ಕಾರ್ಕಳ : ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ ಇದರ ವತಿಯಿಂದ ಸುಮಂತ್ ಜೋಶಿ ಅವರ ನೇತೃತ್ವದಲ್ಲಿ ಶ್ರಾವಣಮಾಸದ ಚೂಡಿ ಪೂಜಾ ವಿಧಾನ ಆ. 25ರಂದು ಕಾಶೀಮಠದಲ್ಲಿ ನಡೆಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಡಿ. ಪೈ ಹಾಗೂ ಪದಾಧಿಕಾರಿಗಳಾದ ಶ್ವೇತಾ ಶೆಣೈ, ರಾಧಿಕಾ ಶೆಣೈ, ವಂದನಾ ಶೆಣೈ, ವಾರಿಜಾ ವಿ. ಕಾಮತ್, ಲಲಿತಾ ಭಟ್, ರಾಖಿ ಭಟ್, ಸಂಧ್ಯಾ ಕಾಮತ್, ಪ್ರಜ್ಞಾ ಪೈ, ರೇಷ್ಮಾ ಶೆಣೈ, ಪ್ರಭಾ ನಾಯಕ ಹಾಗೂ ಸದಸ್ಯರು ವರಮಹಾಲಕ್ಷ್ಮಿ ದಿನದಂದು ದೇವಿಗೆ ಕುಂಕುಮಾರ್ಚನೆ ಅರ್ಪಿಸಿದರು.
ಜಿ.ಎಸ್. ಬಿ. ಮಹಿಳಾ ವಿಭಾಗದಿಂದ ಶ್ರಾವಣ ಮಾಸದ ಚೂಡಿ ಪೂಜೆ


































