ಕಾರ್ಕಳ, ಅ.15: ಶಿರ್ಲಾಲು ಹಾಡಿಯಂಗಡಿಯ ಕೃಷ್ಣ ಆಚಾರ್ಯ ಎಂಬವರು ಅ.13ರಂದು ಬೈಕ್ ನಲ್ಲಿ ಹೋಗುತ್ತಿರುವಾಗ ಕೆರ್ವಾಶೆ ಕಡೆಯಿಂದ ಬಜಗೋಳಿ ಕಡೆಗೆ ವೇಗವಾಗಿ ಹೋಗುತ್ತಿದ್ದ ಬೈಕ್ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮವಾಗಿ ಬೈಕ್ ಪಲ್ಟಿಯಾಗಿ ಸಹ ಸವಾರ ರಮೇಶ್ ಎಂಬವರು ಗಾಯಗೊಂಡು ಉಡುಪಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸವಾರ ಸಂದೀಪ್ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ಲಾಲಿನಲ್ಲಿ ಬೈಕ್ ಪಲ್ಟಿಯಾಗಿ ಸಹ ಸವಾರನಿಗೆ ಗಂಭೀರ ಗಾಯ

































































