ಕಾರ್ಕಳ : ಹೆಬ್ರಿ ತಾಲೂಕು ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಧರ ನಾಯಕ್, ಕಾರ್ಯದರ್ಶಿಯಾಗಿ ಪ್ರಸನ್ನ ಶೆಟ್ಟಿ ಅವರು ಆಯ್ಕೆಯಾಗಿರುತ್ತಾರೆ. ಇತ್ತೀಚೆಗೆ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರಾಗಿ ಸನತ್ ಕುಮಾರ್, ಶಾಂತಾ ದಿನೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಪೈ,
ಕೋಶಾಧಿಕಾರಿ ಶಶಿಕಲಾ ಡಿ. ಪೂಜಾರಿ, ಗೌರವ ಸಲಹೆಗಾರಾಗಿ ದಿವಾಕರ ಎನ್. ಶೆಟ್ಟಿ, ಮಂಜುನಾಥ ಪೂಜಾರಿ, ಗಣಪತಿ ಎಂ., ಸಂತೋಷ ಕುಮಾರ್ ಶೆಟ್ಟಿ, ಗೌರವಾಧ್ಯರಾಗಿ ಗುರುಪ್ರಸಾದ್ ಹೆಗ್ಡೆ, ಶ್ರೀಧರ ಹೆಬ್ಬಾರ್, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶುಭದರ ಶೆಟ್ಟಿ, ಸಂತೋಷ ಕುಮಾರ್ ಶೆಟ್ಟಿ, ರಮ್ಯಕಾಂತಿ, ಉದಯ ಹೆಗ್ಡೆ, ಉಮೇಶ ಪೂಜಾರಿ, ಪ್ರವೀಣ ಪೂಜಾರಿ, ಪ್ರೀತಂ ಜೆ. ಶೆಟ್ಟಿ, ಅಣ್ಣಪ್ಪ ಮುದ್ರಾಡಿ, ಸುನಿಲ್ ಸಮೃದ್ಧಿ, ಗಣೇಶ ಭಾಸ್ಕರ, ಸುರೇಶ ಶೆಟ್ಟಿಗಾರ್, ದೀಪಾ ಸಂತೋಷ ಶೆಟ್ಟಿ, ಸೋನಿಯಾ ಶೆಟ್ಟಿ, ಸುವರ್ಣಲತಾ ಸಂತೋಷ ಶೆಟ್ಟಿ, ಅಮೃತಾ ಪೂಜಾರಿ, ಶ್ವೇತಾ ಭಂಡಾರಿ ಅವರನ್ನು ಆಯ್ಕೆ ಮಾಡಲಾಯಿತು.
ಮುದ್ರಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀಧರ್ ನಾಯಕ್, ಕಾರ್ಯದರ್ಶಿಯಾಗಿ ಪ್ರಸನ್ನ ಶೆಟ್ಟಿ










