• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಆರೋಗ್ಯಧಾರಾ

newskarkala, dr. harsha kamath, health, health tips, hebri, doctor

ರಕ್ತ ಚಂದನ

ರಕ್ತ ಚಂದನ ಅಥವಾ ಕೆಂಪು ಚಂದನ ಆಯುರ್ವೇದದಲ್ಲಿ ಬಹಳ ಪವಿತ್ರ ಹಾಗೂ ಔಷಧೀಯ ಮರ. ಇದರ ವೈಜ್ಞಾನಿಕ ಹೆಸರು Pterocarpus santalinus. ಬಿಳಿ ಚಂದನಕ್ಕಿಂತ ಇದು ಬೇರೆ. ಬಿಳಿ ಚಂದನಕ್ಕೆ ಸುಗಂಧ ಇದೆ, ಆದರೆ ರಕ್ತ ಚಂದನಕ್ಕೆ ಪರಿಮಳ ಇಲ್ಲ. ರಕ್ತ ಚಂದನದ ಗುಣಗಳುರಸ – ತಿಕ್ತ – ಕಹಿ, ಕಷಾಯ – ಒಗರುಗುಣ – ಲಘು – ಹಗುರ, ರೂಕ್ಷ – ಒಣಗಿಸುವಪಿತ್ತ ಮತ್ತು ಕಫ ಶಾಮಕ. ವಾತವನ್ನು ಸ್ವಲ್ಪ ಹೆಚ್ಚಿಸಬಹುದು. ಉಪಯೋಗಮೊಡವೆ, ಕಲೆ, ಬಿಸಿಲಿನಿಂದ […]

ರಕ್ತ ಚಂದನ Read More »

ಮಳೆಗಾಲದಲ್ಲಿ ತ್ವಚೆಯ ಆರೈಕೆ

ಪ್ರತಿ ಋತುವಿನಲ್ಲಿ ಅದರದ್ದೇ ಆದ ಖುಷಿಯ ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾಡುವುದು. ಇದರ ಬಗ್ಗೆ ಕಾಳಜಿ ಹೊಂದಿದರೆ ಅನೇಕ ಸಮಸ್ಯೆಗಳಿಂದ ದೂರವಿರಬಹುದು. ಮಳೆಗಾಲದಲ್ಲಿ ಶೀತ ಕೆಮ್ಮಿನ ಜೊತೆ ತ್ವಚೆಯ ಆರೈಕೆ ಬಹಳ ಮುಖ್ಯ ಇದರ ಬಗ್ಗೆ ತಿಳಿದುಕೊಳ್ಳೋಣ. ಮಳೆಗಾಲದಲ್ಲಿ ವಾತ ಹಾಗೂ ಪಿತ್ತದೋಷವೂ ಜಾಸ್ತಿ ಇರುವುದರಿಂದ ತ್ವಚೆಯು ರೂಕ್ಷವಾಗುವುದು. ತುರಿಕೆ, ಮೊಡವೆ, ಫಂಗಲ್ ಇನ್ಫೆಕ್ಷನ್ ಆಗಬಹುದು. ಈ ಕಾಲದಲ್ಲಿ ಜೀರ್ಣ ಶಕ್ತಿಯು ಕಮ್ಮಿ ಇರುರುವುದರಿಂದ ತ್ವಚೆಯು ಕಳೆರಹಿತವಾಗುತ್ತದೆ. ಆದ್ದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಹಾಗೂ

ಮಳೆಗಾಲದಲ್ಲಿ ತ್ವಚೆಯ ಆರೈಕೆ Read More »

ರಕ್ತದೊತ್ತಡ

ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡವನ್ನು ನೇರವಾಗಿ ಹೆಸರಿಸಿಲ್ಲ. ಆದರೆ, ಇದನ್ನು ರಕ್ತಗತ ವಾತ, ಶೋಣಿತ ದುಷ್ಟಿ ಅಥವಾ ವ್ಯಾನ ವಾತ ವೈಶಮ್ಯ ಎಂದು ಅರ್ಥೈಸಬಹುದು. ಹೃದಯದಿಂದ ರಕ್ತವನ್ನು ಪಂಪ್ ಮಾಡುವಾಗ ಧಮನಿಗಳ ಗೋಡೆಗಳ ಮೇಲೆ ಬೀಳುವ ಒತ್ತಡ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಎನ್ನುತ್ತೇವೆ. ಆಧುನಿಕ ಮಾಪನದಲ್ಲಿ 140/90 mmHg ಗಿಂತ ಹೆಚ್ಚಿದ್ದರೆ ಅಧಿಕ BP ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದದ ಪ್ರಕಾರ ಕಾರಣಗಳು*ರೋಗವು ದೋಷಗಳ ಅಸಮತೋಲನದಿಂದ ಬರುತ್ತದೆ. ಅಧಿಕ BP ಮುಖ್ಯವಾಗಿ ವಾತ ಮತ್ತು ಪಿತ್ತ ದೋಷಗಳ ಪ್ರಕೋಪದಿಂದ

