ಅಜೆಕಾರು : ಕೆರ್ವಾಶೆ ಪೇಟೆಯಲ್ಲಿನ ಫಾಸ್ಟ್ಫುಡ್ ಅಂಗಡಿಯೊಂದರ ಬಳಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಓರ್ವನನ್ನು ಅಜೆಕಾರು ಪೊಲೀಸರು ಆ. 3ರಂದು ವಶಕ್ಕೆ ಪಡೆದಿರುತ್ತಾರೆ. ಜುಗಾರಿ ನಡೆಯುತ್ತಿರುವ ಕುರಿತು ದೊರೆತ ಮಾಹಿತಿ ಮೇರೆಗೆ ಎಸ್ಐ ಸುದರ್ಶನ ದೊಡಮನಿ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿದ್ದ ಇಬ್ಬರು ಪರಾರಿಯಾಗಿದ್ದು, ಆರೋಪಿ ಪೂಂಜಾಂಜಿ ನೂರಾಲ್ಬೆಟ್ಟು ಪ್ರದೀಪ ಹೆಗ್ಡೆ (30)ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತನಿಂದ 2260 ರೂ. ವಶಕ್ಕೆ ಪಡೆಯಲಾಗಿದ್ದು, ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರ್ವಾಶೆ : ಮಟ್ಕಾ ಅಡ್ಡೆಗೆ ದಾಳಿ
