ಭೂಮಿ ಪೂಜೆಯಲ್ಲಿ ಭಾಗಿಯಾಗಲು ಒಪ್ಪಿದ ಆಡ್ವಾಣಿ-ಜೋಶಿ

ದಿಲ್ಲಿ, ಆ.2: ಬಿಜೆಪಿಯ ಹಿರಿಯ ನಾಯಕರಾದ ಎಲ್.‌ ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ  ಆ.5 ರಂದು  ಅಯೋಧ್ಯೆಯಲ್ಲಿನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ , ಇಲ್ಲವಾ ಎಂಬ  ಅನುಮಾನ ನಿವಾರಣೆಯಾಗಿದೆ.

ಈ  ಹಿರಿಯರಿಬ್ಬರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು  ಒಪ್ಪಿಕೊಂಡಿದ್ದಾರೆ. ಆದರೆ ಅವರು ಸ್ವತಃ  ಅಯೋಧ್ಯೆಗೆ ಹೋಗುವುದಿಲ್ಲ ಬದಲಾಗಿ ವೀಡಿಯೊ ಕಾನ್ಫರೆನ್ಸಿಂಗ್‌ ಮೂಲಕ  ಭಾಗವಹಿಸಲಿದ್ದಾರೆ.

ಇದೇ ವೇಳೆ ರಾಮ ಮಂದಿರ ಹೋರಾಟದ ಮುಂಚೂಣಿಯಲ್ಲಿದ್ದ ಈ ಹಿರಿಯರಿಗೆ ಅವರ ಘನತೆ, ಗೌರವ ತಕ್ಕಂತೆ ಆಮಂತ್ರಣ ನೀಡಲಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಉಳಿದವರಿಗೆ ಆಮಂತ್ರಣ  ಪತ್ರ ಕಳುಹಿಸಿದ್ದರೆ ಆಡ್ವಾಣಿ  ಮತ್ತು  ಜೋಶಿಯವರನ್ನು ಬರೀ ಫೋನಿನಲ್ಲಿ ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ.

Latest Articles

error: Content is protected !!