ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳಿಗೆ ರಂಗಮನೆ ಪ್ರಶಸ್ತಿ

0

ಸುಳ್ಯ, ಆ. 9: ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ(ರಿ.) ರಂಗ ನಿರ್ದೇಶಕ ಜೀವಮ್‌ ರಾಂ ಸುಳ್ಯ ಅವರ ತಾಯಿ ವನಜಾಕ್ಷಿ ಜಯರಾಮ ಅವರ ನೆನಪಿನಲ್ಲಿ ನೀಡುವ ಈ ಸಾಲಿನ ಪ್ರತಿಷ್ಠಿತ ವನಜ ರಂಗಮನೆ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಆಯ್ಕೆಯಾಗಿದ್ದಾರೆ.

ಶಾಸ್ತ್ರಿಯವರು ಪ್ರಸ್ತುತ ಬೆಳ್ತಂಗಡಿ  ತಾಲೂಕಿನ ಕನ್ನಡಿಕಟ್ಟೆಯಲ್ಲಿ ವಾಸವಿದ್ದು, ಅವರ ಮನೆಯಲ್ಲಿಯೇ ಆ.28ರಂದು ಪ್ರಶಸ್ತಿ ಪ್ರದಾನಿಸಲಾಗುವುದು. ಈ ಪ್ರಶಸ್ತಿ ಯಕ್ಷ ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರವನ್ನು ಹೊಂದಿದೆ.

ಮೂಡಂಬೈಲು ಗೋಪಾಲಕೃಷ್ಣ  ಶಾಸ್ತ್ರಿಗಳು ತಾಳಮದ್ದಳೆಯ ಪಂಡಿತ ಪರಂಪರೆಯ ಹಿರಿಯ ಅರ್ಥದಾರಿಗಳು. ನಿವೃತ್ತ ಮುಖ್ಯೋಪಾಧ್ಯಯರಾಗಿರುವ ಅವರ ಹೆಸರು ತಾಳಮದ್ದಳೆ ಕ್ಷೇತ್ರದಲ್ಲಿ ಮೇರುಮಟ್ಟದಲ್ಲಿದೆ.

Previous articleಎಂದು ಪರಿಹಾರ ಕಂಡೀತು ಮೂಲಗೇಣಿದಾರರ ಮೂಲಭೂತ ಸಮಸ್ಯೆ?
Next article16 ವರ್ಷದ ಹಿಂದೆ ಕಳವಾದ ಪರ್ಸ್‌ ಮರಳಿ ಸಿಕ್ಕಿದ್ದು ಹೇಗೆ?

LEAVE A REPLY

Please enter your comment!
Please enter your name here