• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಮಿಸ್‌ ಗೆ ಈ ವರ್ಷ ಎಲ್ಲವೂ “ಮಿಸ್‌”

ಕೊರೊನಾ ಯಾವಾಗ ಮುಗಿಯುತ್ತದೆಯೋ ಶಾಲೆಗಳು ಯಾವಾಗ ಆರಂಭವಾಗುತ್ತದೆಯೋ ಎಂದು ಚಾತಕ ಪಕ್ಷಿಯಂತೆ ಕಾದು ಸಾಕಾಗಿದೆ. ಭರವಸೆ ಹೊರಟು ಹೋಗಿದೆ. ಆದ್ದರಿಂದ ಈ ವರ್ಷದ ಶಿಕ್ಷಕರ ದಿನಾಚರಣೆ ನಮ್ಮಂಥ ಶಿಕ್ಷಕರಿಗೆ ನೋವು ಮಾತ್ರ ಕೊಡುತ್ತದೆ. ಈ ವರ್ಷಕ್ಕೆ ಸಂಭ್ರಮಾಚರಣೆ ಇಲ್ಲ. ***         ಪ್ರತಿ ವರ್ಷದಂತೆ ಈ ವರ್ಷವೂ ಶಿಕ್ಷಕ ದಿನಾಚರಣೆ ಬಂದಿದೆ. ಆದರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರ ಮನಸಿನಲ್ಲಿ ಇಂದು ಸೂತಕದ ಕಳೆ. ಸಂಭ್ರಮಿಸುವ ಖುಷಿಯಲ್ಲಿ ಯಾವ ಶಿಕ್ಷಕರೂ ಇಲ್ಲ. ಕೊರೊನಾ ಕಾರಣಕ್ಕೆ ಶಾಲೆಗಳು ಮುಚ್ಚಿವೆ.

ಮಿಸ್‌ ಗೆ ಈ ವರ್ಷ ಎಲ್ಲವೂ “ಮಿಸ್‌” Read More »

ಮೌನಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು

(ಯುವ ಲೇಖಕ ದೀಪಕ್‌ ಬೀರ ಪಡುಬಿದ್ರಿ ಅವರು ನಾರಾಯಣ ಗುರು ಜಯಂತಿ ನಿಮಿತ್ತ newskarkala.comಗೆ ಬರೆದ ವಿಶೇಷ ಲೇಖನ)ಜಾತ್ಯಾತೀತ ಮನೋಭಾವದಿಂದ ಸರ್ವಜಾತಿ ಬಾಂಧವರನ್ನೂ ಸಮನಾಗಿ ಸ್ವೀಕರಿಸಿ ಸಮಾಜದಲ್ಲಿ ತುಳಿತಕ್ಕೆ ಒಳಪಟ್ಟವರಿಗೆ ಶಕ್ತಿಯನ್ನು ತುಂಬಿದ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಅಮರ ಸಂದೇಶವನ್ನು ನೀಡಿ ವಿಶ್ವ ಪ್ರಸಿದ್ಧರಾದ ಈ ಮಹಾನ್ ವ್ಯಕ್ತಿ ಬೇರಾರೂ ಅಲ್ಲ. ಅವರೇ ಮಹಾಸಂತ, ದಾರ್ಶನಿಕ, ಸಮಾಜ ಸುಧಾರಕ, ವಿಶ್ವ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು. ಆಧ್ಯಾತ್ಮಿಕ ಸಾಧಕ ರಾಗಿದ್ದ

ಮೌನಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು Read More »

