• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಬರಹ

ಕ್ರಿಯೇಟಿವ್ ಪುಸ್ತಕಮನೆಯಲ್ಲಿ ‘ಪರಸ್ಪರ’ ದಲ್ಲಿ ಡಾ. ನಾ ಸೋಮೇಶ್ವರ ಮತ್ತು ಪ್ರೇಮ ಕವಿ ಬಿ. ಆರ್. ಲಕ್ಷ್ಮಣರಾವ್

ನಿರಂತರ ಓದುವುದೇ ನನ್ನ ಬಂಡವಾಳ : ಡಾ. ನಾ. ಸೋಮೇಶ್ವರ ಕಾರ್ಕಳ : ನಿರಂತರ ಓದುವುದೇ ನನ್ನ ಬಂಡವಾಳ. ಪುಸ್ತಕಗಳನ್ನು ಇವತ್ತಿಗೂ ನಾನು ಓದುತ್ತೇನೆ. ಪುಸ್ತಕವನ್ನು ಓದದೆ ಯಾವುದೇ ಪ್ರಶ್ನೆಗಳನ್ನು ಕೇಳುವುದು ಅಸಾಧ್ಯ ಎಂದು ಡಾ. ನಾ. ಸೋಮೇಶ್ವರ ತಿಳಿಸಿದರು. ತನ್ಮೂಲಕ ಶಾಲಾ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದ ಅವರು ಆಗಿನ ಕಾಲದಲ್ಲಿ ಸಿಗುತ್ತಿದ್ದ ಅಷ್ಟೂ ಪುಸ್ತಕಗಳನ್ನು ಓದುತ್ತಿದ್ದು, ಇದರ ಮೂಲಕ ತನ್ನನ್ನು ತಾನೇ ಮಾರ್ಗದರ್ಶನ ಮಾಡಿಕೊಳ್ಳುತ್ತಿದ್ದೆ ಎಂದರು. ಕಾರ್ಕಳದ ಜೋಡುರಸ್ತೆಯಲ್ಲಿರುವ ಕ್ರಿಯೇಟಿವ್ ಪುಸ್ತಕಮನೆಯಲ್ಲಿ ನಡೆದ ಪರಸ್ಪರ […]

ಕ್ರಿಯೇಟಿವ್ ಪುಸ್ತಕಮನೆಯಲ್ಲಿ ‘ಪರಸ್ಪರ’ ದಲ್ಲಿ ಡಾ. ನಾ ಸೋಮೇಶ್ವರ ಮತ್ತು ಪ್ರೇಮ ಕವಿ ಬಿ. ಆರ್. ಲಕ್ಷ್ಮಣರಾವ್ Read More »

ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ಹಬ್ಬಗಳು ನಮ್ಮ ದೇಶದ ಸಂಸ್ಕೃತಿಯ ಅಸ್ಮಿತೆ. ಹಬ್ಬ ಎಂದರೆ ಪರ್ವ. ಪರ್ವ ಎಂದರೆ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ ವಹಿಸುವಂಥದ್ದು ಎಂದರ್ಥ. ತುಳುವಿನಲ್ಲಿ ಪರ್ಬ ಎನ್ನುತ್ತೇವೆ. ನಾವು ಆಚರಿಸುವ ಹಬ್ಬಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಲ್ಲ, ಅಲ್ಲಿ ಜೀವನ ಮೌಲ್ಯವಿರುತ್ತದೆ. ಅವು ವೈವಿಧ್ಯತೆ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿಯೂ ಇರುತ್ತವೆ. ನಮ್ಮ ಕಲೆ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಜೀವನ,

ಭಾವೈಕ್ಯ, ಭಕ್ತಿಭಾವಕ್ಕೆ ಜೀವಕಳೆ ತುಂಬುವ ಗಣೇಶೋತ್ಸವ Read More »

ಜ್ಞಾನದ ಬೆಳಕು ಹರಿಸಿದ ಮಹಾನ್‌ ಸಂತ ನಾರಾಯಣ ಗುರುಗಳು

ಸಮಾಜ ಸುಧಾರಣೆ ಮೂಲಕ ಮನುಕುಲದ ದೇವರಾದ ಕ್ರಾಂತಿ ಪುರುಷ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿ ಹೇಳಿದ, ಆ ಮೂಲಕ ಸಮಾಜದಲ್ಲಿ ಧರ್ಮ, ಜಾತಿ, ವರ್ಣದ ನೆಲೆಯಲ್ಲಿ ಆಗುತ್ತಿದ್ದ ತಾರತಮ್ಯಗಳನ್ನು ತೊಡೆದು ಹಾಕಲು ಜೀವಮಾನವಿಡೀ ಶ್ರಮಿಸಿದ ಸಂತ ಶ್ರೇಷ್ಠ ನಾರಾಯಣ ಗುರುಗಳು ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ನಾರಾಯಣ ಗುರುಗಳು ಸಮಾಜದಲ್ಲಿ ಮಡುಗಟ್ಟಿ ನಿಂತಿದ್ದ ಅಸ್ಪೃಶ್ಯತೆಯ ಪಿಡುಗನ್ನು ನಿವಾರಿಸಲು ತಮ್ಮದೇ ಆದ ರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.

