ಕಾರ್ಕಳ, ಅ. 2 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಕಳ ಇದರ ವತಿಯಿಂದ ಮಹಾತ್ಮ ಗಾಂಧೀಜಿಯವರ 151 ನೇ ಜಯಂತಿಯನ್ನು ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ಆಚರಿಸಲಾಯಿತು. ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಸರ್ವಧರ್ಮ ಪ್ರಾರ್ಥನೆ, ಪರಿಸರ ಸ್ವಚ್ಛತೆ, ಶ್ರಮದಾನ ನಡೆಸಲಾಯಿತು.
ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಉಡುಪಿ ಜಿಲ್ಲಾ ಗೈಡ್ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್, ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಜಗದೀಶ್ ಹೆಗ್ಡೆ ಸೂಡ ಸರಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಹಾಗೂ ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಬಿಲ್ಲವ ಯೂತ್ ಕ್ಲಬ್ನ ಅಧ್ಯಕ್ಷ ರವಿರಾಜ್ ಪೂಜಾರಿ, ಶಿಕ್ಷಕರಾದ ನವೀನ್ ಕುಮಾರ್ ಬಜಗೋಳಿ, ಹರೀಶ್ ಕಲ್ಯಾಣ್ ಪುರ, ಅಕ್ಷಯಾ, ನೀತಾ ಶೆಟ್ಟಿ, ನಿಧಿ ಉಪಸ್ಥಿತರಿದ್ದರು.
ಆರ್.ಎಸ್.ಎಲ್. ಮಾಸ್ಟರ್ ಶರತ್ ರಾಜ್ ಸ್ವಾಗತಿಸಿ , ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು. ಹರೀಶ್ ಕೆ. ವಂದಿಸಿದರು.



































































