ಭವನೇಶ್ವರದಲ್ಲಿ ಕೊವಾಕ್ಸಿನ್‌ ಮಾನವ ಪ್ರಯೋಗ

0

ಭುವನೇಶ್ವರ,ಜು. 28: ಭಾರತದ  ಬಹು ನಿರೀಕ್ಷಿತ ಕೊರೋನಾ ಲಸಿಕೆ ಕೋವ್ಯಾಕ್ಸಿನ್ನ ಮಾನವ ಪ್ರಯೋಗ ಭುವನೇಶ್ವರದಲ್ಲಿರುವ ಒಂದು ಸಂಸ್ಥೆಯಲ್ಲಿ ಪ್ರಾರಂಭವಾಗಿದೆ.

ಕೊರೋನಾ ಲಸಿಕೆ ಅಥವಾ ಕೊವಾಕ್ಸಿನ್‌ನ ಬಹುನಿರೀಕ್ಷಿತ ಪ್ರಯೋಗವು ಭುವನೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಯಲ್ಲಿ ಪ್ರಾರಂಭವಾಯಿತು, ಇದು ICMR ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾಗಿದೆ.

ಭುವನೇಶ್ವರವಲ್ಲದೆ, ಕ್ಲಿನಿಕಲ್ ಪ್ರಯೋಗಕ್ಕೆ ಆಯ್ಕೆಯಾದ ಇತರ ಸಂಸ್ಥೆಗಳಾಗಿ ವಿಶಾಖಪಟ್ಟಣಂ, ರೋಹ್ಟಕ್, ನವದೆಹಲಿ, ಪಾಟ್ನಾ, ಬೆಳಗಾವಿ, ನಾಗ್ಪುರ, ಗೋರಖ್‌ಪುರ, ಕಟ್ಟಂಕುಲಥೂರ್, ಹೈದರಾಬಾದ್, ಆರ್ಯ ನಗರ, ಕಾನ್ಪುರ್ ಮತ್ತು ಗೋವಾ ಆಯ್ಕೆಯಾಗಿದೆ.

ಕೊವಾಕ್ಸಿನ್ ಮಾನವ ಪ್ರಯೋಗದ 1 ಹಂತದ ಮೊದಲ ಭಾಗವು ರೋಹ್ಟಕ್ ನ ವೈದ್ಯಕೀಯ ವಿಜ್ಞಾನದ ಸ್ನಾತಕೋತ್ತರ ಸಂಸ್ಥೆಯಲ್ಲಿ (ಪಿಜಿಐ) ಶನಿವಾರ ಪೂರ್ಣಗೊಂಡಿದೆ ಎಂದು ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ.ಸವಿತಾ ವರ್ಮಾ ಹೇಳಿದ್ದಾರೆ.

ಲಸಿಕೆ ಪ್ರಯೋಗದ ಮೊದಲ ಹಂತ ಪೂರ್ಣಗೊಂಡಿದೆ. ಭಾರತದಾದ್ಯಂತ 50 ಜನರಿಗೆ ಲಸಿಕೆ ನೀಡಲಾಯಿತು ಮತ್ತು ಫಲಿತಾಂಶಗಳು ಉತ್ತೇಜನಕಾರಿಯಾಗಿವೆ. ಮೊದಲನೇ ಹಂತದ ಎರಡನೇ ಭಾಗದಲ್ಲಿ ಆರು ಜನರಿಗೆ ಶನಿವಾರ ಲಸಿಕೆ ನೀಡಲಾಯಿತು ಎಂದು ಅವರು ಹೇಳಿದರು.

Previous articleಶಿಲಾನ್ಯಾಸ ದಿನದಂದೇ ಅಯೋಧ್ಯೆಗೆ ಸಿಗಲಿದೆ 500 ಕೋ.ರೂ. ಯೋಜನೆ
Next articleಪಠ್ಯ ಪುಸ್ತಕದಿಂದ ಟಿಪ್ಪು ಪಾಠಕ್ಕೆ ಕೊಕ್‌ :ಕಾಂಗ್ರೆಸ್‌ ಕೆಂಡಾಮಂಡಲ

LEAVE A REPLY

Please enter your comment!
Please enter your name here