ಕಾರ್ಕಳ : ಈದು ಮುಗೇರಡ್ಕದಲ್ಲಿನ ಶ್ರೀ ಮಹಾಕಾಳಿ ದೇವಿಯ ನೂತನ ಗರ್ಭಗುಡಿಯ ಶಿಲಾನ್ಯಾಸವನ್ನು ದೈವಸ್ಥಾನದ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಗುರುಪ್ರಸಾದ್ ನಾರಾವಿ ಮಾ. 17 ರಂದು ನೆರವೇರಿಸಿದರು. ವೇದಮೂರ್ತಿ ಶ್ರೀ ಜಯರಾಮ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಸಮಿತಿಯ ಸದಸ್ಯರಾದ ಕೃಷ್ಣ ದೇವಾಡಿಗ, ಅಶೋಕ್ ಎಂ. ಕೆ., ಅಶೋಕ್ ದೇವಾಡಿಗ, ಯಶೋಧರ ದೇವಾಡಿಗ, ಪ್ರವೀಣ್ ದೇವಾಡಿಗ, ಪ್ರದೀಪ್ ಎಂ. ಕೆ., ಭರತ್ ದೇವಾಡಿಗ, ಪ್ರಸಾದ್ ಪೂಜಾರಿ, ಗೋಪಾಲ್ ಆಚಾರ್ಯ, ಸಂದೀಪ್ ಪೂಜಾರಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.