ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ಒದಗಿಸುವಂತೆ ಮನವಿ

ಕಾರ್ಕಳ : ಲಾಕ್‌ ಡೌನ್‌ ಪರಿಣಾಮ ಕೆಲವೊಂದು ಖಾಸಗಿ ಶಾಲಾ ಶಿಕ್ಷಕರಿಗೆ ಸರಿಯಾಗಿ ವೇತನ ಪಾವತಿಯಾಗಿಲ್ಲ. ಹೀಗಾಗಿ ಖಾಸಗಿ ಶಾಲಾ ಶಿಕ್ಷಕರಿಗೂ ಸರಕಾರದಿಂದ ಪರಿಹಾರ ಒದಗಿಸುವಂತೆ ಸರಕಾರದ ಸಚೇತಕ ವಿ. ಸುನಿಲ್‌ ಕುಮಾರ್‌ ಅವರಿಗೆ ರಾಜ್ಯ ಖಾಸಗಿ ಶಿಕ್ಷಕರ ಬಳಗ ತಾಲೂಕು ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ಕೆ. ತಾಲೂಕು ಘಟಕದ ಅಧ್ಯಕ್ಷೆ ವಿಜೇತ ರಾಣಿ, ಕಾರ್ಯದರ್ಶಿ ನವೀನ್‌ ಅಗ್ಗಿಮಾರ್‌, ಉಡುಪಿ ಜಿಲ್ಲಾ ಘಟಕದ ಖಜಾಂಚಿ ಗೌತಮ್, ಶಿಕ್ಷಕರಾದ ಪ್ರಸಾದ್, ಸಂಧ್ಯಾ, ಸೌಮ್ಯ, ನಮಿತಾ ಈ ಸಂದರ್ಭದಲ್ಲಿದ್ದರು.

































































































error: Content is protected !!
Scroll to Top