ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ. 96. 83 ಫಲಿತಾಂಶ ಪಡೆದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಇಶಾ ಎಚ್. ಕುಂದರ್ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸನ್ಮಾನಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಮಾರ್, ಕುಕ್ಕುಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಾಜೇಶ್ ರಾವ್, ಜ್ಯೋತಿ ರಮೇಶ್, ಮಾಜಿ ಸದಸ್ಯ ಯೋಗೀಶ್ ಸಾಲ್ಯಾನ್, ಪ್ರಸಾದ್ ಐಸಿರ, ಪ್ರಸನ್ನ, ಸ್ನೇಹೇಶ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತಂದೆ ಹರೀಶ್ ಕುಂದರ್, ತಾಯಿ ಸುಜಯ ಚಿತ್ರದಲ್ಲಿದ್ದಾರೆ.
ಇಶಾ ಎಚ್. ಕುಂದರ್ ಗೆ ಸನ್ಮಾನ
