ಆರೋಗ್ಯವೇ ಭಾಗ್ಯ
“ಶರೀರಮಾದ್ಯಂ ಖಲು ಧರ್ಮ ಸಾಧನಂ”ಅಂದರೆ, ಎಲ್ಲಾ ಧರ್ಮ, ಕರ್ತವ್ಯ ಮತ್ತು ಸುಖಗಳನ್ನು ಪಡೆಯಲು ಮೊದಲು ಬೇಕಾಗಿರುವುದು ಆರೋಗ್ಯಕರ ಶರೀರ. ಹಣವಿದ್ದರೂ, ಮನೆ ಇದ್ದರೂ, ವಿದ್ಯೆ ಇದ್ದರೂ ಆರೋಗ್ಯ ಇಲ್ಲದಿದ್ದರೆ ಜೀವನದಲ್ಲಿ ಸುಖವೇ ಇರುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ. ಆರೋಗ್ಯ ಎಂದರೇನು?ಆಯುರ್ವೇದದ ಪ್ರಕಾರ ಆರೋಗ್ಯ ಎಂದರೆ ಕೇವಲ ರೋಗ ಇಲ್ಲದಿರುವುದು ಮಾತ್ರವಲ್ಲ.ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ | ಪ್ರಸನ್ನಾತ್ಮೇಂದ್ರಿಯ ಮನಃ ಸ್ವಸ್ಥ ಇತ್ಯಭಿಧೀಯತೇ || ಅಂದರೆ, ತ್ರಿದೋಷಗಳು ಸಮತೋಲನದಲ್ಲಿದ್ದು, ಜಠರಾಗ್ನಿ ಸರಿಯಾಗಿದ್ದು, ಏಳು […]









