ಕಾರ್ಕಳ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮನೆಮನೆ ಭೇಟಿ, ಕರಪತ್ರ ಹಂಚಿಕೆ, ಮತದಾರರನ್ನು ಭೇಟಿಯಾಗುವ ಕಾರ್ಯಕ್ರಮಕ್ಕೆ ಕಾರ್ಕಳ ನಗರ ವಾರ್ಡ್ 13 ಕಾಳಿಕಾಂಬಾ ದೇವಸ್ಥಾನದ ಪರಿಸರದಲ್ಲಿ ಚಾಲನೆಯನ್ನು ನೀಡಲಾಯಿತು. ವಾರ್ಡ್ ಅಧ್ಯಕ್ಷ ಹರೀಶ್ ದೇವಾಡಿಗ, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್, ಸಂತೋಷ ರಾವ್, ದಯಾನಂದ ದೇವಾಡಿಗ, ಬಾಲಾಜಿ ರಾವ್, ರಮೇಶ್ ಪೂಜಾರಿ, ದಿನೇಶ್ ಆಚಾರ್ಯ, ಸುಧೀರ, ಸ್ಫೂರ್ತಿ, ಉಮೇಶ್ ಕೋಟ್ಯಾನ್, ದಿನೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಮತ್ತು ಹೆಬ್ರಿ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಮತದಾರರ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.























