಾಗಲೇ ಈ ವೈಜ್ಞಾನಿಕ ಸಾಹಸಕ್ಕಾಗಿ ಶ್ರಮಿಸಿದ್ದ ವಿಜ್ಞಾನಿಯೊಬ್ಬರು ಹೃದಯಾಘಾತವಾಗಿ ನಿಧನರಾದ ದುಃಖದ ಸುದ್ದಿ ಬಂದಿದೆ. ಚಂದ್ರಯಾನ 3 ಉಡಾವಣೆಯ ಕೌಂಟ್​ಡೌನ್ ಹಿಂದಿನ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲಮರ್ತಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ.
ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಇಸ್ರೊ ರಾಕೆಟ್ ಉಡಾವಣೆಯ ಸಮಯದಲ್ಲಿ ಕೌಂಟ್​ಡೌನ್ ಎಂಬುದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಇದು ಇಡೀ ರಾಷ್ಟ್ರವನ್ನು ಒಟ್ಟುಗೂಡಿಸುವ ಒಂದು ಅಪ್ರತಿಮ ಘಟನೆಯಾಗಿದೆ. ಚಂದ್ರಯಾನ 3ರ ವೇಳೆ ಕೇಳಿದ್ದ ಕೌಂಟ್​ಡೌನ್ ಧ್ವನಿಯಾಗಿದ್ದ ವಿಜ್ಞಾನಿ ವಲಮರ್ತಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು, ಚೆನ್ನೈನ ಆಸ್ಪತ್ರೆಯಲ್ಲಿ ನಿಧನರಾದರು.









































































































































































error: Content is protected !!
Scroll to Top