ವರ್ಗಾವಣೆಗೊಂಡ ಪೊಲೀಸರಿಗೆ ಬೀಳ್ಕೊಡುಗೆ

ಕಾರ್ಕಳ : ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಪೊಲೀಸರಿಗೆ ಜೂ. 21ರಂದು ಕಾರ್ಕಳ ಲಯನ್ಸ್‌ ಕ್ಲಬ್‌ ಸಮಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಎಎಸ್‌ಐ ನಾಗೇಶ್‌, ಹೆಡ್‌ಕಾನ್‌ಸ್ಟೇಬಲ್‌ಗಳಾದ ಮಂಜುನಾಥ ಅಡಿಗ, ವಿಶ್ವನಾಥ ನಾಯ್ಕ್‌, ವಸಂತಲಕ್ಷ್ಮೀ, ಅರುಣಾನಂದ, ಕಾನ್‌ಸ್ಟೇಬಲ್‌ಗಳಾದ ಸುರೇಶ್‌ ಆಚಾರ್ಯ, ನಾಗರಾಜ್‌, ಮಹಂತೇಶ್‌, ಗಣೇಶ್‌ ರೆಡ್ಡಿ, ಸುಧಾಕರ್‌ ಅವರು ವಿವಿಧ ಪೊಲೀಸ್‌ ಠಾಣೆಗಳಿಗೆ ವರ್ಗಾವಣೆಗೊಂಡಿದ್ದು ಅವರನ್ನು ಡಿವೈಎಸ್‌ಪಿ ವಿಜಯ ಪ್ರಸಾದ್‌, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಕಾರ್ಕಳ ನಗರ ಠಾಣೆ ಎಸ್‌ಐ ಪ್ರಸನ್ನ ಕುಮಾರ್‌ ಎಂ.ಎಸ್.‌, ಗ್ರಾಮಾಂತರ ಠಾಣೆಯ ಎಸ್‌ಐ ತೇಜಸ್ವಿ ಟಿ.ಐ., ಪ್ರೊಬೇಷನರಿ ಎಸ್‌ಐಗಳಾದ ಪರುಶುರಾಮ, ನಿಧಿ ಅವರು ಸನ್ಮಾನಿಸಿ ಬೀಳ್ಕೊಟ್ಟರು.





























































































































































































































error: Content is protected !!
Scroll to Top