ಕಾರ್ಕಳ : ಕಾಷ್ಠಶಿಲ್ಪಿ, ನೀರೆ ಬೈಲೂರು ಗ್ರಾಮದ ಕಲ್ಲೋಟೆ ನಿವಾಸಿ ಕೇಶವ ಆಚಾರ್ಯ (86 ವ) ಅವರು ಸೆ. 3ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಬೈಲೂರು ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಸದಸ್ಯರಾಗಿದ್ದ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಬೈಲೂರು ಮಾರಿಗುಡಿ ದೇವಸ್ಥಾನದ ದೇವಿಯ ವಿಗ್ರಹವನ್ನು ಕಳೆದ 50 ವರ್ಷಗಳಿಂದ ಮಾಡುತ್ತಾ ಬಂದಿರುತ್ತಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಸೆ. 4ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಶಿಲ್ಪಿ ಕೇಶವ ಆಚಾರ್ಯ ನಿಧನ


















