ಬೆಂಗಳೂರು : ಅಶಿಸ್ತು, ರಸ್ತೆ ಅಪಘಾತ, ಗೈರು ಸೇರಿದಂತೆ ವಿವಿಧ ಆರೋಪದಡಿ ದಾಖಲಾಗಿದ್ದ ಪ್ರಕರಣಗಳನ್ನು ಏಕಕಾಲಕ್ಕೆ ಸಾರಿಗೆ ನೌಕರರಿಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಹಿಂಪಡೆದಿದೆ. ಈ ಮೂಲಕ ಕಾರ್ಮಿಕ ದಿನಾಚರಣೆ ಪ್ರಯುಕ್ತ ಬಸ್ ನೌಕರರಿಗೆ ಕೊಡುಗೆ ನೀಡಿದಂತಾಗಿದೆ. ಇದರಲ್ಲಿ 8,414 ಸಿಬ್ಬಂಧಿಗಳ ವಿರುದ್ದ ಅಶಿಸ್ತಿನ ಪ್ರಕರಣಗಳಿದ್ದು ಬಹುತೇಕ ನೌಕರರ ವಿರುದ್ಧ 25,000 ರೂ.ವರೆಗೂ ದಂಡ ವಿಧಿಸುವಂತಹ ಪ್ರಕರಣಗಳಾಗಿದ್ದು, ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಕೇವಲ 100 ರಿಂದ 500 ರೂ. ವರೆಗೆ ದಂಡ ವಿಧಿಸಿ 7,200 ಪ್ರಕರಣಗಳನ್ನು ರದ್ದುಪಡಿಸಲಾಯಿತು.
ಕಾರ್ಮಿಕ ದಿನಾಚರಣೆ : ನೌಕರರ ವಿರುದ್ಧದ 7,200 ಪ್ರಕರಣ ರದ್ದು














































































