ಬೆಳ್ತಂಗಡಿ: ಮನೆಯ ಮಾಲೀಕರನ್ನು ಹಗ್ಗದಿಂದ ಕಟ್ಟಿ, ಅವರ ಪತ್ನಿಗೆ ಚಾಕುವಿನಿಂಡ ಹಲ್ಲೆ ನಡೆಸಿದ ದರೋಡೆಕೋರರು ಅಪಾರ ಪ್ರಮಾಣದ ನಗ, ನಗದನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪ್ರಸಿದ್ದ ಕ್ಷೇತ್ರ ಸೌತಡ್ಕದಲ್ಲಿ ನಡೆದಿದೆ.
ಸೌತಡ್ಕದ ಶ್ರೀ ಮಹಾಗಣಪತಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲೇ ಇರುವ ನೂಜಿ ತುಕ್ರಪ್ಪ ಶೆಟ್ಟಿ ಎಂಬುವವರ ಮನೆಗೆ ಸುಮಾರು ಒಂಬತ್ತು ಮಂದಿ ದರೋಡೆಕೋರರ ತಂಡ ನುಗ್ಗಿ ಚಿನ್ನಾಭರಣ, 1.5 ಲಕ್ಷ ಹಣವನ್ನು ದೋಚಿದೆ.




