ಜ್ಞಾನದ ಬೆಳಕು ಹರಿಸಿದ ಮಹಾನ್‌ ಸಂತ ನಾರಾಯಣ ಗುರುಗಳು Read More »

ಫೋಟೊಗಳೆಂದರೆ ನೆನಪಿನ ಖಜಾನೆಯಲ್ಲಿರುವ ಅಮೂಲ್ಯ ಮುತ್ತುಗಳು

ಇಂದು ವಿಶ್ವ ಛಾಯಾಗ್ರಹಣ ದಿನ ಒಂದು ಅದ್ಭುತವಾದ ಫೋಟೊ ಕಂಡಾಗ ವಾಹ್‌ ಎಂಬ ಉದ್ಗಾರ ತನ್ನಿಂದ ತಾನೇ ನಮ್ಮ ಬಾಯಿಂದ ಹೊರಡುತ್ತದೆ. ಹಳೆಯ ಫೋಟೊ ನೋಡಿದಾಗ ಒಂದು ಮಧುರವಾದ ಅನುಭೂತಿ ನಮಗಾಗುತ್ತದೆ. ಆ ಫೋಟೊದ ಜೊತೆಗೆ ತಳುಕು ಹಾಕಿಕೊಂಡಿರುವ ನೆನಪುಗಳು ಸುರುಳಿ ಬಿಚ್ಚಿಕೊಳ್ಳತೊಡಗುತ್ತವೆ. ಯಾವುದೋ ಒಂದು ನಗರವನ್ನು ಗುರುತಿಸಲು ಆ ನಗರದ ಒಂದು ಛಾಯಾಚಿತ್ರವೇ ಸಂಕೇತವಾಗುತ್ತದೆ, ಯಾವುದೋ ಒಂದು ಕರಾಳ ಘಟನೆಯನ್ನು ಬರೀ ಒಂದು ಫೊಟೊದ ಮೂಲಕ ತಲೆಮಾರುಗಳು ನೆನಪಿಟ್ಟುಕೊಳ್ಳುತ್ತವೆ. ಭೋಪಾಲ ಅನಿಲ ದುರಂತವಾಗಲಿ, ಗುಜರಾತಿನ ಹಿಂಸಾಚಾರವಾಗಲಿ,

ಫೋಟೊಗಳೆಂದರೆ ನೆನಪಿನ ಖಜಾನೆಯಲ್ಲಿರುವ ಅಮೂಲ್ಯ ಮುತ್ತುಗಳು Read More »

ಆಷಾಢ ಏಕಾದಶಿ ಮಹತ್ವ

ತಪ್ತ ಮುದ್ರಾಧಾರಣೆ, ಚಾತುರ್ಮಾಸ್ಯ ವ್ರತದ ಹಿನ್ನೆಲೆ ತಿಳಿಯಿರಿ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.ಏಕಾದಶಿ ದಿನದಂದು ವಿಷ್ಣುಭಕ್ತರ ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ವೈಷ್ಣವರು ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ. ಹಾಗೆಯೇ ಸಕಲ ಲೋಕ ಪರಿಪಾಲಕ ಶ್ರೀವಿಷ್ಣುವಿನ ಶಯನೋತ್ಸವ ಆರಂಭವಾಗುತ್ತದೆ.ಇಂದಿನಿಂದ ಶ್ರೀಹರಿ ನಾಲ್ಕು ತಿಂಗಳು ಕಾಲ ಯೋಗನಿದ್ರೆಯಲ್ಲಿ ತೊಡಗುವುದರಿಂದ ಈ ದಿನವನ್ನು ಶಯನಿ ಏಕಾದಶಿ ಎನ್ನಲಾಗುತ್ತದೆ. ಹಾಗಾಗಿಯೇ ಈ ಪ್ರಥಮ ಏಕಾದಶಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನದ ವೈಶಿಷ್ಟ್ಯಗಳನ್ನು ಅರಿಯೋಣ. ಬಲಿಷ್ಠನಾಗಿದ್ದ

ಆಷಾಢ ಏಕಾದಶಿ ಮಹತ್ವ Read More »

