ಇಂದು ರಕ್ಷಾ ಬಂಧನ
ಶ್ರಾವಣ ಮಾಸದ ಹುಣ್ಣಿಮೆ ಬಂದಿತೆಂದರೆ ಹಿಂದೂಗಳಿಗೆ ರಕ್ಷಾ ಬಂಧನದ ಹಬ್ಬ! ಅಂದು ಪ್ರತೀ ಓರ್ವ ಹೆಣ್ಣು ತನ್ನ ಅಣ್ಣನಿಗೆ ರಕ್ಷೆ ಕಟ್ಟಿ ಶತ್ರುಗಳಿಂದ ರಕ್ಷಣೆಯನ್ನು ಪಡೆಯುವುದು ಇದರ ಉದ್ದೇಶ. ಅಣ್ಣ ತಂಗಿ ಅಂದರೆ ರಕ್ತ ಸಂಬಂಧವೇ ಬೇಕೆಂದಿಲ್ಲ. ಜಾತಿ, ಮತಗಳ ಭೇದ ಬರುವುದಿಲ್ಲ. ಈ ಪದ್ಧತಿ ಪ್ರಾಯಶಃ ರಜಪೂತರ ಕಾಲದಲ್ಲಿ ಪ್ರಾಮುಖ್ಯತೆ ಪಡೆಯಿತು. ಒಂದು ಕಡೆ ಮೊಘಲರ ದಾಳಿ ಮತ್ತೊಂದೆಡೆ ಅಲ್ಲಾವುದ್ದೀನ್ ಖಿಲ್ಜಿ ಅಂತಹ ಆಕ್ರಮಣಕಾರರ ದಾಳಿಯಿಂದ ಹೆಣ್ಮಕ್ಕಳು ಸಂತ್ರಸ್ತರಾದ ಸಂದರ್ಭದಲ್ಲಿ ತಮ್ಮ ಮಾನವನ್ನು ಉಳಿಸಿಕೊಳ್ಳಲು ರಕ್ಷಾಬಂಧನದ […]