ಶೋಷಿತರ ಧ್ವನಿಯಾದ ನಾರಾಯಣ ಗುರು

(ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್‌ ನಾರಾಯಣ ಗುರು ಜಯಂತಿ ನಿಮಿತ್ತ newskarkala.comಗೆ ಬರೆದ ವೊಶೇಷ ಲೇಖನ) ಒಂದು ದೇಶದ ಇತಿಹಾಸವನ್ನು ಕೆದಕಿದಾಗ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್‌ ಸಾಧಕರು ಬಹಳಷ್ಟು ಮಂದಿ ಕಾಣಸಿಗುತ್ತಾರೆ. ನೆಲ, ಜಲ ಮತ್ತು ಸಂಸ್ಕೃತಿಯೊಂದಿಗೆ ಮಿಳಿತವಾದ ನಮ್ಮ ಬದುಕು ಪರಂಪರೆಯ ಕೊಂಡಿಯೊಂದಿಗೆ ಬೆಸೆದಿರುತ್ತದೆ. ಈ ಪರಂಪರೆಯು ಕೆಲವೊಮ್ಮೆ ಜಾತಿ, ಮತ, ಧರ್ಮದ ಹಿನ್ನೆಲೆಯಲ್ಲಿ ಸ್ವಹಿತದ ಕಾರ್ಯವನ್ನು ಕಾಯ್ದುಕೊಂಡು ಬಂದಿರುವುದು ಉಂಟು. ಹೀಗಿರುವಾಗ ಭಾರತದಲ್ಲಿ ಪರಂಪರೆಯನ್ನು ಸೃಷ್ಟಿಸಿದ ಮತ್ತು ಸಂಸ್ಕೃತಿಯಲ್ಲಿ ಸಾಕಷ್ಟು ದೋಷಗಳನ್ನು

ಶೋಷಿತರ ಧ್ವನಿಯಾದ ನಾರಾಯಣ ಗುರು Read More »

ವಿಶಿಷ್ಟ ವಿಚಾರಧಾರೆಯ ರಾಜಕಾರಣಿ ಪ್ರಣಬ್ ಮುಖರ್ಜಿ

ಬಂಗಾಳದ ಹಳೆಯ ಹುಲಿ ಪ್ರಣಬ್ ಮುಖರ್ಜಿ ಅವರದು ವಿಶಿಷ್ಟವಾದ ವೃತ್ತಿಬದುಕು. ಕೆಳಮಟ್ಟದ ರಾಜಕೀಯದಿಂದ ರಾಷ್ಟ್ರಪತಿ ಹುದ್ದೆಯ ತನಕ ರಾಜಕೀಯ ರಂಗದಲ್ಲಿ ಮಿಂಚಿದವರು ಅವರು. ಸುಮಾರು 5 ದಶಕಗಳ ಸಾರ್ವಜನಿಕ ಬದುಕಿನಲ್ಲಿ ಹಲವು ಬಾರಿ ಕೇಂದ್ರದಲ್ಲಿ ಮಂತ್ರಿಯಾಗಿ ಅಪಾರ ಅನುಭವ ಪಡೆದಿರುವ ಪ್ರಣಬ್ ಸೈದ್ಧಾಂತಿಕ  ವಿರೋಧ ಇದ್ದವರ  ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಸಂಪಾದಿಸಿಕೊಂಡವರು. ಪ್ರಣಬ್ ಮುಖರ್ಜಿ ಅವರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರೂ ಅದರಲ್ಲಿ ಅವರ ಅರ್ಥಪೂರ್ಣವಾದ  ಬದುಕಿನ ಅನಾವರಣವಾಗುತ್ತದೆ. ಪ್ರಣಬ್ ಅವರು ಸಾರ್ವಜನಿಕ ಜೀವನದಲ್ಲಿ ಹಲವು ರೀತಿಯ 

ವಿಶಿಷ್ಟ ವಿಚಾರಧಾರೆಯ ರಾಜಕಾರಣಿ ಪ್ರಣಬ್ ಮುಖರ್ಜಿ Read More »

