ಬಜಗೋಳಿ ಅನಿಮಲ್ ಕೇರ್ ಟ್ರಸ್ಟ್‌ ಗೋಶಾಲೆಯಲ್ಲಿ ಗೋವುಗಳ ಕಳವು ಖಂಡನೀಯ

ಕಾರ್ಕಳ : ಬಜಗೋಳಿ ಅಗ್ನಿಲಾ ಅನಿಮಲ್ ಕೇರ್ ಟ್ರಸ್ಟ್‌ನ ಗೋಶಾಲೆಯಲ್ಲಿ ಚಿಕಿತ್ಸೆಗಾಗಿ ಕಟ್ಟಿದ್ದ ಅನಾರೋಗ್ಯ ಪೀಡಿತ ಗೋವುಗಳ ಕಳ್ಳತನವನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕಾರ್ಕಳದ ಹಲವಾರು ಭಾಗಗಳಲ್ಲಿ ಗೋ ಕಳ್ಳರ ಅಟ್ಟಹಾಸ ದಿನೆ ದಿನೆ ಮಿತಿ ಮೀರುತ್ತಿದೆ. ಇಂತಹ ಮತಾಂಧ ಗೋ ಕಳ್ಳರಿಗೆ ಕಾನೂನಿನ ಭಯವೆ ಇಲ್ಲದಂತಾಗಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳರ ದೊಡ್ಡ ಮಾಫಿಯಾವೇ ಇದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗೋ ಕಳ್ಳರ ಮೂಲ ಹುಡುಕಿ ಎರಡು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿ ಖಾನೆ ಹಾಗು ಗೋ ಕಳ್ಳರನ್ನು ಮಟ್ಟ ಹಾಕದಿದ್ದಲ್ಲಿ ಹಿಂಜಾವೇ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಲಿದೆ ಎಂದು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದೆ.



































































































error: Content is protected !!
Scroll to Top