ಕಾರ್ಕಳ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೆಲಿಕೆದ ಅರಸೆ ಖ್ಯಾತಿಯ ಚಲನಚಿತ್ರ ನಟ, ರಂಗ ನಿರ್ದೇಶಕ, ಸಂಭಾಷಣೆಗಾರ ಬೈಲೂರು ಪ್ರಸನ್ನ ಶೆಟ್ಟಿ ಅವರ ಕಥೆ, ರಚನೆ ಮತ್ತು ನಿರ್ದೇಶನದ, ಚೈತನ್ಯ ಕಲಾವಿದರು ಬೈಲೂರು ತಂಡದ ನೂತನ ಹಾಸ್ಯಮಯ ತುಳು ನಾಟಕ ʼಊರು ಬೋಡು ಪುದರ್ ಬೊಡ್ಚಿʼ ಇದರ ಮೂಹೂರ್ತ ಜು. 16ರಂದು ಬೈಲೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭ ಪ್ರಸನ್ನ ಶೆಟ್ಟಿ ಬೈಲೂರು, ಅರ್ಚಕರಾದ ನಾರಾಯಣ ಭಟ್ ಕೌಡೂರು, ಕೌಡೂರು – ನಾಯರ್ಬೆಟ್ಟು ಪದ್ಮರಾಜ್ ಹೆಗ್ಗಡೆ, ಹರಿಜೀವನ್ ಹೆಗ್ಗಡೆ, ಗುಣಕರ ಶೆಟ್ಟಿ ಕೌಡೂರು, ಹರೀಶ್ ಶೆಟ್ಟಿ ಸನ್ನಿಧಿ, ಕಾಪು ರಂಗತರಂಗ ತಂಡದ ಸಂಗೀತ ನಿರ್ದೇಶಕ ಶರತ್ ಉಚ್ಚಿಲ, ಪ್ರಸಾದ್ ಐಸಿರ, ಸದಾನಂದ ಸಾಲ್ಯಾನ್, ಗುರುರಾಜ್ ಮಾಡ ಬೈಲೂರು, ದಿಲೀಪ್ ಶೆಟ್ಟಿ ಬೈಲೂರು, ಸುರೇಶ್ ಶೆಟ್ಟಿ ಸಾಯಿರಾಮ್, ರಾಜೇಂದ್ರ ಶೆಟ್ಟಿ ನೀರೆ, ವಿಶ್ವೇಶ್ ದೇವಾಡಿಗ ಅನ್ಯಾರ್ಕಟ್ಟೆ ಹಾಗೂ ಚೈತನ್ಯ ತಂಡದ ಕಲಾವಿದರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.































