ಕಾರ್ಕಳ : ಸಾಲ್ಮರದಲ್ಲಿ ಕಾರ್ಯಾಚರಿಸುತ್ತಿರುವ ಎಕ್ಸಿಸ್ ಬ್ಯಾಂಕ್ನಲ್ಲಿ ಸರ್ವೀಸ್ ಪಾಯಿಂಟ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಅ. 4ರ ಬೆಳಿಗ್ಗೆ ಸಂಭವಿಸಿದೆ. ತಕ್ಷಣವೇ ಬಿಲ್ಡಿಂಗ್ ಮಾಲಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ವರ್, ಇನ್ವರ್ಟರ್ ಸೇರಿ ಹಲವು ಎಲೆಕ್ಟ್ರಿಕಲ್ ಪರಿಕರಗಳು ಬೆಂಕಿಗಾಹುತಿಯಾಗಿದೆ. ಸಕಾಲಿನ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ ಸಂಜೀವ್, ಸಿಬ್ಬಂದಿ ಜಯ ಮೂಲ್ಯ ,ಕೇಶವ್ ,ಸುಜಯ್ , ಹಸನ್ ಸಾಬ್, ವಿನಾಯಕ ಪಾಲ್ಗೊಂಡಿದ್ದರು.
ಕಾರ್ಕಳ ಎಕ್ಸಿಸ್ ಬ್ಯಾಂಕ್ನಲ್ಲಿ ಬೆಂಕಿ ಅವಘಡ – ತಪ್ಪಿದ ಭಾರಿ ಅನಾಹುತ