ಪ್ರಾದೇಶಿಕ ಪಕ್ಷಗಳ ಉಗಮ, ಉತ್ಥಾನ, ಅವಸಾನ ಇತ್ಯಾದಿಗಳ ಕುರಿತು…

      ಕನಾ೯ಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷ ಕಟ್ಟುವವರು ಗಂಭೀರವಾಗಿ ಆಲೋಚಿಸಬೇಕಾದ ಹಲವು ವಿಚಾರಗಳ ಬಗ್ಗೆ ಚಿಂತನೆ ನಡೆಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಕನಾ೯ಟಕದಲ್ಲಿ ಪ್ರಾದೇಶಿಕ ಪಕ್ಷ ಹುಟ್ಟು ಹಾಕುವವರ ತಲೆಗೆ ಮೊದಲು ಸುಳಿಯುವುದು ಆಂಧ್ರಪ್ರದೇಶ,ತಮಿಳುನಾಡು, ದಿಲ್ಲಿ ಹಾಗೂ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ತಲೆ ಎತ್ತಿ ಬಂದಿರುವ ಪ್ರಾದೇಶಿಕ ಪಕ್ಷಗಳು.ಈ ಎಲ್ಲ ಉದಾಹರಣೆಗಳನ್ನು ಇಟ್ಟುಕೊಂಡು ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ಸು ಕಾಣಲು ಸಾಧ್ಯವೇ ಅನ್ನುವುದು ನಮ್ಮ ಮುಂದಿರುವ ಬಹು ದೊಡ್ಡ ಪ್ರಶ್ನೆ.        ಮೊದಲಾಗಿ ನಾವು ಗಮನ ಹರಿಸಬೇಕಾದದ್ದು

ಪ್ರಾದೇಶಿಕ ಪಕ್ಷಗಳ ಉಗಮ, ಉತ್ಥಾನ, ಅವಸಾನ ಇತ್ಯಾದಿಗಳ ಕುರಿತು… Read More »

ಮನುಷ್ಯ ಸಂಬಂಧಗಳಿಗೆ ವಿನೂತನ ವ್ಯಾಖ್ಯಾನ ಬರೆದ ಕೊರೋನಾ

ಬರಹ : ಮೋಹನದಾಸ್‌ ಕಿಣಿ, ಕಾಪು kini.mohandas@gmail.comಅಸ್ಪೃಶ್ಯತೆಯೆಂಬುದು  ಕೇವಲ ನಮ್ಮ ದೇಶಕ್ಕೆ ಸೀಮಿತವಾಗಿಲ್ಲ. ಒಂದರ್ಥದಲ್ಲಿ ಅದು ವಿಶ್ವವ್ಯಾಪಿ. ನಮ್ಮ ದೇಶದಲ್ಲಿ ಇರುವ ಅಸ್ಪೃಶ್ಯತೆ  ಜಾತಿ ಆಧಾರಿತವಾದರೆ, ವಿಶ್ವದ ಕೆಲವು ದೇಶಗಳಲ್ಲಿ ಅದು ಜನಾಂಗೀಯ ತಾರತಮ್ಯದ ರೂಪದಲ್ಲಿದೆ. ಎರಡನೇಯದಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಿರುವ ಬಹುತೇಕ ದೇಶಗಳಲ್ಲಿ ಸಮಾನತೆ ಎಂಬುದು ಇದೆಯಾದರೂ ದೇಶದಿಂದ ದೇಶಕ್ಕೆ ಇದರ ವ್ಯಾಖ್ಯಾನ ಕೂಡಾ ಬೇರೆ ಬೇರೆ ರೀತಿಯಲ್ಲಿ ಇದೆ. ಆದರೆ ಈಗ ಇದೆರಡರ ವ್ಯಾಖ್ಯಾನವನ್ನು ಒರೆಸಿ ಗುಡಿಸಿ ವಿನೂತನ ವ್ಯಾಖ್ಯೆ ಬರೆದಿದೆ, ಈ ಕೊರೋನಾ

ಮನುಷ್ಯ ಸಂಬಂಧಗಳಿಗೆ ವಿನೂತನ ವ್ಯಾಖ್ಯಾನ ಬರೆದ ಕೊರೋನಾ Read More »

ಕಾರ್ಕಳ : ಸಿನಿಮಾ ಶೂಟಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ-ಚಲನಚಿತ್ರ ನಿರ್ದೇಶಕ ಸುಧೀರ್‌ ಶ್ಯಾನ್‌ಬೋಗ್‌ ಅಭಿಮತ

