ನಿಟ್ಟೆಯಲ್ಲಿ ಕಾರು ಬೈಕ್‌ ಅಪಘಾತ – ಸವಾರ ಸಾವು

ಇಂಜಿನೀಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಅತಿವೇಗಕ್ಕೆ ಅಮಾಯಕರು ಬಲಿ

ಕಾರ್ಕಳ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಕ್ರಾಸ್‌ ಬಳಿ ಕಾರೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸಾವಿಗೀಡಾದ ಘಟನೆ ಎ. 24ರ ಸಂಜೆ ಸಂಭವಿಸಿದೆ. ನಿಟ್ಟೆ ಸಮೀಪದ ಬಜಕಳ ನಿವಾಸಿ ನವೀನ್‌ಚಂದ್ರ ಮೂಲ್ಯ (45) ಮೃತಪಟ್ಟ ದುರ್ದೈವಿ.
ನವೀನ್‌ಚಂದ್ರ ಅವರು ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಪ್ರೇರಣ ಮೂಲ್ಯಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ಕಳದಿಂದ ನಿಟ್ಟೆಯತ್ತ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಎಸೆಯಲ್ಪಟ್ಟಿದ್ದು ನವೀನ್‌ಚಂದ್ರ ಹಾಗೂ ಪ್ರೇರಣ ಇಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನವೀನ್‌ಚಂದ್ರ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.























































error: Content is protected !!
Scroll to Top