ಕಾರ್ಕಳ : ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾ ಮಂಡಳ ಮೈಸೂರು ಇದರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಘವ ನಾಯ್ಕ ಮುದ್ರಾಡಿ ಅವರು ಅರುಣ್ ಅವರ ಎದುರು ಸೋಲು ಕಂಡಿದ್ದಾರೆ. ಎ. 23ರಂದು ಮೈಸೂರಿನ ಮಹಾಮಂಡಲ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಆಗಿದ್ದ ರಾಘವ ನಾಯ್ಕ ಮುದ್ರಾಡಿ ಅವರಿಗೆ ಸೋಲಾಗಿದೆ. ಅರುಣ್ ಅವರು 9 ಮತಗಳನ್ನು ಗಳಿಸಿದ್ದರೆ, ರಾಘವ ಅವರಿಗೆ 3 ಮತ ದೊರೆತಿದೆ. ಸಿದ್ದಮರಿ ಗೌಡ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುತ್ತಾರೆ.
ಲ್ಯಾಂಪ್ಸ್ ಸಹಕಾರ ಮಹಾ ಮಂಡಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ – ರಾಘವ ನಾಯ್ಕ ಮುದ್ರಾಡಿಗೆ ಸೋಲು






