ನೊಂದು, ಬೆಂದು ಬದುಕು ನಡೆಸಿ ಬೆಳಕು ತೋರಿದ ದೀಪ

ಅಂದು ಕತ್ತಲೆಯ ಕಾಲ. ಸುತ್ತಲಿನ ಜನರ ಮನದಲ್ಲಿ ಮೌಡ್ಯತೆಯು ಮುಸುಕಿ, ಜಾತೀಯತೆ ತಾಂಡವವಾಡುತ್ತಿದ್ದ ಸಮಯ. ಕತ್ತಲೆಯ ಕೋಣೆಗೆ ಸಣ್ಣ ಹಣತೆಯಂತೆ, ಏಳು ಬಣ್ಣಗಳ ನಡುವಿನ ಶ್ವೇತ ಬಣ್ಣದಂತೆ, ಗ್ರಹಣ ಬಡಿದ ಮನಸ್ಸುಗಳಲ್ಲಿನ ಜಾತಕದ ಸೂತಕ ಕಳೆಯಲು ಭೂಮಿಗೆ ಬಂದ ಭಾರತದ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಅಂಬೇಡ್ಕರ್‌. ಬಿ.ಆರ್‌.ಅಂಬೇಡ್ಕರರ ಬಗ್ಗೆ ಓದುತ್ತಲೇ ಬೆಳೆದವರು ನಾವು. ಶ್ರಮ ಎಂದರೇನು? ಬದಲಾವಣೆ ಎಂದರೇನು? ಛಲ ಎಂದರೇನು? ಎಂಬುವುದಕ್ಕೆ ಉತ್ತರವೇ ಡಾ. ಬಿ. ಆರ್. ಅಂಬೇಡ್ಕರ್. ದಾರಿಯೇ ಕಾಣದ ದಿಕ್ಕಿನಲ್ಲಿ

ನೊಂದು, ಬೆಂದು ಬದುಕು ನಡೆಸಿ ಬೆಳಕು ತೋರಿದ ದೀಪ Read More »

ಜನಪ್ರತಿನಿಧಿಗಳಲ್ಲಿ ಇರಬೇಕು ಭಾರತೀಯತೆ

ಭಾರತದಲ್ಲಿ ಈಗ ಚುನಾವಣೆಯ ಪರ್ವಕಾಲ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ ಕಡೆ ಚುನಾವಣೆಯದ್ದೇ ಚರ್ಚೆ. ಇಡೀ ವಿಶ್ವ ಭಾರತದ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಚುನಾವಣೆಯ ಎಲ್ಲ ತಯಾರಿ ಪ್ರಕ್ರಿಯೆಗಳು ನಡೆದಿವೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ರಾಜಕೀಯ ರಂಗದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿಯಿಂದ ಹಿಡಿದು ನಿನ್ನೆ ಮೊನ್ನೆ ರಾಜಕೀಯಕ್ಕೆ ಸೇರಿಕೊಂಡ ಕಾರ್ಯಕರ್ತನವರೆಗೆ ಎಲ್ಲರೂ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಗೆಲುವಿಗೆ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಸ್ವಾತಂತ್ರ್ಯ ಪಡೆದು 75 ವರ್ಷವಾದರೂ ಇನ್ನೂ ನಮ್ಮಲ್ಲಿ

ಜನಪ್ರತಿನಿಧಿಗಳಲ್ಲಿ ಇರಬೇಕು ಭಾರತೀಯತೆ Read More »

ಕಣಿವೆಯ ಹಾಡು – ಒಂದು ಅದ್ಭುತ ಭಾವತೀವ್ರತೆಯ ನಾಟಕ

ಇಬ್ಬರೇ ಕಲಾವಿದರು ಎರಡು ಗಂಟೆ ವೇದಿಕೆಯನ್ನು ಆವರಿಸಿದ ರೀತಿಯೇ ಅದ್ಭುತ ಖ್ಯಾತ ನಟ, ನಿರ್ದೇಶಕ ಶಂಕರನಾಗ್ ಒಮ್ಮೆ ಹೇಳಿದ ಮಾತು – ಸಿನೆಮಾಕ್ಕೆ ಇರುವ ಎಲ್ಲಾ ಸಾಧ್ಯತೆಗಳೂ ನಾಟಕಕ್ಕಿವೆ. ಆದರೆ ನಾಟಕಕ್ಕೆ ಇರುವ ಸಾಧ್ಯತೆಗಳು ಸಿನೆಮಾಕ್ಕೆ ಇಲ್ಲ. ಈ ಮಾತುಗಳು ನಮಗೆ ಕನ್ವಿನ್ಸ್ ಆಗಬೇಕಾದರೆ ‘ಕಣಿವೆಯ ಹಾಡು’ ನಾಟಕವನ್ನು ಮಿಸ್ ಮಾಡದೆ ನೋಡಬೇಕು. ಕಣಿವೆಯ ಹಾಡು – ಒಂದು ಅದ್ಭುತ ಭಾವತೀವ್ರತೆಯ ನಾಟಕಮೈಸೂರಿನ ನಟನ ರಂಗ ಸಂಸ್ಥೆಯು ಪ್ರಸ್ತುತ ಪಡಿಸಿದ ಈ ಅದ್ಭುತ ಭಾವತೀವ್ರತೆಯ ನಾಟಕವು ವೇದಿಕೆಯೇರಿದ್ದು