ರಕ್ತದೊತ್ತಡ Read More »

ಈರುಳ್ಳಿಯ ಆರೋಗ್ಯ ಲಾಭಗಳು

ಅಡುಗೆಯಲ್ಲಿ ಬಳಸುವಂತಹ ಈರುಳ್ಳಿ ಬಾಯಿ ರುಚಿಯನ್ನು ಮಾತ್ರ ಹೆಚ್ಚಿಸದೆ ಕೂದಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದಷ್ಟೇ ಅಲ್ಲದೆ ಈರುಳ್ಳಿ ಸೇವಿಸುವುದರಿಂದ ತ್ವಚೆಯ ಸಮಸ್ಯೆ ದೂರವಾಗುತ್ತದೆ ಮತ್ತು ನಮ್ಮ ಬುದ್ಧಿ ಶಕ್ತಿಯು ಕೂಡ ಹೆಚ್ಚುತ್ತದೆ. ಸಂಸ್ಕೃತದಲ್ಲಿ ಇದಕ್ಕೆ ಪಲಾಂಡು ಎಂದು ಹೆಸರು.ಭಾರತದಲ್ಲಿ ಎಲ್ಲೆಡೆ ದಿನನಿತ್ಯ ಅಡುಗೆಯಲ್ಲಿ ಬಳಸುವಂತಹ ತರಕಾರಿ ಇದು. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಸೇವಿಸಬಹುದು. ಈರುಳ್ಳಿಯ ಗುಣಗಳುರುಚಿಯಲ್ಲಿ ಮಧುರ ಹಾಗೂ ಖಾರವಿರುವುದು. ತೀಕ್ಷ್ಣ, ಗುರು ಹಾಗೂ ಜಿಡ್ಡಿನಂಶದಿಂದ ಹೊಂದಿದೆ. ಸ್ವಭಾವದಲ್ಲಿ ಇದು ಅನುಷ್ಣ ಅಂದರೆ

ಈರುಳ್ಳಿಯ ಆರೋಗ್ಯ ಲಾಭಗಳು Read More »

ಪಾಲಕ್ ಸೊಪ್ಪಿನ ಆರೋಗ್ಯ ಲಾಭಗಳು

ಆಯುರ್ವೇದದಲ್ಲಿ ಪಾಲಕ್‌ ಸೊಪ್ಪಿನ ಹಲವಾರು ಆರೋಗ್ಯ ಲಾಭಗಳನ್ನು ತಿಳಿಸಲಾಗಿದೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಪಾಲಕ್‌ ವಿಟಮಿನ್ ಎ.ಸಿ ಮತ್ತು ಕೆ ಮತ್ತು ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಪಾಲಕ್‌ನ ಆಯುರ್ವೇದ ಗುಣಲಕ್ಷಣಗಳುರುಚಿಯಲ್ಲಿ ಸಿಹಿ ಹಾಗೂ ಕಹಿಯಳ್ಳದ್ದಾಗಿದೆ. ರೂಕ್ಷ ಗುಣ ಹೊಂದಿದೆ. ಸ್ವಭಾವದಲ್ಲಿ ಶೀತವೀರ್ಯ ಹೊಂದಿದೆ. ಪಿತ್ತವನ್ನು ಸಮತೋಲನಗೊಳಿಸುತ್ತದೆ. ವಾತ ಹಾಗೂ ಕಫವನ್ನು ವೃದ್ಧಿಸುತ್ತದೆ. ಬೇಗ ಜೀರ್ಣವಾಗುವುದಿಲ್ಲ.ತಂಪಾಗಿಸುತ್ತದೆ, ಪೋಷಣೆ ನೀಡುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ. ಪ್ರಯೋಜನಗಳುಜೀರ್ಣಕಾರಿ – ಪಾಲಕ್ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ

ಪಾಲಕ್ ಸೊಪ್ಪಿನ ಆರೋಗ್ಯ ಲಾಭಗಳು Read More »