ಕಾರ್ಕಳದವರೇ ಆದ ಸುಧೀರ್‌ ಶಾನ್‌ಭೋಗ್‌ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಸಿನೇಮಾ ಕ್ಷೇತ್ರದಲ್ಲಿ ನಿರ್ದೇಶಕನಾಗಿ, ಕತೆಗಾರನಾಗಿ, ಕ್ರಿಯೇಟಿವ್‌ ಹೆಡ್‌ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ನಿರ್ದೇಶನದ ಮತ್ತು ವಿನಯ್‌ ರಾಜ್‌ಕುಮಾರ್‌ ಅಭಿನಯದ ಅನಂತು v/s ನುಸ್ರತ್‌ ತುಂಬ ಸುದ್ದಿ ಮಾಡಿತ್ತು. ಅದೇ ರೀತಿ ಅವರು ಕತೆ ಬರೆದಿರುವ ಅಳಿದುಳಿದವರು, ನಿರ್ಮಾಣ ವಿನ್ಯಾಸ ಮಾಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ತುಳು ಸಿನೇಮಾ ಮದಿಪು, ಸಿಂಪಲ್ಲಾಗಿ ಇನ್ನೊಂದು ಲವ್‌ ಸ್ಟೋರಿ, ತುಳು ಸಿನೇಮಾ ಗೋಲ್‌ಮಾಲ್‌ ಅವರಿಗೆ ಬಹಳ

ಕಾರ್ಕಳ : ಸಿನಿಮಾ ಶೂಟಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ-ಚಲನಚಿತ್ರ ನಿರ್ದೇಶಕ ಸುಧೀರ್‌ ಶ್ಯಾನ್‌ಬೋಗ್‌ ಅಭಿಮತ Read More »

ಇರಲಿ ರಾಜಕಾರಣಿಗಳಿಗೂ ಒಂದು ಪರೀಕ್ಷೆ

ಇದನ್ನು ಓದಿದವರು ಒಳ್ಳೆಯ ಜೋಕ್ ಕೇಳಿದಂತೆ ನಗಬಹುದು. ಏಕೆಂದರೆ ಒಂದು ವೇಳೆ ತಿರುಕನ ಕನಸು ನಿಜವಾದರೂ ಆಗಬಹುದು, ಆದರೆ ಇದು ಮಾತ್ರ ಎಂದಿಗೂ ನನಸಾಗಲಾಗದ ಕನಸು. ಅದೇನನ್ನುತ್ತೀರಾ, ನೋಡಿ: ಸರಕಾರಿ ಉದ್ಯೋಗವಿರಲಿ, ಖಾಸಗಿ ಉದ್ಯೋಗವಿರಲಿ, ಪ್ರತಿಯೊಂದು ಹುದ್ದೆಗೂ ನಿರ್ದಿಷ್ಟ ವಿದ್ಯಾರ್ಹತೆಯ ಅಗತ್ಯವಿದೆ. ದೈಹಿಕವಾಗಿ ಅರ್ಹತೆಯಿರಬೇಕು. ಸರಕಾರದ ಯಾವುದೇ ಕಚೇರಿಯಲ್ಲಿ ಜವಾನ ಹುದ್ದೆಗಾಗಲೀ ಅಷ್ಟೇಕೆ ಕಾವಲುಗಾರ ಹುದ್ದೆಗೂ ಕನಿಷ್ಟ ಹತ್ತನೆ ತರಗತಿ ತೇರ್ಗಡೆಯಾಗಿರಬೇಕು. ಸರಕಾರಿ ಉದ್ಯೋಗಕ್ಕೆ ಕೇವಲ ವಿದ್ಯಾರ್ಹತೆ ಮಾತ್ರ ಸಾಲದು, ಸ್ಪರ್ಧಾತ್ಮಕ ಪರೀಕ್ಷೆ, ಬಳಿಕ (ಸೈನಿಕರ ಮತ್ತು

ಇರಲಿ ರಾಜಕಾರಣಿಗಳಿಗೂ ಒಂದು ಪರೀಕ್ಷೆ Read More »

ಖಾಸಗಿ ಕಾಲೇಜುಗಳ ಖಾಯಂ ಉಪನ್ಯಾಸಕರಿಗೆ ಪಿಂಚಣಿ ಸಿಕ್ಕೀತೇ?