ಕಣಿವೆಯ ಹಾಡು – ಒಂದು ಅದ್ಭುತ ಭಾವತೀವ್ರತೆಯ ನಾಟಕ Read More »

ಮಾನವೀಯತೆಯ ಒರತೆ – ‘ನಾಯಿಮರಿ’ ನಾಟಕ

ಕಾರ್ಕಳದ ರಂಗ ಸಂಸ್ಕೃತಿ ಸಂಸ್ಥೆಯ ದಶಮಾನೋತ್ಸವದ ನಾಟಕ ಹಬ್ಬ ಸಹಜ ಪ್ರತಿಭೆಯಿಂದ ಗೆದ್ದ ಆಳ್ವಾಸ್ ರಂಗ ಶಿಕ್ಷಣದ ವಿದ್ಯಾರ್ಥಿಗಳು ಕನ್ನಡದ ಖ್ಯಾತ ಲೇಖಕಿಯಾದ ವೈದೇಹಿ ಅವರು ಬರೆದ ‘ನಾಯಿ ಮರಿ ‘ ನಾಟಕವು ಮಾರ್ಚ್ 21ರಂದು ಕಾರ್ಕಳದ ರಂಗ ಸಂಸ್ಕೃತಿ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ನಡೆದ 4 ದಿನಗಳ ನಾಟಕೋತ್ಸವದ ಮೊದಲ ದಿನ ವೇದಿಕೆ ಏರಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳು ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರ

ಮಾನವೀಯತೆಯ ಒರತೆ – ‘ನಾಯಿಮರಿ’ ನಾಟಕ Read More »

ವಾಲ್ಮೀಕಿ ಮಹರ್ಷಿಯಾದ ಕಥೆ

ಇಂದು ವಾಲ್ಮೀಕಿ ಜಯಂತಿ ಮಹರ್ಷಿ ವಾಲ್ಮೀಕಿ ಸನಾತನ ಧರ್ಮದ ಪ್ರಮುಖ ಋಷಿಗಳಲ್ಲಿ ಒಬ್ಬರು. ರಾಮನಿಗೆ ಸಮಕಾಲೀನರೆಂದು ಹೇಳಲಾಗಿದೆ. ರಾಮನನ್ನು ಹದಿನಾಲ್ಕು ವರ್ಷಗಳ ವನವಾಸದ ಸಮಯದಲ್ಲಿ ಭೇಟಿಯಾದರು ಅಲ್ಲದೆ ರಾಮನಿಂದ ಪರಿತ್ಯಕ್ತಳಾದ ಸೀತೆಗೆ ಆಶ್ರಯ ನೀಡಿದವರು. ಹೀಗೆ ಅನೇಕ ಕಾರಣಗಳಿಂದಾಗಿ ವಾಲ್ಮೀಕಿ ಹೆಸರುವಾಸಿಯಾಗಿದ್ದಾರೆ. ಇಂದು ಅವರ ಜನ್ಮದಿನ. ಅಶ್ವಿನ್ ತಿಂಗಳ ಹುಣ್ಣಿಮೆಯ ದಿನ ಮಹರ್ಷಿ ವಾಲ್ಮೀಕಿಯ ಜನ್ಮದಿನವೆಂದು ಆಚರಿಸಲಾಗುತ್ತಿದೆ. ಈ ಬಾರಿ ಈ ದಿನವು ಅಕ್ಟೋಬರ್ 28 ರಂದು ಬಂದಿದೆ. ಹಿಂದೂ ಧರ್ಮದ ಮುಖ್ಯ ಮಹಾಕಾವ್ಯವಾದ ರಾಮಾಯಣವನ್ನು ಅವರು

ವಾಲ್ಮೀಕಿ ಮಹರ್ಷಿಯಾದ ಕಥೆ Read More »

error: Content is protected !!
Scroll to Top