ಕಾರ್ಕಳ ಅಂಬೇಡ್ಕರ್‌ ಭವನದ ನಿರ್ವಹಣಾ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಪ್ರತಿಮಾ ರಾಣೆ, ಸುರೇಶ್‌, ಅಣ್ಣಪ್ಪ ನಕ್ರೆ

ಕಾರ್ಕಳ : ಕಾಬೆಟ್ಟುವಿನಲ್ಲಿರುವ ತಾಲೂಕು ಮಟ್ಟದ ಡಾ. ಬಿ.ಆರ್.‌ ಅಂಬೇಡ್ಕರ್‌ ಭವನದ ನಿರ್ವಹಣಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಪುರಸಭಾ ಮಾಜಿ ಅಧ್ಯಕ್ಷೆ, ಕಾರ್ಕಳ ಮಾರ್ಕೆಟ್‌ ರಸ್ತೆಯ ಪ್ರತಿಮಾ ರಾಣೆ, ಅತ್ತೂರು ಚೇತನ ಹಳ್ಳಿಯ ಸುರೇಶ್‌ ಹಾಗೂ ನಕ್ರೆಯ ಅಣ್ಣಪ್ಪ ಅವರು ಆಯ್ಕೆಯಾಗಿದ್ದಾರೆ.

ಸರಕಾರದ ಆದೇಶದಂತೆ ಕಾರ್ಕಳ ತಹಶೀಲ್ದಾರ್‌ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ತಾಲೂಕು ಪಿಡಬ್ಲೂಡಿಯ ಕಾರ್ಯಕಾರಿ ಅಭಿಯಂತರು, ಜಿ. ಪಂ. ಇಂಜಿನಿಯರ್‌ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರರು, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸದಸ್ಯರಾಗಿ ಈ ಮೂವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಹೊಂದಿರುವ ಡಾ. ಬಿ.ಆರ್.‌ ಅಂಬೇಡ್ಕರ್‌ ಭವನ ನಿರ್ವಹಣಾ ಸಮಿತಿ ರಚಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ.

































































































error: Content is protected !!
Scroll to Top