ಇಸಬಗೋಲ್‌ನ ಆರೋಗ್ಯ ಲಾಭಗಳು

ಮಲಬದ್ಧತೆಗೆ ಉಪಯುಕ್ತವಾದ ಔಷಧಿ ಸಸ್ಯ ಇಸಬುಗೋಲ್. ಇದರ ಗುಣ ಹಾಗೂ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಿರುವುದರಿಂದ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ರುಚಿಯಲ್ಲಿ ಸಿಹಿ ಇದ್ದು ಸ್ನಿಘ್ಧ ಗುಣ ಹೊಂದಿದೆ. ಇದು ಜೀರ್ಣವಾಗಲು ಸಮಯ ಹಿಡಿಯುತ್ತದೆ. ಶೀತ ವೀರ್ಯ ಸ್ವಭಾವ ಹೊಂದಿದೆ. ವಾತ ಹಾಗೂ ಪಿತ್ತವನ್ನು ಶಮನಗೊಳಿಸುತ್ತದೆ. ಇದರ ಬೀಜ ಹಾಗೂ ಹೊಟ್ಟು ಉಪಯೋಗಿಸುತ್ತಾರೆ. ಇಸಬಗೋಲಿನ ಆರೋಗ್ಯ ಲಾಭಗಳುಇದನ್ನು ಮಲಬದ್ಧತೆ, ಮೂತ್ರ ಉರಿ, ಪೈಲ್ಸ್, ಇರಿಟೇಬಲ್ ಬವಲ್ ಸಿಂಡ್ರೋಮ್, ಅಜೀರ್ಣ. ಆಸಿಡಿಟಿ, ಕರುಳಿನ

ಇಸಬಗೋಲ್‌ನ ಆರೋಗ್ಯ ಲಾಭಗಳು Read More »

ಎಳ್ಳು – ಎಳ್ಳೆಣ್ಣೆಯ ಉಪಯೋಗಗಳು

ಎಳ್ಳಿಗೆ ಸಂಸ್ಕೃತದಲ್ಲಿ ತಿಲ ಎಂದು ಹೆಸರು. ಚಳಿಗಾಲದಲ್ಲಿ ಎಳ್ಳನ್ನು ಉಪಯೋಗಿಸುವುದು ಲಾಭದಾಯಕ. ಆಯುರ್ವೇದದ ಪ್ರಕಾರ ತಿಲತೈಲ ಸರ್ವ ಶ್ರೇಷ್ಠ ಎಂದು ಹೇಳಲಾಗಿದೆ. ಯಾಕೆಂದರೆ ಸ್ಥೂಲಕಾಯದ ವ್ಯಕ್ತಿಯನ್ನು ತೆಳು ಕಾಯ ಮಾಡುವ ಹಾಗೂ ತೆಳುಕಾಯದ ವ್ಯಕ್ತಿಯನ್ನು ಸ್ಥೂಲ ಕಾಯ ಮಾಡುವ ಗುಣ ಈ ಎಳ್ಳಿನಲ್ಲಿದೆ. ಆಯುರ್ವೇದದಲ್ಲಿ ತೊಂಭತ್ತು ಪ್ರತಿಶತ ಔಷಧೀಯ ಎಣ್ಣೆಯ ತಯಾರಿಕೆಯಲ್ಲಿ ತಿಲ ತೈಲವನ್ನು ಮುಖ್ಯ ದ್ರವ್ಯವಾಗಿ ಬಳಸುತ್ತಾರೆ. ಉದಾಹರಣೆಗೆ ಕ್ಷೀರಬಲಾ ತೈಲ, ಧನ್ವಂತರಿ ತೈಲ, ಮಹಾ ಮಾಷತೈಲ, ಗಂಧ ತೈಲ. ಇದರಲ್ಲಿ ತಿಲ ತೈಲವನ್ನು ಮುಖ್ಯ

ಎಳ್ಳು – ಎಳ್ಳೆಣ್ಣೆಯ ಉಪಯೋಗಗಳು Read More »

ಶೂಲ ರೋಗ

ಯಾವುದೇ ತರಹದ ನೋವನ್ನು ಶೂಲ ಎಂದು ಕರೆಯುತ್ತಾರೆ. ಅದು ತಲೆನೋವು ಇರಬಹುದು, ಕಿವಿ ನೋವು, ಕಣ್ಣಿನ ನೋವು, ಹಲ್ಲು ನೋವು ಹೃದಯದಲ್ಲಿ ಆಗಿರುವ ಬೇನೆ, ಕುತ್ತಿಗೆ ನೋವು, ಕೈ ಕಾಲು ನೋವು, ಉದರ ನೋವು ಯಾವುದೇ ತರಹದ ನೋವಿದ್ದಲ್ಲಿ ಅದನ್ನು ಶೂಲ ರೋಗ ಎಂದು ಆಯುರ್ವೇದ ಪರಿಗಣಿಸುತ್ತದೆ.ನೋವು ಬೇರೆ ರೋಗಗಳ ಲಕ್ಷಣವಾಗಿ ಕಂಡು ಬರಬಹುದು ಅಥವಾ ಯಾವುದೆ ಕಾರಣವಿಲ್ಲದ ನೋವಿರಬಹುದು. ಶೂಲ ರೋಗಕ್ಕೆ ಅನೇಕ ಕಾರಣಗಳು ಇವೆ. ಕಾರಣವನ್ನು ತಿಳಿದು ಅದರ ಚಿಕಿತ್ಸೆ ಮಾಡುವುದು ಸೂಕ್ತ. ಶೂಲ