ಪಿಂಚಣಿ ಪ್ರತಿಯೊಬ್ಬ ನೌಕರನ ಬದುಕಿನ ಹಕ್ಕುಅನ್ನುವುದನ್ನು ಸುಪ್ರೀಂ  ಕೋರ್ಟ್‌  ತೀಪು೯ ಹೇಳಿದೆ. ಆದರೆ ಇಂದು ಕರ್ನಾಟಕದಲ್ಲಿ ಈ ಬದುಕಿನ ಹಕ್ಕಿನಿಂದ ವಂಚಿತರಾಗುತ್ತಿರುವವರು ಸರಕಾರದಿಂದ ಸಂಬಳ ಪಡೆಯುವ ಖಾಸಗಿ ಕಾಲೇಜಿನ ಖಾಯಂ ಉಪನ್ಯಾಸಕರು ಅನ್ನುವುದು ಆಶ್ಚರ್ಯವಾದರೂ ಸತ್ಯ. ಇದು ಹೇಗೆ ? ಯಾಕೆ ? ಎಲ್ಲಿ? ಎನ್ನು ವುದರ ಕರಾಳ ಪರಿಚಯ ಇಲ್ಲಿದೆ. 1993-94ರಲ್ಲಿ ಖಾಸಗಿ ಪ್ರಥಮ ದಜೆ೯ ಕಾಲೇಜುಗಳ  ಅರೆಕಾಲಿಕ ಉಪನ್ಯಾಸಕರನ್ನು ಖಾಯಂಗೊಳಿಸಲು ಸುಪ್ರೀಂ ಕೋರ್ಟ್‌ ನೀಡಿದ  ತೀಪಿ೯ನಂತೆ ಸಾವಿರಕ್ಕೂ ಮಿಕ್ಕಿ ಉಪನ್ಯಾಸಕರನ್ನು ಖಾಯಂಗೊಳಿಸುವ ಆದೇಶವನ್ನು  2004/05

ಖಾಸಗಿ ಕಾಲೇಜುಗಳ ಖಾಯಂ ಉಪನ್ಯಾಸಕರಿಗೆ ಪಿಂಚಣಿ ಸಿಕ್ಕೀತೇ? Read More »

ನಮ್ಮ ಸ್ವಾತಂತ್ರ್ಯೋತ್ಸವ ಪ್ರಗತಿಗೆ ಇಂಧನ ಒದಗಿಸುವಂತಿರಲಿ

ಅಮೃತೋತ್ಸವದೆಡೆಗೆ ಸಮೀಪವತಿ೯ಯೆನಿಸಿದ ಈ ಬಾರಿಯ ನಾಡಬಿಡುಗಡೆಯ ಹಬ್ಬ ಪ್ರಾಯಶಃ ಮುಂಬರುವ ಭಾರತ ಇತಿಹಾಸದಲ್ಲೇ ಉಲ್ಲೇಖನಾಹ೯ ಎನಿಸುವಂತಹದು. ಸಾಮಾಜಿಕ ಅಂತರದ, ಮುಖಪಟಲನದ, ಜನವಿರಳತೆಯ, ಬಾಹ್ಯ ಆಚರಣೆಯ ಸರಳತೆ ತುಂಬಿ ನಿಂತ 74ರ ಸ್ವಾತಂತ್ರ್ಯ ಉತ್ಸವ ಈ ಬಾರಿ ನಮ್ಮದು. ವಿಶ್ವ ಕುಟುಂಬದ ನೋವು-ನಲಿವುಗಳ ಅವಿಭಾಜ್ಯ ಸಂಗಾತಿತ್ವ ನಮ್ಮ ಭಾರತದ ಪಾಲಿಗೂ ಇದೆ. ಅಂತೆಯೇ ಕೊರೊನಾಬ್ಬರ ಬರಸಿಡಿಲು ನಮ್ಮ ನೆಲವನ್ನು ನಲುಗಿಸಿದೆ. ಕೊರನಾಪೂವ೯, ಕೊರನೋತ್ತರದ ಮಧ್ಯದ ಸಂಧಿಕಾಲದ ಈ ತೆರನಾದ ವಿಲಕ್ಷಣ ಸನ್ನಿವೇಶದಲ್ಲಿ ನಾವಿಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ,  ಅರುಣಾಚಲದಿಂದvಸೌರಾಷ್ಟ್ರದವರಗೆ ತ್ರಿವಣ೯

ನಮ್ಮ ಸ್ವಾತಂತ್ರ್ಯೋತ್ಸವ ಪ್ರಗತಿಗೆ ಇಂಧನ ಒದಗಿಸುವಂತಿರಲಿ Read More »

error: Content is protected !!
Scroll to Top