ಶ್ರೀನಗರ: 2021 ರ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಸುಮಾರು 66 ಉಗ್ರರು ಗಡಿ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ ಎಂದು ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಪುಲ್ವಾಮಾದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹೊರಗಿನಿಂದ ಬಂದ ಕಾರ್ಮಿಕರು ಉಗ್ರರಿಂದ ಹತ್ಯೆಗೀಡಾಗಿದ್ದು, ಈ ಕುಕೃತ್ಯದಲ್ಲಿ ಭಾಗಿಯಾದ ಉಗ್ರರನ್ನು ಗುರುತಿಸಲಾಗಿದ್ದು ಸದ್ಯದಲ್ಲಿಯೇ ಹತ್ಯೆ ಮಾಡುತ್ತೇವೆ. ಶೋಪಿಯಾನ್ನ ದೂರದ ಹಳ್ಳಿಯೊಂದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ದಾಳಿ ನಡೆದಿದೆ. ಉಗ್ರರ ವಿರುದ್ಧ ಕಾದಾಟದಲ್ಲಿ ನಾವು ಜಯ ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದರಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿದೆ. ಶ್ರೀನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಉಮರ್ ತೇಲಿ ಮತ್ತು ಸಫತ್ ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಇಂದು ನಸುಕಿನ ಜಾವ ಜಮ್ಮು-ಕಾಶ್ಮೀರದ ಆವಂತಿಪೊರಾದ ಟ್ರಾಲ್ ಪ್ರದೇಶದಲ್ಲಿ ಎನ್ ಕೌಂಟರ್ ಮಾಡಲಾಗಿದೆ. ನಾಗರಿಕ ಹತ್ಯೆಗಳು ಮತ್ತು ಇತರ ಹಲವಾರು ದುರ್ಘಟನೆಗಳನ್ನು ನಡೆಸಿದ ನಂತರ ಅವರು ಟ್ರಾಲ್ಗೆ ಪರಾರಿಯಾಗಿದ್ದರು. ಇಂದು ಅವರನ್ನು ಪತ್ತೆಹಚ್ಚಿ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.