ಕಾರ್ಕಳ : ಸಾಯಿಬಾಬಾ ಮಂದಿರಕ್ಕೆ ಸಾಗುವ ರಸ್ತೆ ಜರಿದು ಸಂಚಾರಕ್ಕೆ ಅಡಚಣೆ

ಕಾರ್ಕಳ : ಪುರಸಭಾ ವ್ಯಾಪ್ತಿಯಲ್ಲಿ ಎನ್‌ಆರ್‌ ರಸ್ತೆಯಿಂದ ಸಾಯಿಬಾಬಾ ಮಂದಿರಕ್ಕೆ ಸಾಗುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ರಸ್ತೆಯ ಒಂದು ಬದಿ ಜರಿದು ಸಂಚಾರಕ್ಕೆ ಅಡಚಣೆಯಾಗಿದೆ.

ಕಳೆದ ಮಳೆಗಾಲದ ಸಂದರ್ಭ ಇಲ್ಲಿನ ರಸ್ತೆ ಅಗಲೀಕರಣ ಮಾಡುವ ವೇಳೆ ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಲಾಗಿದ್ದು, ಬದಿಯ ಗದ್ದೆಗೆ ಸಾಗಲು ಕಿರುದಾರಿಯನ್ನು ಬಿಡಲಾಗಿತ್ತು. ಈ ಬಾರಿಯ ಮಳೆಗಾಲಕ್ಕೆ ರಸ್ತೆ ಬದಿ ಜರಿದಿದ್ದು ಹೊಂಡದಂತಾಗಿದೆ. ಇದನ್ನು ತಕ್ಷಣವೇ ಸರಿಪಡಿಸದೆ ಇದ್ದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಅಪಾಯ ಸಂಭವಿಸುವ ಸಾಧ್ಯತೆಯಿದೆ.

ಪ್ರತಿನಿತ್ಯ ಈ ರಸ್ತೆಯಲ್ಲಿ ಶಿರಡಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಸಾಯಿ ಬಾಬಾ ಮಂದಿರ ಹಾಗೂ ಜ್ಞಾನ ಮಂದಿರಕ್ಕೆ ಭೇಟಿ ನೀಡುವವರು ಹಾಗೂ ಸ್ಥಳೀಯರು ಸೇರಿದಂತೆ ನೂರಾರು ಮಂದಿ ಪ್ರಯಾಣಿಸುತ್ತಾರೆ. ರಸ್ತೆಯ ಬದಿ ಜರಿದ ಪರಿಣಾಮ ಎರಡು ಕಡೆಯಿಂದ ವಾಹನಗಳು ಎದುರಾದಾಗ ಚಾಲಕರು ತ್ರಾಸ ಪಡುವಂತಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.







































































error: Content is protected !!
Scroll to Top