ಈದು ಗ್ರಾಮದ ಅಡಿಕೆ ತೋಟದಲ್ಲಿ ಕೊಳೆತ ಶವ ಪತ್ತೆ: ನಾಪತ್ತೆಯಾಗಿದ್ದ ವ್ಯಕ್ತಿ ಎಂದು ಶಂಕೆ

ಕಾರ್ಕಳ: ತಾಲೂಕಿನ ಈದು ಗ್ರಾಮದ ಅಡಿಕೆ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಇದು ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ನಾರಾವಿ ಮೂಲದ ಪ್ರಭಾಕರ ಶೆಟ್ಟಿ ಅವರದ್ದಿರಬಹುದು ಎಂದು ಶಂಕಿಸಲಾಗಿದೆ.
​ಈದು ಗ್ರಾಮದ ಹುದಂಗಜೆ, ಶಿವಗಂಗಾ ನಿಲಯದ ನಿವಾಸಿ ವಿಘ್ನೇಶ್ವರ ಭಟ್ (60) ಎಂಬುವವರ ಅಡಿಕೆ ತೋಟದಲ್ಲಿ ಭಾನುವಾರ (ಜು. 12) ಶವ ಪತ್ತೆಯಾಗಿದೆ. ಬೆಳಿಗ್ಗೆ 11:35ರ ಸುಮಾರಿಗೆ ನೆರೆಮನೆಯ ಸುಬ್ರಮಣ್ಯ ಎಂಬುವವರು ತೋಟದ ಬಳಿ ತೀವ್ರ ದುರ್ವಾಸನೆ ಬರುತ್ತಿರುವ ಬಗ್ಗೆ ವಿಘ್ನೇಶ್ವರ ಭಟ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ತಕ್ಷಣವೇ ಇಬ್ಬರೂ ಸೇರಿ ತೋಟದಲ್ಲಿ ಹುಡುಕಾಟ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದೆ.
ಕಾಡುಪ್ರಾಣಿಗಳಿಂದ ವಿರೂಪ:
ಮೃತದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಮೈ ಮೇಲಿದ್ದ ಬಟ್ಟೆಗಳನ್ನು ಕಾಡುಪ್ರಾಣಿಗಳು ಎಳೆದಾಡಿವೆ. ಅಲ್ಲದೆ, ದೇಹದ ಕೆಲವು ಭಾಗಗಳನ್ನು ಕಾಡುಪ್ರಾಣಿಗಳು ತಿಂದಿರುವ ಕುರುಹುಗಳು ಸ್ಥಳದಲ್ಲಿ ಕಂಡುಬಂದಿವೆ. ಶವದ ಹತ್ತಿರ ಛತ್ರಿಯೊಂದು ಪತ್ತೆಯಾಗಿದೆ.
ದಾರಿ ತಪ್ಪಿ ಬಿದ್ದಿರುವ ಸಾಧ್ಯತೆ:
ನಾರಾವಿಯಿಂದ ಅಡುಗೆ ಕೆಲಸಕ್ಕೆಂದು ಬಂದಿದ್ದ ಪ್ರಭಾಕರ ಶೆಟ್ಟಿ ಎಂಬುವವರು ಕಳೆದ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದರು. ಮೃತದೇಹವು ಅವರದ್ದೇ ಆಗಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಅವರು ಯಾವುದೋ ಕಾರಣಕ್ಕೆ ಅಥವಾ ದಾರಿ ತಪ್ಪಿ ತೋಟದ ಕಡೆ ಬಂದು ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ.
ಪ್ರಕರಣ ದಾಖಲು:
ಈ ಸಂಬಂಧ ತೋಟದ ಮಾಲೀಕ ವಿಘ್ನೇಶ್ವರ ಭಟ್ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ಎಸ್ (BNSS) ಕಲಂ 194ರ ಅಡಿ ಅಸ್ವಾಭಾವಿಕ ಸಾವು (ಯು.ಡಿ.ಆರ್ ಕ್ರಮಾಂಕ: 35/2026) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ















































































































































error: Content is protected !!
Scroll to Top