ಭೂಮಿಪೂಜೆಯಲ್ಲಿ ಆಡ್ವಾಣಿ ಭಾಗವಹಿಸುವುದಿಲ್ಲ?

ದಿಲ್ಲಿ, ಆ.1 : ಅಯೋಧ್ಯೆಯಲ್ಲಿ ಆ.5 ರಂದು ನೆರವೇರಲಿರುವ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಬಿಜೆಪಿಯ  ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು  ಮುರಳಿ ಮನೋಹರ ಜೋಶಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂಬ ಸುದ್ದಿ ಕೇಳಿ ಬಂದಿದೆ.  

ಕೊರೊನಾ ಕಾರಣ ಸೀಮಿತ ಸಂಖ್ಯೆಯ ಅತಿಥಿಗಳಿಗಷ್ಟೇ ಅವಕಾಶವಿದೆ. ಆಡ್ವಾಣಿ ಮತ್ತು ಜೋಶಿಯವರಿಗೆ ನಿರ್ದಿಷ್ಟವಾದ ಯಾವುದೇ ಕಾರ್ಯ ಭೂಮಿ ಪೂಜೆಯಲ್ಲಿ ಇಲ್ಲದಿರುವುದರಿಂದ ಅವರಿಬ್ಬರು ಭಾಗವಹಿಸುವ ಸಾಧ್ಯತೆಯಿಲ್ಲ ಎಂದು  ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುತ್ತಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಆರ್‌ ಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತಿತರರು ಭಾಗವಹಿಸಲಿದ್ದಾರೆ.









































error: Content is protected !!
Scroll to Top