ಶೂಲ ರೋಗ Read More »

ಆರೋಗ್ಯವಾಗಿರುವುದು ಕಷ್ಟವೇನಲ್ಲ, ನಾವು ಪ್ರಯತ್ನಿಸಬೇಕಷ್ಟೇ

ಆರೋಗ್ಯವೆಂದರೆ ದೈಹಿಕ ಮಾನಸಿಕ ಭಾವನಾತ್ಮಕ ಸಾಮಾಜಿಕವಾಗಿ ಸದೃಢವಾಗಿರುವುದು ಎಂದರ್ಥ. ದೈಹಿಕ ಆರೋಗ್ಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ ಈ ಕೆಳಗೆ ತಿಳಿಸಿರುವಂತೆ ಇತರ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಒಳ್ಳೆಯದು.ಯಾವುದೇ ರೋಗ ದೈಹಿಕವಾಗಿ ಕಂಡರೂ ಅದರ ಹಿಂದೆ ಇತರ ಕಾರಣಗಳಿರುತ್ತದೆ. ಎಲ್ಲದರ ಪರಿಣಾಮ ಮಾತ್ರ ಶರೀರದ ಮೇಲೆ ಕಾಣುವುದರಿಂದ. ನಾವು ದೈಹಿಕ ಆರೋಗ್ಯವೇ ಮುಖ್ಯವೆಂದು ಎನಿಸಿದ್ದೇವೆ. ಆರೋಗ್ಯದಿಂದಿರಲು ಹೇಗೆ ತಯಾರಾಗಬೇಕೆಂದು ತಿಳಿದುಕೊಳ್ಳೋಣ. ಹೀಗಿವೆ ಕೆಲವು ಸಲಹೆಗಳು ದಿನಾಲು ಏಳುವಾಗ ಉಲ್ಲಾಸದಿಂದಿರಿಯಾರನ್ನೋ ಬೈಯುತ್ತಾ , ಯಾಕೆ ಬೆಳಕಾಯಿತೆಂದು, ಎದ್ದು ಕೆಲಸ

ಆರೋಗ್ಯವಾಗಿರುವುದು ಕಷ್ಟವೇನಲ್ಲ, ನಾವು ಪ್ರಯತ್ನಿಸಬೇಕಷ್ಟೇ Read More »

ಪಾದಾಭ್ಯಂಗದ ಪ್ರಯೋಜನಗಳು

ಆಯುರ್ವೇದ ಪಂಚಕರ್ಮ ಚಿಕಿತ್ಸಾ ವಿಧಾನದಲ್ಲಿ ಅಭ್ಯಂಗವನ್ನು ಶಾರೀರಿಕ ಶೋಧನಾ ಕ್ರಮವಾಗಿ ಬಳಸಲಾಗುತ್ತೆ. ಅದರಲ್ಲೂ ಅಭ್ಯಂಗದಿಂದ ದೇಹ ಮತ್ತು ಮನಸ್ಸು ವಿಶ್ರಾಂತಗೊಳ್ಳುತ್ತೆ. ಆಯುರ್ವೇದದಲ್ಲಿ ದಿನಾಲೂ ಅಭ್ಯಂಗ ಮಾಡಲು ಸೂಚಿಸಿದ್ದಾರೆ. ಆದರೆ ದಿನನಿತ್ಯ ಅಭ್ಯಂಗ ಮಾಡಲು ಸಮಯದ ಅಭಾವವಿರುವುದರಿಂದ ಕಷ್ಟ. ಆದ್ದರಿಂದ ಅಂತವರಿಗೆ ಕನಿಷ್ಠ ಪಕ್ಷ ನೆತ್ತಿ, ಕಿವಿ ಹಾಗೂ ಪಾದಗಳಿಗೆ ಅಭ್ಯಂಗ ಮಾಡಿದರೆ ಒಳ್ಳೆಯದು. ಪಾದಗಳಿಗೆ ಮಾತ್ರವಲ್ಲದೆ ಇಡೀ ದೇಹಕ್ಕೆ ಉಪಯೋಗವಾಗುವಂತಹ ಪಾದಾಭ್ಯಂಗದ ಬಗ್ಗೆ ತಿಳಿದುಕೊಳ್ಳೋಣ. ಪಾದಗಳಿಗೆ ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದರಿಂದ ಪಾದದ ರೂಕ್ಷತೆ, ಪಾದ ಒಡೆಯುವುದು

ಪಾದಾಭ್ಯಂಗದ ಪ್ರಯೋಜನಗಳು Read More »

error: Content is protected !!
Scroll to Top